ಉಡುಪಿ: ಇಲ್ಲಿನ ಅತ್ಯಂತ ಬ್ಯಸಿ ರಸ್ತೆಗಳಲ್ಲಿ ಒಂದಾದ ಕಲ್ಸಂಕಾ ಜಂಕ್ಷನ್ ಬಳಿ ರಸ್ತೆಯಲ್ಲಿ ನಾಗರಹಾವು ಕಾಣಿಸಿಕೊಂಡು ಸುಮಾರು ಅರ್ಧ ಗಂಟೆ ಕಾಲ ಸವಾರರು ವಾಹನಗಳನ್ನು ನಿಲ್ಲಿಸಿ ನಿಂತಿದ್ದ ಬಗ್ಗೆ ವರದಿಯಾಗಿದೆ. ನಾಗರಹಾವು ದಿಢೀರ್ ರಸ್ತೆಗೆ ಬಂದಿದ್ದರಿಂದ ಪೊಲೀಸರು ವಾಹನ ಸವಾರರನ್ನು ತಡೆದು ಹಾವು ಮುಂದಕ್ಕೆ ತೆರಳಲು ಅನುವು ಮಾಡಿಕೊಟ್ಟಿದ್ದಾರೆ.