ಕೊಪ್ಪಳ:'ಯಡಿಯೂರಪ್ಪ ಏನ್ ಸತ್ಯ ಹರಿಶ್ಚಂದ್ರನಾ?ಅವರು ಎಲ್ಲಿ ಇರ್ತಾರೆ, ಎಲ್ಲಿ ಮಲಗುತ್ತಾರೆ ಎಂಬುದು ನಮಗೂ ಗೊತ್ತು. ಅದು ಅವರ ವೈಯಕ್ತಿಕ ವಿಷಯ. ಹೀಗಾಗಿ ನಾವು ಆ ಬಗ್ಗೆ ಹೇಳುವುದಿಲ್ಲ. ಅಧಿಕಾರದಲ್ಲಿದ್ದಾಗ ಅವರು ಏನೇನ್ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.