ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಕ್ಕೆ ಭಾರತವು ಭಾನುವಾರ 44,000 ಮೆಟ್ರಿಕ್ ಟನ್ ಯೂರಿಯಾ ಪೂರೈಸಿದೆ.
ಹಣ ಪಾವತಿಸುವ ಬಗ್ಗೆ ಬ್ಯಾಂಕ್ ಖಾತರಿ (ಕ್ರೆಡಿಟ್ ಲೈನ್) ಆಧಾರದಲ್ಲಿ ಶ್ರೀಲಂಕಾಕ್ಕೆ ಭಾರತ ಈ ನೆರವು ನೀಡಿದೆ. ಶ್ರೀಲಂಕಾ ರೈತರಿಗೆ ಬೆಂಬಲವಾಗಿ ನಿಲ್ಲುವ ಗುರಿಯನ್ನು ಭಾರತ ಹೊಂದಿರುವುದಾಗಿ ಶ್ರೀಲಂಕಾದ ಭಾರತೀಯ ಹೈಕಮಿಷನರ್ ಹೇಳಿದ್ದಾರೆ.
ಸಂಕಷ್ಟದಲ್ಲಿರುವ ಶ್ರೀಲಂಕಾಕ್ಕೆ ಭಾರತ ಈಗಾಗಲೇ ಹಲವು ಬಾರಿ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸಿ ಸಹಾಯಹಸ್ತ ಚಾಚಿದೆ.
ಹಣದುಬ್ಬರದಿಂದಾಗಿ ಸುಮಾರು 60 ಲಕ್ಷ ಶ್ರೀಲಂಕನ್ನರು ಆಹಾರದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಿಶ್ವ ಸಂಸ್ಥೆ ಹೇಳಿದೆ.
Various sections, diverse demands: one partner -#India!!!!High Commissioner met the Hon'ble Agriculture Minister and informed him about the arrival of more than 44,000 MT of urea supplied under a credit line extended by 🇮🇳 to 🇱🇰. (1/2) pic.twitter.com/mTEPFsviZq