‘ನನ್ನನ್ನು ತಪ್ಪಾಗಿ ಭಾವಿಸಬೇಡಿ. ಈ ದೇಶದಲ್ಲಿ ಬಿಕ್ಕಟ್ಟು ಎದುರಾಗಿದೆ. ರಾಷ್ಟ್ರೀಯ ತುರ್ತು ಪರಿಸ್ಥಿತಿಯೂ ಇದೆ. ನೀವುಲಸಿಕೆಪಡೆಯಲು ಬಯಸದಿದ್ದರೆ, ನಾನು ನಿಮ್ಮನ್ನು ಬಂಧಿಸುವೆ. ಅಲ್ಲದೆ ನಿಮ್ಮ ರಟ್ಟೆಗೆ ನಾನೇಲಸಿಕೆಚುಚ್ಚುತ್ತೇನೆ. ನೀವು ಕೀಟಗಳಿದ್ದಂತೆ. ನಾವು ಈಗಾಗಲೇ ತೊಂದರೆಯಲ್ಲಿದ್ದು, ನೀವು ಅದರ ಹೊರೆಯನ್ನು ಇನ್ನಷ್ಟು ಹೆಚ್ಚಿಸುತ್ತಿದ್ದೀರಿ’ ಎಂದು ಡುಟರ್ಟೆ ಹೇಳಿರುವುದಾಗಿ ಇನ್ಕ್ವೈರರ್ ಡಾಟ್ ನೆಟ್ ವರದಿ ಮಾಡಿದೆ.