ಪ್ರಧಾನಿ ರಾಜಪಕ್ಸ ಅವರು ಭಾನುವಾರ ಅನುರಾಧಪುರದಲ್ಲಿರುವ 2300 ವರ್ಷಗಳ ಇತಿಹಾಸವಿರುವ ಬೌದ್ಧ ಮಂದಿರಕ್ಕೆ ಬಂದಿದ್ದರು. ಈ ವೇಳೆ ಹತ್ತಾರು ಜನರು, ಪವಿತ್ರ ನಗರಕ್ಕೆ ಕಳ್ಳರನ್ನು ಬಿಟ್ಟುಕೊಳ್ಳಬಾರದು. ಅವರ ಮೇಲೆ ನಿರ್ಬಂಧ ಹೇರಬೇಕು ಎಂಬಂತಿರುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ಘೋಷಣೆ ಕೂಗಿದರು. ಪ್ರಧಾನಿ ಭದ್ರತೆಗಾಗಿ ವಿಶೇಷ ಕಾರ್ಯಪಡೆ(ಎಸ್ಟಿಎಫ್)ಯ ಭಾರಿ ಪ್ರಮಾಣದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.