ಸುಂಟಿಕೊಪ್ಪದಲ್ಲೊಂದು ‘ಕನ್ನಡ ವೃತ್ತ’
ಸುಂಟಿಕೊಪ್ಪ: ಕನ್ನಡದ ಮೊದಲ ಕತೆಗಾರ್ತಿ ಕೊಡಗಿನ ಗೌರಮ್ಮ ತಮ್ಮ ಸಾಹಿತ್ಯವನ್ನು ಆರಂಭಿಸಿದ ತವರೂರು ಹಾಗೂ ಸೌಹಾರ್ದ ಸಾರಿದ ಪುಟ್ಟ ಊರು ಸುಂಟಿಕೊಪ್ಪ. ಇಲ್ಲಿನ ಜನರು ಜಾತಿ, ಭೇದವಿಲ್ಲದೇ ಎಲ್ಲ ಹಬ್ಬಗಳನ್ನು ಸಂತೋಷ, ಸಂಭ್ರಮದಿಂದ ಆಚರಿಸುತ್ತಾರೆ. ಇಲ್ಲಿ ನೆಲೆಸಿರುವ ವಿವಿಧ ಜನಾಂಗದವರು ಒಟ್ಟಾಗಿ ಸೇರಿ ಸುಂಟಿಕೊಪ್ಪದ ಹೃದಯಭಾಗದಲ್ಲಿ ನಿರ್ಮಿಸಿರುವ ‘ಕನ್ನಡ ವೃತ್ತ’ವು ಕನ್ನಡದ ಮೇಲೆ ಇಟ್ಟಿರುವ ಅಭಿಮಾನವನ್ನು ಸಾರಿ ಹೇಳುತ್ತಿದೆ.Last Updated 31 ಅಕ್ಟೋಬರ್ 2019, 19:30 IST