‘9 ತಿಂಗಳ ಹಿಂದೆ ಬೆಂಗಳೂರಿನಿಂದ ಕಲ್ಲಿಕೋಟೆಗೆ ಕೇವಲ 4 ಗಂಟೆ 10 ನಿಮಿಷದಲ್ಲಿ 380 ಕಿ.ಮೀ. ಕ್ರಮಿ
ಸಿದ್ದೆ. ಆಗಲೂ ‘ಝೀರೋ ಟ್ರಾಫಿಕ್’ ಪ್ರಯೋಜನಕ್ಕೆ ಬಂದಿತ್ತು. ಬುಧವಾರ ಸಂಜೆ 6 ಗಂಟೆಗೆ ನನಗೆ ಮಾಹಿತಿ ನೀಡಿದ್ದರು. ರಾತ್ರಿ 12 ಗಂಟೆಗೆ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ಮಂಗಳೂರು ತಲುಪಿದ್ದೆ. ಇಲ್ಲಿಂದ ಮಧ್ಯಾಹ್ನ12.05ಕ್ಕೆ ಮಗು, ತಂದೆ, ತಾಯಿ ಮತ್ತು ಸಂಬಂಧಿಕರನ್ನು ಕರೆದುಕೊಂಡು ಹೋಗಿದ್ದೆವು. ಆಮ್ಲಜನಕ (ಆಕ್ಸಿಜನ್) ಬದಲಾಯಿಸಲು ದಾರಿ ಮಧ್ಯೆ 10 ನಿಮಿಷ ನಿಲ್ಲಿಸಬೇಕಾಗಿ ಬಂತು’ ಎಂದರು.