ಸಮಾಜ ಸುಧಾರಕ ಸೇವಾಲಾಲ್: ಇಂದು ಸೇವಾಲಾಲ್ ಜಯಂತಿ– ವಿಶೇಷ ಲೇಖನ
ಬಂಜಾರ ಜನಾಂಗದಿಂದ ಪೂಜಿಸಲ್ಪಡುತ್ತಿರುವ ಸೇವಾಲಾಲರು 1739ರಲ್ಲಿ ಕರ್ನಾಟಕದ ದಾವಣಗೆರೆ ಜಿಲ್ಲೆಯ ಸೂರಗೊಂಡನಕೊಪ್ಪದಲ್ಲಿ ಭೀಮಾನಾಯ್ಕ್ ಮತ್ತು ಧರ್ಮಿಣಿಬಾಯಿಯ
ವರಿಗೆ ಜನಿಸಿದರು. ಬಂಜಾರರು ಹಾಡುವ ಲಾವಣಿ ಪದಗಳಲ್ಲಿ, ಕೋಲಾಟದ ಹಾಡುಗಳಲ್ಲಿ, ವಾಜ, ಮದುವೆ–ಹಬ್ಬಹರಿದಿನಗಳಲ್ಲಿ ಹಾಡುವ ಹಾಡುಗಳಲ್ಲಿ ಜನಾಂಗದ ಇತಿಹಾಸವು ಅಡಗಿತ್ತು, ಅದನ್ನು ಸೇವಾಲಾಲರು ತಿಳಿದುಕೊಂಡಿದ್ದರು.
ಲದೇಣಿ (ಸರಕು ಸಾಗಾಣಿಕೆ) ಮೂಲಕ ಸೇವಾಲಾಲರು ಕೂಡ ಸಾವಿರಾರು ಜನರು ಇರುವ ತಮ್ಮದೇ ತಂಡವನ್ನು ಕಟ್ಟಿಕೊಂಡರು. ಆಗಿನ ವಸಾಹತುಶಾಹಿಗಳಿಂದ ಎದುರಾದ ಅನೇಕ ಸವಾಲುಗಳನ್ನು ಎದುರಿಸುತ್ತಲೇ ಸಾವಿರಾರು ಗೋವುಗಳೊಂದಿಗೆ ಸಂಚಾರ ಮಾಡುತ್ತಾ ಇಡೀ ದೇಶವನ್ನೇ ಸುತ್ತಿದರು. ದುಶ್ಚಟಗಳಿಗೆ ಬಲಿಯಾಗಿದ್ದ ತನ್ನ ಸಮುದಾಯದ ಜನರನ್ನು ತಿದ್ಧಿ, ಬುದ್ಧಿ ಹೇಳಿದರು.Last Updated 15 ಫೆಬ್ರುವರಿ 2023, 3:27 IST