<p class="title"><strong>ಬೀಜಿಂಗ್</strong>: ಮಾನವ ಹಕ್ಕುಗಳ ರಕ್ಷಣೆಯಲ್ಲಿ ಯಾರೂ ಪರಿಪೂರ್ಣರಲ್ಲ. ಈ ಕುರಿತು ನಮಗೆ ಉಪದೇಶ ನೀಡುವ ಅಗತ್ಯವೂ ಇಲ್ಲ ಎಂದು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಬುಧವಾರ ವಿಶ್ವಸಂಸ್ಥೆಯ ಮಾನವಹಕ್ಕುಗಳ ಆಯೋಗದ ಹೈಕಮಿಷನರ್ ಮಿಚೆಲ್ ಬಚೆಲೆಟ್ ಅವರಿಗೆ ತಿಳಿಸಿದ್ದಾರೆ.</p>.<p class="title">ಈ ಮೂಲಕ ಉಯಿಗರ್ ಮುಸ್ಲಿಮರ ವಿರುದ್ಧದ ಮಾನವ ಹಕ್ಕುಗಳ ಉಲ್ಲಂಘನೆ ಆರೋಪವನ್ನು ತಳ್ಳಿಹಾಕಿದ್ದಾರೆ.</p>.<p class="title">ಇಸ್ಲಾಮಿಕ್ ಭಯೋತ್ಪಾದನೆ ನಿಗ್ರಹಿಸುವ ಭಾಗವಾಗಿ ಲಕ್ಷಾಂತರ ಉಯಿಗರ್ ಮುಸ್ಲಿಮರನ್ನು ಬಂಧಿಸಿರುವ ಆರೋಪ ಸಂಬಂಧ ತನಿಖೆ ನಡೆಸುವಂತೆ ಚೀನಾದೊಂದಿಗಿನ ಮಾತುಕತೆ ನನೆಗುದಿಗೆ ಬಿದ್ದಿದೆ. ಈ ಬೆನ್ನಲ್ಲೇಬುಧವಾರ ಬುಚೆಲೆಟ್ ಅವರೊಂದಿಗೆ ವಿಡಿಯೊ ಲಿಂಕ್ ಮೂಲಕ ಮಾತುಕತೆ ನಡೆಸಿದ ಷಿ ಜಿನ್ಪಿಂಗ್, ಮಾನವ ಹಕ್ಕುಗಳ ರಕ್ಷಣೆಗೆ ಚೀನಾ ಬದ್ಧವಾಗಿದೆ. ಮಾನವ ಹಕ್ಕುಗಳ ವಿಷಯದಲ್ಲಿ ನಿಷ್ಕಳಂಕ ದೇಶ ಎಂಬುದೇ ಇಲ್ಲ. ಈ ಕುರಿತು ನಮಗೆ ಉಪದೇಶ ಮಾಡುವ ಅಗತ್ಯ ಇಲ್ಲ. ಕುಂಟು ನೆಪದಲ್ಲಿ ಒಂದು ದೇಶದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಬೀಜಿಂಗ್</strong>: ಮಾನವ ಹಕ್ಕುಗಳ ರಕ್ಷಣೆಯಲ್ಲಿ ಯಾರೂ ಪರಿಪೂರ್ಣರಲ್ಲ. ಈ ಕುರಿತು ನಮಗೆ ಉಪದೇಶ ನೀಡುವ ಅಗತ್ಯವೂ ಇಲ್ಲ ಎಂದು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಬುಧವಾರ ವಿಶ್ವಸಂಸ್ಥೆಯ ಮಾನವಹಕ್ಕುಗಳ ಆಯೋಗದ ಹೈಕಮಿಷನರ್ ಮಿಚೆಲ್ ಬಚೆಲೆಟ್ ಅವರಿಗೆ ತಿಳಿಸಿದ್ದಾರೆ.</p>.<p class="title">ಈ ಮೂಲಕ ಉಯಿಗರ್ ಮುಸ್ಲಿಮರ ವಿರುದ್ಧದ ಮಾನವ ಹಕ್ಕುಗಳ ಉಲ್ಲಂಘನೆ ಆರೋಪವನ್ನು ತಳ್ಳಿಹಾಕಿದ್ದಾರೆ.</p>.<p class="title">ಇಸ್ಲಾಮಿಕ್ ಭಯೋತ್ಪಾದನೆ ನಿಗ್ರಹಿಸುವ ಭಾಗವಾಗಿ ಲಕ್ಷಾಂತರ ಉಯಿಗರ್ ಮುಸ್ಲಿಮರನ್ನು ಬಂಧಿಸಿರುವ ಆರೋಪ ಸಂಬಂಧ ತನಿಖೆ ನಡೆಸುವಂತೆ ಚೀನಾದೊಂದಿಗಿನ ಮಾತುಕತೆ ನನೆಗುದಿಗೆ ಬಿದ್ದಿದೆ. ಈ ಬೆನ್ನಲ್ಲೇಬುಧವಾರ ಬುಚೆಲೆಟ್ ಅವರೊಂದಿಗೆ ವಿಡಿಯೊ ಲಿಂಕ್ ಮೂಲಕ ಮಾತುಕತೆ ನಡೆಸಿದ ಷಿ ಜಿನ್ಪಿಂಗ್, ಮಾನವ ಹಕ್ಕುಗಳ ರಕ್ಷಣೆಗೆ ಚೀನಾ ಬದ್ಧವಾಗಿದೆ. ಮಾನವ ಹಕ್ಕುಗಳ ವಿಷಯದಲ್ಲಿ ನಿಷ್ಕಳಂಕ ದೇಶ ಎಂಬುದೇ ಇಲ್ಲ. ಈ ಕುರಿತು ನಮಗೆ ಉಪದೇಶ ಮಾಡುವ ಅಗತ್ಯ ಇಲ್ಲ. ಕುಂಟು ನೆಪದಲ್ಲಿ ಒಂದು ದೇಶದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>