<p><strong>ಢಾಕಾ (ಬಾಂಗ್ಲಾದೇಶ):</strong> ‘ಸರಕು ಸಾಗಣೆ ಹಡಗು ಮತ್ತು ದೋಣಿಯ ನಡುವೆ ಡಿಕ್ಕಿ ಸಂಭವಿಸಿದ್ದು, 26 ಮಂದಿ ಮೃತಪಟ್ಟಿದ್ದಾರೆ’ ಎಂದು ಮಾಧ್ಯಮಗಳು ವರದಿ ಮಾಡಿವೆ.</p>.<p>ಈ ಘಟನೆ ಭಾನುವಾರ ಸಂಜೆ ನಾರಾಯಣ್ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಈ ದೋಣಿಯಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.</p>.<p>‘ಭಾನುವಾರ ಐದು ಶವಗಳನ್ನು ಪತ್ತೆ ಹಚ್ಚಲಾಗಿತ್ತು. ಸೋಮವಾರದ ವೇಳೆಗೆ ಒಟ್ಟು 21 ಶವಗಳನ್ನು ಹೊರ ತೆಗೆಯಲಾಯಿತು. ನೌಕಾಪಡೆ, ಕರಾವಳಿ ಕಾವಲು ಪಡೆ ಮತ್ತು ಅಗ್ನಿಶಾಮಕ ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ ’ ಎಂದು ಡಾಕಾ ಟ್ರಿಬ್ಯೂನ್ ವರದಿ ಮಾಡಿದೆ.</p>.<p>‘ಮುನ್ಶಿಗಂಜ್ನ ಸೈಯದ್ಪುರ ಕೊಯ್ಲಾ ಘಾಟ್ನ ಬಳಿ ಎಂಎಲ್ ಸಾಬಿತ್ ಅಲ್ ಹಸನ್ ಪ್ರಯಾಣಿಕರ ದೋಣಿ ಮತ್ತು ಎಸ್ಕೆಎಲ್ –3 ಸರಕು ಸಾಗಣೆ ಹಡಗಿನ ನಡುವೆ ಡಿಕ್ಕಿ ಸಂಭವಿಸಿದೆ. ಈ ವೇಳೆ ಪ್ರಯಾಣಿಕರ ದೋಣಿ ನೀರಿನಲ್ಲಿ ಮುಳುಗಿದೆ. ಆದರೆ ಸರಕು ಸಾಗಣೆ ಹಡಗು ಅಲ್ಲಿಂದ ಪರಾರಿಯಾಗಿದೆ’ ಎಂದು ವರದಿ ಹೇಳಿದೆ.</p>.<p>‘ಈ ಬಗ್ಗೆ ತನಿಖೆ ನಡೆಸಲು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತಂಡವನ್ನು ರೂಪಿಸಲಾಗಿದೆ’ ಎಂದು ನಾರಾಯಣ್ಗಂಜ್ನ ಉಪ ಆಯುಕ್ತ ಮುಸ್ತೇನ್ ಬಿಲ್ಹಾ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ (ಬಾಂಗ್ಲಾದೇಶ):</strong> ‘ಸರಕು ಸಾಗಣೆ ಹಡಗು ಮತ್ತು ದೋಣಿಯ ನಡುವೆ ಡಿಕ್ಕಿ ಸಂಭವಿಸಿದ್ದು, 26 ಮಂದಿ ಮೃತಪಟ್ಟಿದ್ದಾರೆ’ ಎಂದು ಮಾಧ್ಯಮಗಳು ವರದಿ ಮಾಡಿವೆ.</p>.<p>ಈ ಘಟನೆ ಭಾನುವಾರ ಸಂಜೆ ನಾರಾಯಣ್ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಈ ದೋಣಿಯಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.</p>.<p>‘ಭಾನುವಾರ ಐದು ಶವಗಳನ್ನು ಪತ್ತೆ ಹಚ್ಚಲಾಗಿತ್ತು. ಸೋಮವಾರದ ವೇಳೆಗೆ ಒಟ್ಟು 21 ಶವಗಳನ್ನು ಹೊರ ತೆಗೆಯಲಾಯಿತು. ನೌಕಾಪಡೆ, ಕರಾವಳಿ ಕಾವಲು ಪಡೆ ಮತ್ತು ಅಗ್ನಿಶಾಮಕ ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ ’ ಎಂದು ಡಾಕಾ ಟ್ರಿಬ್ಯೂನ್ ವರದಿ ಮಾಡಿದೆ.</p>.<p>‘ಮುನ್ಶಿಗಂಜ್ನ ಸೈಯದ್ಪುರ ಕೊಯ್ಲಾ ಘಾಟ್ನ ಬಳಿ ಎಂಎಲ್ ಸಾಬಿತ್ ಅಲ್ ಹಸನ್ ಪ್ರಯಾಣಿಕರ ದೋಣಿ ಮತ್ತು ಎಸ್ಕೆಎಲ್ –3 ಸರಕು ಸಾಗಣೆ ಹಡಗಿನ ನಡುವೆ ಡಿಕ್ಕಿ ಸಂಭವಿಸಿದೆ. ಈ ವೇಳೆ ಪ್ರಯಾಣಿಕರ ದೋಣಿ ನೀರಿನಲ್ಲಿ ಮುಳುಗಿದೆ. ಆದರೆ ಸರಕು ಸಾಗಣೆ ಹಡಗು ಅಲ್ಲಿಂದ ಪರಾರಿಯಾಗಿದೆ’ ಎಂದು ವರದಿ ಹೇಳಿದೆ.</p>.<p>‘ಈ ಬಗ್ಗೆ ತನಿಖೆ ನಡೆಸಲು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತಂಡವನ್ನು ರೂಪಿಸಲಾಗಿದೆ’ ಎಂದು ನಾರಾಯಣ್ಗಂಜ್ನ ಉಪ ಆಯುಕ್ತ ಮುಸ್ತೇನ್ ಬಿಲ್ಹಾ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>