ಬಳಿಕ ಮಾತನಾಡಿದ ಸೋಮಣ್ಣ, ಪ್ರಕೃತಿಯ ಆಶೀರ್ವಾದದಿಂದ ಎರಡು ವರ್ಷದಿಂದ ಎಲ್ಲ ಜಲಾಶಯಗಳು ಭರ್ತಿಯಾಗುತ್ತಿವೆ. ಎಲ್ಲಿಯೂ ಬರ ಪರಿಸ್ಥಿತಿ ಕಾಣಿಸಿಕೊಂಡಿಲ್ಲ. ಈ ವರ್ಷವೂ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಆದರೆ, ಅತಿವೃಷ್ಟಿಯಿಂದ ಕೆಲವು ಕಡೆ ಜನರಿಗೆ ತೊಂದರೆಯಾಗಿದೆ. ಅದನ್ನು ಸಮರ್ಥವಾಗಿ ನಿಭಾಯಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.