ಈ ಕುರಿತು ಕಾಲೇಜು ಆವರಣದಲ್ಲಿ ಶನಿವಾರ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿ ಡಾ. ಕಪ್ಪಾಳಿ, ‘ಗಾಡಿಯ ನೊಗವನ್ನು ಎತ್ತಿನ ಕತ್ತಿನ ಮೇಲೆ ಹಾಕುವುದರಿಂದ ಗಾಡಿಯ ಸಂಪೂರ್ಣ ಭಾರ ಕತ್ತಿನ ಮೇಲೆ ಬೀಳಲಿದೆ. ಇದರಿಂದ ಅದರ ಕಾರ್ಯಕ್ಷಮತೆ ತಗ್ಗುವುದರ ಜತೆಗೆ, ಕತ್ತಿನ ಬಾವು ಎಂಬ ಗಂಟಿನ ಕಾಯಿಲೆಗೂ ತುತ್ತಾಗುವ ಸಾಧ್ಯತೆ ಇದೆ. ಹೀಗಾಗಿ ಇದನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಕೈಹಾಕಲಾಯಿತು’ ಎಂದು ತಿಳಿಸಿದರು.