<p><strong>ಮೈಸೂರು:</strong> ಬೆಲೆ ಏರಿಳಿತದ ಹೊಡೆತಕ್ಕೆ ಸಿಲುಕಿ ತತ್ತರಿಸುವ ಟೊಮೆಟೊ ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ, ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ (ಸಿಎಫ್ಟಿಆರ್ಐ) ವಿಜ್ಞಾನಿಗಳು ಸರಳ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.</p>.<p>ಸಿಎಫ್ಟಿಆರ್ಐನ ಆಹಾರ ಪ್ಯಾಕೇಜಿಂಗ್ ವಿಭಾಗದ ನಾಲ್ವರು ವಿಜ್ಞಾನಿಗಳ ತಂಡವು ಒಂದು ವರ್ಷ ಸತತ ಅಧ್ಯಯನ ನಡೆಸಿ, ನಾಲ್ಕು ತಿಂಗಳವರೆಗೂ ಟೊಮೆಟೊ ಕೆಡದಂತೆ ಇಡುವ ವಿಧಾನವನ್ನು ಕಂಡುಹಿಡಿದಿದೆ.</p>.<p>ಈ ವಿಧಾನದಲ್ಲಿ ಪ್ರಯೋಗಾಲಯದಲ್ಲಿ ಒಂದು ಕೆ.ಜಿ. ಟೊಮೆಟೊ ಸಂರಕ್ಷಿಸಿಡಲು ಖರ್ಚಾಗುವುದು ₹ 3ರಿಂದ ₹ 4. ಆದರೆ ಇದು ರೈತರೇ ಸುಲಭವಾಗಿ ಬಳಸಬಹುದಾದ ತಂತ್ರಜ್ಞಾನವೂ ಆಗಿರುವುದರಿಂದ ಅವರಿಗೆ ಖರ್ಚು ಇನ್ನೂ ಕಡಿಮೆ ಆಗುತ್ತದೆ. ರೈತರು ತಮ್ಮ ಜಮೀನಿನಲ್ಲಿ ಅಗತ್ಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬಹುದು ಎಂದು ಸಿಎಫ್ಟಿಆರ್ಐನ ಆಹಾರ ಪ್ಯಾಕೇಜಿಂಗ್ ವಿಭಾಗದ ಮುಖ್ಯಸ್ಥ ಎಚ್.ಎಸ್.ಸತೀಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p class="Subhead">ಸರಳ ವಿಧಾನ: ಇದಕ್ಕೆ ದುಬಾರಿ ಯಂತ್ರೋಪಕರಣ ಬೇಕಿಲ್ಲ. ಶೈತ್ಯಾಗಾರದ ಅಗತ್ಯವಿಲ್ಲ. ಪಿಎಚ್ ಮಟ್ಟ ಶೇ 3.9ರಿಂದ 4ರಷ್ಟಿರುವ ಸಿಟ್ರಿಕ್ ಆ್ಯಸಿಡ್ ಮಿಶ್ರಿತ ನೀರಿನಲ್ಲಿ, ಶೇ 3ರಷ್ಟು ಉಪ್ಪು (ಸೋಡಿಯಂ ಕ್ಲೋರೈಡ್) ಮಿಶ್ರಣ ಮಾಡಬೇಕು.<br />ಈ ದ್ರಾವಣವನ್ನು ಕುದಿಸಿ, ಆರಿಸಿದ ಬಳಿಕ ಟೊಮೆಟೊವನ್ನು ಇಡಿಯಾಗಿ ಅಥವಾ ಹೋಳು ಮಾಡಿ ಹಾಕಿದರೆ, ಅದು ಹಾಳಾಗುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.</p>.<p>‘ದ್ರಾವಣದಲ್ಲಿ ಟೊಮೆಟೊ ಹಾಕಿ, ಪ್ಲಾಸ್ಟಿಕ್ ಕವರ್ಗಳಲ್ಲಿ ಪ್ಯಾಕ್ ಮಾಡಿದರೆ ನಾಲ್ಕು ತಿಂಗಳು ಕೆಡುವುದಿಲ್ಲ. ತನ್ನ ಬಣ್ಣವನ್ನು ಕೊಂಚ ಕಳೆದುಕೊಂಡಿರುತ್ತದೆ. ಇದಕ್ಕೆ ಹೆಚ್ಚೇನೂ ಖರ್ಚಾಗದು. ಸ್ವತಃ ರೈತರೇ ಚಿಕ್ಕ ಪ್ರಮಾಣದಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಳ್ಳಬಹುದು’ ಎಂದು ಅವರು ತಿಳಿಸಿದರು.</p>.<p>‘ಈ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಬಂದಾಗ ಟೊಮೆಟೊ ಮಾರಾಟ ಮಾಡಬಹುದು. ದ್ರಾವಣ ತಯಾರಿಕೆಗೆ ಬಳಸಿದ ನೀರನ್ನು ಕೂಡ ಅಡುಗೆಗೆ ಬಳಸಿಕೊಳ್ಳಬಹುದು’ ಎಂದು ಸತೀಶ್ ಮಾಹಿತಿ ನೀಡಿದರು.</p>.<p><strong>ಕೋಲಾರದಲ್ಲಿ ಕಾರ್ಯಾಗಾರ</strong></p>.<p>‘ಕೋಲಾರ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಟೊಮೆಟೊ ಬೆಳೆಯುತ್ತಾರೆ. ಈ ತಂತ್ರಜ್ಞಾನವನ್ನು ರೈತರಿಗೆ ಪರಿಚಯಿಸಲು ಕರ್ನಾಟಕ ಫುಡ್ ಲಿಮಿಟೆಡ್ ಮುಂದಾಗಿದೆ. ಈ ಸಂಬಂಧ ನಮ್ಮೊಂದಿಗೆ ಮಾತುಕತೆಯನ್ನೂ ನಡೆಸಿದೆ. ಶೀಘ್ರದಲ್ಲೇ ಕಾರ್ಯಾಗಾರದ ಮೂಲಕ ರೈತರಿಗೆ ಉಚಿತವಾಗಿ ಈ ತಂತ್ರಜ್ಞಾನ ಪರಿಚಯಿಸಲಾಗುವುದು’ ಎಂದು ಎಚ್.ಎಸ್. ಸತೀಶ್ ಅವರು ತಿಳಿಸಿದರು.</p>.<p>***</p>.<p>ಟೊಮೆಟೊ ಮಾದರಿಯನ್ನೇ ಇನ್ನಿತರ ತರಕಾರಿಗಳಿಗೂ ಅಳವಡಿಸುವ ಸಂಶೋಧನೆ ನಡೆದಿದೆ. ಇದು ಯಶಸ್ವಿಯಾದರೆ ರೈತರು ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆ</p>.<p><em><strong>ಎಚ್.ಎಸ್.ಸತೀಶ್, ಪ್ಯಾಕೇಜಿಂಗ್ ವಿಭಾಗದ ಮುಖ್ಯಸ್ಥ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಬೆಲೆ ಏರಿಳಿತದ ಹೊಡೆತಕ್ಕೆ ಸಿಲುಕಿ ತತ್ತರಿಸುವ ಟೊಮೆಟೊ ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ, ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ (ಸಿಎಫ್ಟಿಆರ್ಐ) ವಿಜ್ಞಾನಿಗಳು ಸರಳ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.</p>.<p>ಸಿಎಫ್ಟಿಆರ್ಐನ ಆಹಾರ ಪ್ಯಾಕೇಜಿಂಗ್ ವಿಭಾಗದ ನಾಲ್ವರು ವಿಜ್ಞಾನಿಗಳ ತಂಡವು ಒಂದು ವರ್ಷ ಸತತ ಅಧ್ಯಯನ ನಡೆಸಿ, ನಾಲ್ಕು ತಿಂಗಳವರೆಗೂ ಟೊಮೆಟೊ ಕೆಡದಂತೆ ಇಡುವ ವಿಧಾನವನ್ನು ಕಂಡುಹಿಡಿದಿದೆ.</p>.<p>ಈ ವಿಧಾನದಲ್ಲಿ ಪ್ರಯೋಗಾಲಯದಲ್ಲಿ ಒಂದು ಕೆ.ಜಿ. ಟೊಮೆಟೊ ಸಂರಕ್ಷಿಸಿಡಲು ಖರ್ಚಾಗುವುದು ₹ 3ರಿಂದ ₹ 4. ಆದರೆ ಇದು ರೈತರೇ ಸುಲಭವಾಗಿ ಬಳಸಬಹುದಾದ ತಂತ್ರಜ್ಞಾನವೂ ಆಗಿರುವುದರಿಂದ ಅವರಿಗೆ ಖರ್ಚು ಇನ್ನೂ ಕಡಿಮೆ ಆಗುತ್ತದೆ. ರೈತರು ತಮ್ಮ ಜಮೀನಿನಲ್ಲಿ ಅಗತ್ಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬಹುದು ಎಂದು ಸಿಎಫ್ಟಿಆರ್ಐನ ಆಹಾರ ಪ್ಯಾಕೇಜಿಂಗ್ ವಿಭಾಗದ ಮುಖ್ಯಸ್ಥ ಎಚ್.ಎಸ್.ಸತೀಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p class="Subhead">ಸರಳ ವಿಧಾನ: ಇದಕ್ಕೆ ದುಬಾರಿ ಯಂತ್ರೋಪಕರಣ ಬೇಕಿಲ್ಲ. ಶೈತ್ಯಾಗಾರದ ಅಗತ್ಯವಿಲ್ಲ. ಪಿಎಚ್ ಮಟ್ಟ ಶೇ 3.9ರಿಂದ 4ರಷ್ಟಿರುವ ಸಿಟ್ರಿಕ್ ಆ್ಯಸಿಡ್ ಮಿಶ್ರಿತ ನೀರಿನಲ್ಲಿ, ಶೇ 3ರಷ್ಟು ಉಪ್ಪು (ಸೋಡಿಯಂ ಕ್ಲೋರೈಡ್) ಮಿಶ್ರಣ ಮಾಡಬೇಕು.<br />ಈ ದ್ರಾವಣವನ್ನು ಕುದಿಸಿ, ಆರಿಸಿದ ಬಳಿಕ ಟೊಮೆಟೊವನ್ನು ಇಡಿಯಾಗಿ ಅಥವಾ ಹೋಳು ಮಾಡಿ ಹಾಕಿದರೆ, ಅದು ಹಾಳಾಗುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.</p>.<p>‘ದ್ರಾವಣದಲ್ಲಿ ಟೊಮೆಟೊ ಹಾಕಿ, ಪ್ಲಾಸ್ಟಿಕ್ ಕವರ್ಗಳಲ್ಲಿ ಪ್ಯಾಕ್ ಮಾಡಿದರೆ ನಾಲ್ಕು ತಿಂಗಳು ಕೆಡುವುದಿಲ್ಲ. ತನ್ನ ಬಣ್ಣವನ್ನು ಕೊಂಚ ಕಳೆದುಕೊಂಡಿರುತ್ತದೆ. ಇದಕ್ಕೆ ಹೆಚ್ಚೇನೂ ಖರ್ಚಾಗದು. ಸ್ವತಃ ರೈತರೇ ಚಿಕ್ಕ ಪ್ರಮಾಣದಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಳ್ಳಬಹುದು’ ಎಂದು ಅವರು ತಿಳಿಸಿದರು.</p>.<p>‘ಈ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಬಂದಾಗ ಟೊಮೆಟೊ ಮಾರಾಟ ಮಾಡಬಹುದು. ದ್ರಾವಣ ತಯಾರಿಕೆಗೆ ಬಳಸಿದ ನೀರನ್ನು ಕೂಡ ಅಡುಗೆಗೆ ಬಳಸಿಕೊಳ್ಳಬಹುದು’ ಎಂದು ಸತೀಶ್ ಮಾಹಿತಿ ನೀಡಿದರು.</p>.<p><strong>ಕೋಲಾರದಲ್ಲಿ ಕಾರ್ಯಾಗಾರ</strong></p>.<p>‘ಕೋಲಾರ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಟೊಮೆಟೊ ಬೆಳೆಯುತ್ತಾರೆ. ಈ ತಂತ್ರಜ್ಞಾನವನ್ನು ರೈತರಿಗೆ ಪರಿಚಯಿಸಲು ಕರ್ನಾಟಕ ಫುಡ್ ಲಿಮಿಟೆಡ್ ಮುಂದಾಗಿದೆ. ಈ ಸಂಬಂಧ ನಮ್ಮೊಂದಿಗೆ ಮಾತುಕತೆಯನ್ನೂ ನಡೆಸಿದೆ. ಶೀಘ್ರದಲ್ಲೇ ಕಾರ್ಯಾಗಾರದ ಮೂಲಕ ರೈತರಿಗೆ ಉಚಿತವಾಗಿ ಈ ತಂತ್ರಜ್ಞಾನ ಪರಿಚಯಿಸಲಾಗುವುದು’ ಎಂದು ಎಚ್.ಎಸ್. ಸತೀಶ್ ಅವರು ತಿಳಿಸಿದರು.</p>.<p>***</p>.<p>ಟೊಮೆಟೊ ಮಾದರಿಯನ್ನೇ ಇನ್ನಿತರ ತರಕಾರಿಗಳಿಗೂ ಅಳವಡಿಸುವ ಸಂಶೋಧನೆ ನಡೆದಿದೆ. ಇದು ಯಶಸ್ವಿಯಾದರೆ ರೈತರು ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆ</p>.<p><em><strong>ಎಚ್.ಎಸ್.ಸತೀಶ್, ಪ್ಯಾಕೇಜಿಂಗ್ ವಿಭಾಗದ ಮುಖ್ಯಸ್ಥ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>