ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಡಕಲೂರಿನ ಎಂ. ಅರುಣಾ ಈ ಬಾರಿಯ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 308ನೇ ರ್ಯಾಂಕ್ ಪಡೆದಿದ್ದಾರೆ. ಪರೀಕ್ಷೆಗೂ ಕೆಲವು ತಿಂಗಳುಗಳ ಮುನ್ನ ತಂದೆಯನ್ನು ಕಳೆದುಕೊಂಡರೂ, ಧೃತಿಗೆಡದೆ ಪರೀಕ್ಷೆ ಬರೆದ ಅರುಣಾ, ಅಪ್ಪನ ಆಸೆಯನ್ನು ಈಡೇರಿಸಿದ್ದಾರೆ. ಐದು ಪ್ರಯತ್ನಗಳಲ್ಲಿ ವಿಫಲವಾದರೂ ಛಲಬಿಡದೆ ಯಶಸ್ಸು ಪಡೆದಿರುವ ಅವರ ಸಾಧನಾ ಮಾರ್ಗ ಉಳಿದ ಅಭ್ಯರ್ಥಿಗಳಿಗೊಂದು ಸಿದ್ಧ ಮಾದರಿ.