ಧರ್ಮ ನಿಂದನೆ ಆರೋಪದ ಮೇರೆಗೆ ದಿಯಾವಾದಾನಾಗೆ ಅವರನ್ನು ಥಳಿಸಿ ಕೊಂದು, ಮೃತದೇಹಕ್ಕೆ ಬೆಂಕಿ ಹಚ್ಚಿದ್ದ ಉದ್ರಿಕ್ತ ಗುಂಪು, ಅವರು ಕೆಲಸ ಮಾಡುತ್ತಿದ್ದ ಕ್ರೀಡಾ ದಿರಿಸು ತಯಾರಿಸುವ ಉದ್ಯಮದ ಮಾಲೀಕರನ್ನೂ ಕೊಲ್ಲಲು ಮುಂದಾಗಿತ್ತು. ಕಾರ್ಖಾನೆಗೆ ಬೆಂಕಿ ಹಚ್ಚಲು ಸಹ ಯತ್ನಿಸಿತ್ತು. ಆದರೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಈ ಯತ್ನ ಫಲಿಸಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.