ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PV Achievers | ಬೆಳೆಯುವ ಅಸೀಮತೆಯೇ ಹೆಣ್ಣಿನ ನೈಜ ಸ್ವಾತಂತ್ರ್ಯ: ಗೀತಾ ವಸಂತ

Published : 23 ಮಾರ್ಚ್ 2025, 0:29 IST
Last Updated : 23 ಮಾರ್ಚ್ 2025, 0:29 IST
ಫಾಲೋ ಮಾಡಿ
Comments
ಮಹಿಳೆ ಆರೋಗ್ಯದ ದ್ಯೋತಕವೂ ಹೌದು...
‘ಕೃಷಿಯಲ್ಲಿ ಮೊದಲು ತೊಡಗಿಸಿಕೊಂಡವಳು ಮಹಿಳೆ ಎಂಬ ಮಾತೊಂದಿದೆ. ಕೃಷಿ ಆಕೆಯ ಮೇಲ್ವಿಚಾರಣೆಯಲ್ಲಿದ್ದಾಗ ವಿಷಮಯ ಆಹಾರ ಇರಲಿಲ್ಲ. ಅಡುಗೆ ಮನೆಯಲ್ಲಿ ಚಾಕು, ಚೂರಿ, ಖಾರದ ಪುಡಿ, ಲಟ್ಟಣಿಗೆಯಂತಹ ‘ಶಸ್ತ್ರಾಸ್ತ್ರ’ಗಳನ್ನು ಬಳಸಿ, ಹವಾಮಾನಕ್ಕೆ ತಕ್ಕಂತೆ ರುಚಿ ರುಚಿಯಾದ ಅಡುಗೆ ಮಾಡುತ್ತಾ ಎಲ್ಲರನ್ನೂ ಪೋಷಿಸಿಕೊಂಡು, ಬೆಳೆಸಿಕೊಂಡು ಬಂದವಳು ಮಹಿಳೆ’ ಎಂದು ಸಂವಾದ ನಡೆಸಿಕೊಟ್ಟ ತರೀಕೆರೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಸಬಿತಾ ಬನ್ನಾಡಿ ಮಾರ್ಮಿಕವಾಗಿ ಹೇಳಿದರು. ‘ಆಕೆಯ ಕೈಯಲ್ಲಿ ಅಡುಗೆ ಮನೆ ಇದ್ದಾಗ ಜಂಕ್ ಫುಡ್ ಇರಲಿಲ್ಲ. ಅಡುಗೆ ಇಂದು ಲಾಭದ ಉದ್ಯಮ ಆದ ತಕ್ಷಣ ಅದು ಗಂಡಿನ ಕೈಗೆ ಹೋಗಿದೆ. ಆತನ ಮೇಲ್ವಿಚಾರಣೆಯ ಕೃಷಿಯಲ್ಲಿ ಆಹಾರ ವಿಷಮಯವಾಗಿ ಮಾರ್ಪಟ್ಟಿದೆ. ಮಹಿಳೆಯ ಸ್ವಾತಂತ್ರ್ಯದಲ್ಲಿ ಜೀವಸಂಕುಲದ ಆರೋಗ್ಯವೂ ಅಡಗಿದೆ ಎಂಬುದರ ದ್ಯೋತಕವಿದು’ ಎಂದರು.
ಅಭಿನಂದನೆಗಳ ಮಹಾಪೂರ
ಕಾರ್ಯಕ್ರಮ ಮುಗಿದ ನಂತರವೂ ಮನೆಗೆ ತೆರಳದ ಜನರು ಸಾಧಕಿಯರನ್ನು ಮಾತನಾಡಿಸುತ್ತಾ, ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಸಂಭ್ರಮಿಸಿದರು. ಅವರನ್ನು ಅಭಿನಂದಿಸಿ ಸಾಧನೆಯ ಹಾದಿಯನ್ನು ಮನಸಾರೆ ಮೆಚ್ಚಿಕೊಂಡರು. ಕಡೆಗೆ ಒಟ್ಟಿಗೆ ಕುಳಿತು ರಾತ್ರಿಯೂಟ ಸವಿದರು. ಅಭಿನಂದನೆಗಳ ಮಳೆ ಕಂಡ ಸಾಧಕಿಯರು ಕೂಡ ಆಶ್ಚರ್ಯ ಹಾಗೂ ಸಂತೋಷ ಅನುಭವಿಸಿದರು. ಶನಿವಾರ ಸಾಧಕಿಯರ ಪರಿಚಯವನ್ನೊಳಗೊಂಡ ‘ಅವಳ ಸಾಧನೆ ಸಂಭ್ರಮ’ ವಿಶೇಷ ಪುಟಗಳು ಪ್ರಕಟವಾಗಿದ್ದ ಕಾರಣ ಅವರಿಗೆ ಬೆಳಿಗ್ಗೆಯಿಂದಲೂ ಅಭಿನಂದನೆಗಳ ಕರೆಗಳೇ ಬರುತ್ತಿದ್ದವು. ‘ರಾಜ್ಯದ ಬೇರೆ ಬೇರೆ ಭಾಗಗಳಿಂದ, ಹೊರರಾಜ್ಯಗಳಿಂದಲೂ ಜನರು ಕರೆ ಮಾಡಿ ಅಭಿನಂದಿಸುತ್ತಿದ್ದಾರೆ. ಸನ್ಮಾನಕ್ಕೆ ಆಹ್ವಾನಿಸುತ್ತಿದ್ದಾರೆ’ ಎನ್ನುವ ಮಾತುಗಳನ್ನು ಹಂಚಿಕೊಂಡರು. ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜನರ ಮೆಚ್ಚುಗೆಯ ಮಾತುಗಳನ್ನು ಕೇಳಿ ಬೆರಗುಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT