ರಾಜ್ಯದ ಬಹುತೇಕ ಕಡೆ ಬೆಳಿಗ್ಗೆ ಎಂದಿನಂತೆಯೇ ವಾಹನಗಳ ಸಂಚಾರ, ವ್ಯಾಪಾರ ವಹಿವಾಟು ನಡೆಯಿತು. ಆದರೆ, ಸೂರ್ಯನ ಬಿಸಿಲು ಕಾವೇರುತ್ತಿದ್ದಂತೆ ಪ್ರತಿಭಟನೆಗಳು ಜೋರಾದವು. ರೈತ ಸಂಘಟನೆಗಳು, ವಿಪಕ್ಷಗಳು ಪ್ರತಿಭಟನಾ ಮೆರವಣಿಗೆಯನ್ನೂ ನಡೆಸಿದವು. ಅಣಕು ಶವಯಾತ್ರೆ, ರಸ್ತೆ ತಡೆಗಳು ನಡೆದವು. ಈ ಪ್ರತಿಭಟನೆಯ ಕಾವು ಬೆಂಗಳೂರಿನಲ್ಲಿ ಹೇಗಿತ್ತು ಎಂದು ಇಲ್ಲಿ ನೋಡಿ.