<p>ಕಲಬುರಗಿ (kalaburagi) ಜಿಲ್ಲಾ ಕೇಂದ್ರದಿಂದ 60 ಕಿ.ಮೀ. ದೂರದಲ್ಲಿರುವ ಗ್ರಾಮ ನಿಂಬಾಳ (Nimbala) . ಆಳಂದ (Alanda) ತಾಲ್ಲೂಕಿನಲ್ಲಿರುವ ಈ ಗ್ರಾಮ ದಶಕದ ಹಿಂದೆ ಕಳಪೆ ಸಾರಾಯಿಯಿಂದ (alcohol) ಕಂಗೆಟ್ಟು ಹೋಗಿತ್ತು. ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿದ್ದವರ ಗಲಾಟೆ, ಬೈಗುಳದ ಸದ್ದೇ ಕೇಳುತ್ತಿತ್ತು. ಈ ಗ್ರಾಮವನ್ನು ಸಾರಾಯಿ ಮುಕ್ತ (liquor free) ಮಾಡಬೇಕೆಂಬ ಜಡೆ ಶಾಂತಲಿಂಗೇಶ್ವರ ಸ್ವಾಮೀಜಿಯವರ ಕರೆಗೆ ಓಗೊಟ್ಟ ಮಹಿಳೆಯರು, ಸಂಗಮ್ಮ ಸಾಣಕ (Sangamma Sanakka) ಅವರ ನೇತೃತ್ವದಲ್ಲಿ ದೊಡ್ಡ ಹೋರಾಟವನ್ನೇ ಮಾಡಿದರು. ಸಾಕಷ್ಟು ವಿರೋಧ ಎದುರಾದರೂ ಅವುಗಳನ್ನೆಲ್ಲ ಮೀರಿ ನಿಂಬಾಳ ಗ್ರಾಮವನ್ನು ನಶೆಮುಕ್ತವಾಗಿಸುವಲ್ಲಿ ಯಶಸ್ವಿಯಾದರು. ಈ ಮಹಿಳೆಯರ ಹೋರಾಟದ ಕಥನ ಈ ವಿಡಿಯೊದಲ್ಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>