<p><strong>ಬೀಜಿಂಗ್</strong>: ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸುವ ಆಶಯದೊಂದಿಗೆ ಚೀನಾವು ಮೂರು ಪುರುಷ ಗಗನಯಾತ್ರಿಗಳನ್ನು ತನ್ನ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸುವುದಾಗಿ ಸೋಮವಾರ ಹೇಳಿದೆ.</p>.<p>‘ಚೀನಾವು ಸರಕು ಸಾಗಣೆ ಬಾಹ್ಯಾಕಾಶ ನೌಕೆ ಟಿಯಾನುಜ್–2 ಅನ್ನು ಶನಿವಾರ ಉಡಾವಣೆ ಮಾಡಿತ್ತು. ಈ ನೌಕೆಯು ಬಾಹ್ಯಾಕಾಶದ ನಿಲ್ದಾಣದ ಘಟಕವಾದ ‘ತಿಯಾನ್ಹೆ’ಯಲ್ಲಿ ಉಪಕರಣ ಮತ್ತು ಸಾಮಾಗ್ರಿಗಳನ್ನು ಯಶಸ್ವಿಯಾಗಿ ತಲುಪಿಸಿದೆ’ ಎಂದು ಚೀನಾದ ಮಾನವಸಹಿತ ಬಾಹ್ಯಾಕಾಶ ಏಜೆನ್ಸಿ (ಸಿಎಂಸಿಎ) ತಿಳಿಸಿದೆ.</p>.<p>ಇದರ ಬೆನ್ನಲ್ಲೇ‘ಟಿಯಾಂಗಾಂಗ್’ ಬಾಹ್ಯಾಕಾಶ ನಿಲ್ದಾಣಕ್ಕೆ ಮೂವರು ಗಗನಯಾತ್ರಿಗಳನ್ನು ಕಳುಹಿಸಲು ಚೀನಾ ನಿರ್ಧರಿಸಿದೆ. ಈ ಗಗನಯಾತ್ರಿಗಳು ಮೂರು ತಿಂಗಳುಗಳ ಕಾಲ ಅಲ್ಲಿಯೇ ಉಳಿಯಲಿದ್ದಾರೆ.</p>.<p>‘ಜೂನ್ ತಿಂಗಳಲ್ಲಿ ಶೆನ್ಶಾವ್–12 ಗಗನನೌಕೆಯಲ್ಲಿ ಈ ಮೂವರು ಗಗನಯಾತ್ರಿಗಳು ಟಿಯಾಂಗಾಂಗ್ನತ್ತ ಪ್ರಯಾಣಿಸಲಿದ್ದಾರೆ. ಅವರು ಅಲ್ಲಿ ಹಲವು ಟಾಸ್ಕ್, ರಿಪೇರಿ, ನಿರ್ವಹಣೆ ಕಾರ್ಯಗಳು ಸೇರಿದಂತೆ ಇತರೆ ವೈಜ್ಞಾನಿಕ ಕೆಲಸಗಳನ್ನು ಮಾಡಲಿದ್ದಾರೆ. ಸದ್ಯ ಈ ಮೂವರು ಎರಡನೇ ಹಂತದ ಕ್ವಾರಂಟೈನಲ್ಲಿದ್ದಾರೆ’ ಎಂದು ಸಿಎಂಸಿಎ ನಿರ್ದೇಶಕ ಯಾಂಗ್ ಲಿವೇ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀಜಿಂಗ್</strong>: ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸುವ ಆಶಯದೊಂದಿಗೆ ಚೀನಾವು ಮೂರು ಪುರುಷ ಗಗನಯಾತ್ರಿಗಳನ್ನು ತನ್ನ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸುವುದಾಗಿ ಸೋಮವಾರ ಹೇಳಿದೆ.</p>.<p>‘ಚೀನಾವು ಸರಕು ಸಾಗಣೆ ಬಾಹ್ಯಾಕಾಶ ನೌಕೆ ಟಿಯಾನುಜ್–2 ಅನ್ನು ಶನಿವಾರ ಉಡಾವಣೆ ಮಾಡಿತ್ತು. ಈ ನೌಕೆಯು ಬಾಹ್ಯಾಕಾಶದ ನಿಲ್ದಾಣದ ಘಟಕವಾದ ‘ತಿಯಾನ್ಹೆ’ಯಲ್ಲಿ ಉಪಕರಣ ಮತ್ತು ಸಾಮಾಗ್ರಿಗಳನ್ನು ಯಶಸ್ವಿಯಾಗಿ ತಲುಪಿಸಿದೆ’ ಎಂದು ಚೀನಾದ ಮಾನವಸಹಿತ ಬಾಹ್ಯಾಕಾಶ ಏಜೆನ್ಸಿ (ಸಿಎಂಸಿಎ) ತಿಳಿಸಿದೆ.</p>.<p>ಇದರ ಬೆನ್ನಲ್ಲೇ‘ಟಿಯಾಂಗಾಂಗ್’ ಬಾಹ್ಯಾಕಾಶ ನಿಲ್ದಾಣಕ್ಕೆ ಮೂವರು ಗಗನಯಾತ್ರಿಗಳನ್ನು ಕಳುಹಿಸಲು ಚೀನಾ ನಿರ್ಧರಿಸಿದೆ. ಈ ಗಗನಯಾತ್ರಿಗಳು ಮೂರು ತಿಂಗಳುಗಳ ಕಾಲ ಅಲ್ಲಿಯೇ ಉಳಿಯಲಿದ್ದಾರೆ.</p>.<p>‘ಜೂನ್ ತಿಂಗಳಲ್ಲಿ ಶೆನ್ಶಾವ್–12 ಗಗನನೌಕೆಯಲ್ಲಿ ಈ ಮೂವರು ಗಗನಯಾತ್ರಿಗಳು ಟಿಯಾಂಗಾಂಗ್ನತ್ತ ಪ್ರಯಾಣಿಸಲಿದ್ದಾರೆ. ಅವರು ಅಲ್ಲಿ ಹಲವು ಟಾಸ್ಕ್, ರಿಪೇರಿ, ನಿರ್ವಹಣೆ ಕಾರ್ಯಗಳು ಸೇರಿದಂತೆ ಇತರೆ ವೈಜ್ಞಾನಿಕ ಕೆಲಸಗಳನ್ನು ಮಾಡಲಿದ್ದಾರೆ. ಸದ್ಯ ಈ ಮೂವರು ಎರಡನೇ ಹಂತದ ಕ್ವಾರಂಟೈನಲ್ಲಿದ್ದಾರೆ’ ಎಂದು ಸಿಎಂಸಿಎ ನಿರ್ದೇಶಕ ಯಾಂಗ್ ಲಿವೇ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>