ಖ್ಯಾತ ಗಾಯಕಿ, ಕೊಳಲು ವಾದಕಿ, ಸಂಗೀತ ನಿರ್ದೇಶಕಿ ವಿದುಷಿ ವಾರಿಜಾಶ್ರೀ ವೇಣುಗೋಪಾಲ್ ಅವರು 7ನೇ ವಯಸ್ಸಿನಲ್ಲಿ ತಮ್ಮ ಮೊದಲ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಕೊಟ್ಟರು. ಆಗ ಅವರ ಮನಸ್ಸಿನಲ್ಲಿ ಪ್ರಮಾಣಿಕತೆ, ಮುಗ್ಧತೆ ಬಿಟ್ಟರೆ ಬೇರೇನೂ ಇರಲಿಲ್ಲ. ಈಗಲೂ ತಮ್ಮ ಗಾಯನದಲ್ಲಿ ಅದೇ ಪ್ರಾಮಾಣಿಕತೆ, ಮುಗ್ದತೆ ಇರಬೇಕು ಎಂಬುದು ಅವರ ಮನದಾಳ. ಈ ವಾರದ ಜಸ್ಟ್ ಮ್ಯೂಸಿಕ್ ಸರಣಿಯಲ್ಲಿ ವಾರಿಜಾಶ್ರೀ ಅವರ ಹಿತಾನುಭವ ಇದೆ.