ಬೆಂಗಳೂರು: ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕಾರಣ 14 ದಿನಗಳ ಕಾಲ ರಾಜ್ಯಾದ್ಯಂತ ಲಾಕ್ಡೌನ್ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಈ ಮಧ್ಯೆ ಒಂದೆಡೆ ಸೋಂಕು ಪ್ರಕರಣಗಳು ಏರುತ್ತಿದ್ದರೆ, ಕೋವಿಡ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ತೊಡಕುಂಟಾಗುತ್ತಿದೆ. ದಿನನಿತ್ಯ ಏರುತ್ತಿರುವ ಸಾವು ಪ್ರಕರಣಗಳಿಂದಾಗಿ ಚಿತಾಗಾರಗಳಲ್ಲಿ ಗಂಟೆಗಟ್ಟಲೆ ಕಾಯ್ದರು ಅಂತ್ಯಸಂಸ್ಕಾರಕ್ಕೆ ಸಮಯ ಸಿಗದಂತಾಗಿದೆ. ಕೋವಿಡ್ 19 ಸಂತ್ರಸ್ತರ ಮೃತದೇಹವನ್ನು ಹೊತ್ತ ಆಂಬುಲೆನ್ಸ್ಗಳ ದೀರ್ಘ ಸಾಲು ಗುರುವಾರ ಬೆಂಗಳೂರಿನ ಸುಮನಹಳ್ಳಿಯ ಚಿತಾಗಾರ ಮುಂದೆ ಕಂಡುಬಂತು.