ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Veterinary Doctors

ADVERTISEMENT

ಅರಕಲಗೂಡು: ಹಸುಗೆ ಶಸ್ತ್ರಚಿಕಿತ್ಸೆ ನಡೆಸಿ ಕರು ರಕ್ಷಿಸಿದ ಪಶು ವೈದ್ಯರು

ಅರಕಲಗೂಡು ತಾಲ್ಲೂಕಿನ ಕಾಕೋಡನಹಳ್ಳಿಯಲ್ಲಿ ಶುಕ್ರವಾರ ಪ್ರಸವ ವೇದನೆಯಿಂದ ನರಳುತ್ತಿದ್ದ ಹಸುವಿಗೆ ಪಶು ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಕರುವನ್ನು ಸುರಕ್ಷಿತವಾಗಿ ಹೊರತೆಗೆದಿದೆ.
Last Updated 29 ಜುಲೈ 2023, 16:23 IST
ಅರಕಲಗೂಡು: ಹಸುಗೆ ಶಸ್ತ್ರಚಿಕಿತ್ಸೆ ನಡೆಸಿ ಕರು ರಕ್ಷಿಸಿದ ಪಶು ವೈದ್ಯರು

ಕಾಯಂ ವೈದ್ಯರ ನೇಮಕಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ ಸಾಸ್ವೆಹಳ್ಳಿ: ಆರು ತಿಂಗಳಿಂದ ಹೋಬಳಿಯ ಬೆನಕನಹಳ್ಳಿ ಗ್ರಾಮದ ಪಶು ಚಿಕಿತ್ಸ ಕೇಂದ್ರದಲ್ಲಿ ಖಾಯಂ ಪಶು ವೈದ್ಯರಿಲ್ಲ. ಚರ್ಮ ರೋಗ, ಕಾಲುಬಾಯಿ ಜ್ವರದಿಂದ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಅಧಿಕ ಸಂಖ್ಯೆಯಲ್ಲಿ ಜಾನುವಾರುಗಳು ಸಾಯುತ್ತಿದ್ದಾವೆ. ಆದ್ದರಿಂದ ಇಲ್ಲಿಗೆ ಪಶು ವೈದ್ಯರನ್ನು ನೇಮಕ ಮಾಡುವಂತೆ ಗ್ರಾಮಸ್ಥರು ಪಶು ಚಿಕಿತ್ಸ ಕೇಂದ್ರದ ಮುಂದೆ ಜಾನುವಾರುಗಳೊಂದಿಗೆ ಪ್ರತಿಭಟಿಸಿ ಒತ್ತಾಯಿಸಿದರು. ಹೋಬಳಿಯಲ್ಲಿಯೇ ಈ ಗ್ರಾಮ ದೊಡ್ಡದು. ಇಲ್ಲಿ ಜಾನುವಾರಗಳ ಸಂಖ್ಯೆ ಅಧಿಕವಾಗಿದ್ದು ಇಲ್ಲಿನ ಪಶು ಚಿಕಿತ್ಸ ಕೇಂದ್ರಕ್ಕೆ ಅಕ್ಕಪಕ್ಕದ ಗ್ರಾಮಗಳಾದ ಹುಣಸೆಹಳ್ಳಿ, ಚಿಕ್ಕಬಾಸುರು, ವಿಜಯಪುರ, ಕಮ್ಮಾರಗಟ್ಟೆ, ಗಂಟ್ಯಾಪುರ, ತಕ್ಕನಹಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ನಿತ್ಯವೂ ಅಧಿಕ ಸಂಖ್ಯೆಯಲ್ಲಿ ರೋಗದಿಂದ ನರಳುವ ಜಾನುವಾರಗಳು ಪಶು ಆಸ್ಪತ್ರೆ ಮುಂದೆ ಕಾಯುವುದೇ ಇಲ್ಲಿನ ರೈತರ ಕಾಯಕವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗ್ರಾಮದ ಲಿಂಗರಾಜು. ಇಲ್ಲಿ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಶಶಿಕುಮಾರ್ ಪಶು ವೈದ್ಯರು ಆರು ತಿಂಗಳ ಹಿಂದೆಯೇ ವರ್ಗಾವಣೆಯಾಗಿ ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಎರಡು ಹುದ್ದೆಗಳು ಖಾಲಿ ಇವೆ. ಲಿಂಗಾಪುರ ಪಶು ಚಿಕಿತ್ಸ ಕೇಂದ್ರದಿಂದ ಪಶು ವೈದ್ಯರನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ. ಅವರು ಸರ್ಕಾರದ ಆದೇಶದಂತೆ ಹಳ್ಳಿಗಳ ಮೇಲೆ ಜಾನುವಾರಗಳಿಗೆ ಲಸಿಕೆ ನೀಡಲು ತೆರಳುತ್ತಾರೆ. ದಿನವಿಡೀ ಆಸ್ಪತ್ರೆಯು ಬೀಗ ಹಾಕಲಾಗಿರುತ್ತದೆ ರೋಗಗ್ರಸ್ಥ ಜಾನುವಾರುಗಳನ್ನು ರೈತರು ಇಂಜೆಕ್ಷನ್ ಗಾಗಿ ದಿನವಿಡೀ ಕಾಯುವ ಅನಿವಾರ್ಯತೆ ಇದೆ. ರೈತರು ಖಾಸಗಿ ಪಶು ವೈದ್ಯರಿಗೆ ದುಬಾರಿ ವೆಚ್ಚ ನೀಡಲಾಗದ ಕಾರಣ ಅಧಿಕ ಸಂಖ್ಯೆಯಲ್ಲಿ ಜಾನುವಾರುಗಳು ಹಸು ನೀಗುತ್ತಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಇಲ್ಲಿನ ಪಶು ಆಸ್ಪತ್ರೆಗೆ ಖಾಲಿ ಇರುವ ಎರಡು ಹುದ್ದೆಗಳನ್ನು ಭರ್ತಿ ಮಾಡಿ ಜಾನುವಾರುಗಳ ರೋಗ ನಿಯಂತ್ರಣಗೊಳಿಸಬೇಕು. ಪಶು ವೈದ್ಯರ ನೇಮಕ ವಿಳಂಬವಾದಲ್ಲಿ, ತಾಲ್ಲೂಕು ಆಡಳಿತ ಕಚೇರಿಯ ಎದುರು ಜಾನುವಾರುಗಳ ಹಿಡಿದು ಧರಣಿ ಮಾಡುವುದಾಗಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಲಿಂಗನಾಯ್ಕ, ಗಣೇಶಪ್ಪ, ಶಿವಲಿಂಗಪ್ಪ, ಗಜೇಂದ್ರ ಗೌಡ, ವೆಂಕಟೇಶ್, ಲಕ್ಷ್ಮಣ ನಾಯ್ಕ ಇದ್ದರು.
Last Updated 29 ನವೆಂಬರ್ 2022, 5:12 IST
ಕಾಯಂ ವೈದ್ಯರ ನೇಮಕಕ್ಕೆ ಒತ್ತಾಯ

ಹಳ್ಳಿಕಾರ್‌ ಎತ್ತಿನ ಪ್ರಾಣ ಉಳಿಸಿದ ಪಶುವೈದ್ಯರು

ಪಶುವೈದ್ಯರ ತಂಡವು ಎಕ್ಸ್‌ರೇ ಇಲ್ಲದೆಯೇ ಹಳ್ಳಿಕಾರ್ ಎತ್ತಿನ ಕರುಳಿನಲ್ಲಿ ಉಂಟಾಗಿರುವ ಕಾಯಿಲೆಯನ್ನು ನಿಖರವಾಗಿ ಪತ್ತೆಹಚ್ಚಿ ಅದು ನಿಂತಿರುವ ಸ್ಥಿತಿಯಲ್ಲೇ ಬಲಭಾಗದ ಉದರ ತೆರೆಯುವ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.
Last Updated 13 ಸೆಪ್ಟೆಂಬರ್ 2022, 6:57 IST
ಹಳ್ಳಿಕಾರ್‌ ಎತ್ತಿನ ಪ್ರಾಣ ಉಳಿಸಿದ ಪಶುವೈದ್ಯರು

ಕೆನೆ ಮೊಸರಿನ ನಾಡಲ್ಲಿ ಪಶುವೈದ್ಯರ ಕೊರತೆ !

ಇನ್ನೂ ಆರಂಭವಾಗದ ‘ಪಶು ಸಂಜೀವಿನಿ’ ಅಂಬುಲೆನ್ಸ್‌
Last Updated 3 ಸೆಪ್ಟೆಂಬರ್ 2022, 13:04 IST
ಕೆನೆ ಮೊಸರಿನ ನಾಡಲ್ಲಿ ಪಶುವೈದ್ಯರ ಕೊರತೆ !

‘ಆದಾಯ ಹೆಚ್ಚಳಕ್ಕೆ ಮಾರ್ಗದರ್ಶನ ನೀಡಿ’

ಪಶುವೈದ್ಯಾಧಿಕಾರಿಗಳ ಕಾರ್ಯಾಗಾರ, ತರಬೇತಿ ಕಾರ್ಯಕ್ರಮದಲ್ಲಿ ರಾಠೋಡ ಹೇಳಿಕೆ
Last Updated 15 ಜೂನ್ 2022, 5:15 IST
‘ಆದಾಯ ಹೆಚ್ಚಳಕ್ಕೆ ಮಾರ್ಗದರ್ಶನ ನೀಡಿ’

ಜಿಲ್ಲಾಧಿಕಾರಿಯ ಹಸು ಚಿಕಿತ್ಸೆಗೆ 7 ಪಶು ವೈದ್ಯರ ನಿಯೋಜನೆ: ಇಬ್ಬರ ಅಮಾನತು 

ಅನಾರೋಗ್ಯ ಪೀಡಿತ ಹಸುವಿನ ಚಿಕಿತ್ಸೆಗೆ ಏಳು ಪಶುವೈದ್ಯರನ್ನು ನಿಯೋಜಿಸಲಾಗಿತ್ತು. ಇದರ ಮಾಲೀಕ ಬೇರೆ ಯಾರೂ ಅಲ್ಲ, ಜಿಲ್ಲಾಧಿಕಾರಿ. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಅಶಿಸ್ತು ಆರೋಪದ ಮೇರೆಗೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಯಿತು.
Last Updated 13 ಜೂನ್ 2022, 14:38 IST
ಜಿಲ್ಲಾಧಿಕಾರಿಯ ಹಸು ಚಿಕಿತ್ಸೆಗೆ 7 ಪಶು ವೈದ್ಯರ ನಿಯೋಜನೆ: ಇಬ್ಬರ ಅಮಾನತು 

ಪಶುವೈದ್ಯರು ಸಕಾಲಕ್ಕೆ ರೈತರ ಸಮಸ್ಯೆಗೆ ಸ್ಪಂದಿಸಿ: ಸಚಿವ ಪ್ರಭು ಚವಾಣ್‌

ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ
Last Updated 1 ಜೂನ್ 2022, 5:08 IST
ಪಶುವೈದ್ಯರು ಸಕಾಲಕ್ಕೆ ರೈತರ ಸಮಸ್ಯೆಗೆ ಸ್ಪಂದಿಸಿ: ಸಚಿವ ಪ್ರಭು ಚವಾಣ್‌
ADVERTISEMENT

400 ಪಶು ವೈದ್ಯರ ನೇಮಕಾತಿಗೆ ಸಂಪುಟ ಒಪ್ಪಿಗೆ: ಸಚಿವ ಜೆ.ಸಿ.ಮಾಧುಸ್ವಾಮಿ

ಪಶು ವೈದ್ಯ ಇಲಾಖೆಗೆ 400 ಪಶು ವೈದ್ಯರನ್ನು ನೇಮಕ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
Last Updated 27 ಜನವರಿ 2022, 11:15 IST
400 ಪಶು ವೈದ್ಯರ ನೇಮಕಾತಿಗೆ ಸಂಪುಟ ಒಪ್ಪಿಗೆ: ಸಚಿವ ಜೆ.ಸಿ.ಮಾಧುಸ್ವಾಮಿ

ನೋಡಿ: ವೈದ್ಯರಿಲ್ಲದೇ ಹೈರಾಣಾದ ಹೈನುಗಾರ!

Last Updated 19 ಸೆಪ್ಟೆಂಬರ್ 2021, 2:54 IST
fallback

ಒಳನೋಟ| ಹಿಂಡಿ ದುಬಾರಿ: ಹಾಲಿಗೆ ಮಾತ್ರ ಅದೇ ದರ

ಪಶು ಆಹಾರ: ಮೂರು ತಿಂಗಳಲ್ಲಿ ಚೀಲಕ್ಕೆ ₹400 ಹೆಚ್ಚಳ l ಹೊರೆಯಾದ ‌ಪಶು ಸಾಕಾಣಿಕೆ
Last Updated 18 ಸೆಪ್ಟೆಂಬರ್ 2021, 20:10 IST
ಒಳನೋಟ| ಹಿಂಡಿ ದುಬಾರಿ: ಹಾಲಿಗೆ ಮಾತ್ರ ಅದೇ ದರ
ADVERTISEMENT
ADVERTISEMENT
ADVERTISEMENT