ಚಾಕೊಲೇಟ್, ಕುಟ್ಟಂಡಿ ದೆವ್ವದ ಕಥೆ ಇತ್ಯಾದಿ...
ಬೆಳಿಗ್ಗೆ ಬೇಗೆದ್ದು, ಗಂಗರೈತ ಕಟ್ಟಿದ ಎತ್ತಿನ ಗಾಡಿಯಲ್ಲಿ ಕೂತು ಹೊಲಕ್ಕೆ ಹೋಗಿ, ಅವರೆಕಾಯಿ ಬಿಡಿಸಿತಂದು, ತರಚಿದ ಕೈಕಾಲುಗಳಿಗೆ, ಎಣ್ಣೆ ಸವರಿ, ಉರಿಯಾದರೂ, ಊಟಕ್ಕೆ, ಅವರೆ ಕಾಯಿ ಹುಳಿ, ಮುದ್ದೆ ನುಂಗುವಾಗ, ಖುಷಿಯೋ, ಖುಷಿ. ಅಜ್ಜಿ ಆರಿಸಿ ಕೊಟ್ಟ ಎಳೆಯ ಅವರೇ ಕಾಳುಗಳನ್ನು ಕಡ್ಡಿಗೆ ಪೋಣಿಸಿ, ಅದನ್ನು ಕೆಂಡದ ಮೇಲೆ ಸುಟ್ಟು ಉಪ್ಪು, ತುಪ್ಪ ಸವರಿ ಸವಿಯುತ್ತಿದ್ದೆವು.Last Updated 20 ಜುಲೈ 2019, 19:30 IST