ತಾಯಿಯನ್ನು ಕಳೆದುಕೊಂಡ ನೋವು ಇವರನ್ನು ಪರಿಸರದತ್ತ ಕರೆದುಕೊಂಡು ಬಂದಿತು. ಈ ಸಂಚಾರಿ ಪರಿಸರ ಜಾಗೃತಿದಾರ ಗಿಡವನ್ನೂ ನೆಡುತ್ತಾರೆ, ರಕ್ಷಣೆಯನ್ನೂ ಮಾಡುತ್ತಾರೆ. ಆದರೆ, ಪರಿಸರ ಕಾಳಜಿ ಅಲ್ಲಿಗೇ ನಿಲ್ಲುವುದಿಲ್ಲ. ಭವಿಷ್ಯದ ಪ್ರಜೆಗಳಲ್ಲಿ ಅದರ ಮಾಹಿತಿಯನ್ನು ಮಕ್ಕಳಿಗೆ ಪರಿಸರ ಪಾಠವನ್ನು ಅವರಿರುವಲ್ಲಿಗೇ ಹೋಗಿ ಹೇಳಿಕೊಡುತ್ತಾರೆ ಇವರು. ಸಂಗೀತ, ಹರಿಕಥೆ ಮೂಲಕವೂ ಪರಿಸರದ ಜಾಗೃತಿಯೇ ಇವರ ಕಾಯಕ... ಇವರ ಹೆಸರು ಪರಿಸರ ಶಿವಮಲ್ಲು.