ಸಂದೇಶವೇನು?:‘ಪರೀಕ್ಷೆಯಲ್ಲಿ ಶೇ 60ರಷ್ಟು ಅಂಕಗಳೊಂದಿಗೆ ತೇರ್ಡಗೆಯಾದ ನನ್ನ ಮಗನ ಬಗ್ಗೆ ಅತೀವ ಹೆಮ್ಮೆಯಿದೆ. ನಿಜ, ಇದು ಶೇ 90 ಅಲ್ಲ. ಆದರೆ ನನ್ನ ಭಾವನೆಯನ್ನು ಇದು ಬದಲಿಸಲಾರದು. ಯಾಕೆಂದರೆ, ಕೆಲವು ವಿಷಯಗಳಲ್ಲಿ ಹಿಂದಿದ್ದ ಆತ ಅವನ್ನು ಕೈಚೆಲ್ಲಿಬಿಡುವ ಸ್ಥಿತಿ ತಲುಪಿದ್ದನ್ನು ನಾನು ಗಮನಿಸಿದ್ದೆ. ಆದರೆ, ಕೊನೆಯ ಒಂದೂವರೆ ತಿಂಗಳು ಕಠಿಣ ಶ್ರಮವಹಿಸಿ ಅವುಗಳಲ್ಲಿ ಸಾಧನೆ ಮಾಡಿ ತೇರ್ಗಡೆಯಾದ.ಅಮರ್, ನಿನ್ನಂತಹ ಇತರರಿಗೆ ಇದು ಮೀನಿಗೆ ಮರ ಏರಲು ಹೇಳಿದಂತೆ. ನಿನ್ನದಾದ ಸಾಮರ್ಥ್ಯವನ್ನೇ ದೊಡ್ಡದಾಗಿ ಮಾಡಿಕೊ, ವಿಶಾಲವಾಗಿಸು. ನಿನ್ನ ಆಂತರಿಕ ಒಳ್ಳೆಯತನ, ಕೌತುಕತೆ, ಜ್ಞಾನವನ್ನು ಜೀವಂತವಾಗಿರಿಸು. ಹಾಗೆಯೇ ನಿನ್ನ ಹಾಸ್ಯಪ್ರಜ್ಞೆಯನ್ನೂ’ ಎಂದುವಂದನಾ ಕಟೋಚ್ ಬರೆದಿದ್ದಾರೆ.