ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ರೈತರ ಆರ್ಥಿಕ ಬದುಕಿಗೆ ಪ್ರಮುಖ ಆಸರೆ ರೇಷ್ಮೆ ಕೃಷಿ. ಈ ಮೊದಲು ಚೀನಾ ರೇಷ್ಮೆ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಆಮದಾಗುತ್ತಿತ್ತು. ಆದರೆ, ಎರಡೂ ದೇಶಗಳ ನಡುವೆ ಸಂಬಂಧ ಹಳಸಿದ ಪರಿಣಾಮ ಆಮದು ತೀರಾ ಕಡಿಮೆ ಆಗಿದೆ. ಚೀನಾ ರೇಷ್ಮೆ ಭಾರತದ ಮಾರುಕಟ್ಟೆ ಪ್ರವೇಶಿಸದಿರುವುದು ಶಿಡ್ಲಘಟ್ಟ ಮಾರುಕಟ್ಟೆಗೆ ಬರುವ ರೈತರಲ್ಲಿ ಸಂತೋಷಕ್ಕೆ ಕಾರಣವಾಗಿದೆ