ಬೆಂಗಳೂರಿನ ಜಿಗಣಿ ಬಳಿಯಿರುವ ಹರಪನಹಳ್ಳಿಯಲ್ಲಿ ಪೊಲೀಸರು ಶ್ರಮದಾನದ ಮೂಲಕ ಕೆರೆಯೊಂದನ್ನು ಶುಚಿಗೊಳಿಸಿದರು, ಅಭಿವೃದ್ಧಿಗೊಳಿಸಿದರು. ಪೊಲೀಸರ ಶ್ರಮದಾನದಿಂದ ಅಭಿವೃದ್ಧಿ ಕಂಡ ಈ ಕೆರೆಗೆ ಗ್ರಾಮ ಪಂಚಾಯಿತಿ ಪೊಲೀಸ್ ಕೆರೆ ಎಂದೇ ಮರುನಾಮಕರಣ ಮಾಡಿತು. ಅಷ್ಟೇ ಅಲ್ಲ, ಕಲ್ಲುಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರಿಗೆ ಇದೇ ಸ್ಫೂರ್ತಿಯಾಗಿ ಇನ್ನೂ ಐದು ಕೆರೆಗಳು ಕೈಗಾರಿಕೆಗಳ ಸಿಎಸ್ಆರ್ ಫಂಡ್ನಿಂದ ಅಭಿವೃದ್ಧಿ ಕಂಡಿವೆ.