<p class="title"><strong>ಸಿಂಗಪುರ:</strong> ದೇಶದ ಅತಿ ಪುರಾತನ ಹಿಂದೂ ದೇವಾಲಯಕ್ಕೆ ಸೇರಿದ 20 ಲಕ್ಷ ಸಿಂಗಪುರ ಡಾಲರ್ ಮೌಲ್ಯದ ಆಭರಣವನ್ನು ಗಿರವಿ ಇಡುವ ಮೂಲಕ ಭಾರತ ಮೂಲದ 37 ವರ್ಷದ ಮುಖ್ಯ ಅರ್ಚಕ ವಿಶ್ವಾಸ ದ್ರೋಹದ ಕ್ರಿಮಿನಲ್ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.</p>.<p class="title">ಕ್ರಿಮಿನಲ್ ವಿಶ್ವಾಸದ್ರೋಹಕ್ಕೆ ಸಂಬಂಧಿಸಿದಂತೆ ಅರ್ಚಕ ಕಂದಸ್ವಾಮಿ ಸೇನಾಪತಿ ವಿರುದ್ಧ ಐದು ಆರೋಪಗಳನ್ನು ಹೊರಿಸಲಾಗಿದೆ. ಭ್ರಷ್ಟಾಚಾರ, ಡ್ರಗ್ಸ್ ಸಾಗಣೆ ಆರೋಪವೂ ಇದರಲ್ಲಿ ಸೇರಿದೆ ಎಂದು ಚಾನಲ್ ನ್ಯೂಸ್ ಏಷಿಯಾ ವರದಿ ಮಾಡಿದೆ.</p>.<p class="title">ಕಂದಸ್ವಾಮಿ ಇಲ್ಲಿನ ಶ್ರೀ ಮರಿಯಮ್ಮ ದೇವಸ್ಥಾನದ ಮುಖ್ಯ ಅರ್ಚಕರು. ದೇಗುಲದ ಆಭರಣಗಳನ್ನು 2016 ರಿಂದ 2020ರ ಅವಧಿಯಲ್ಲಿ ಪದೇ ಪದೇ ಅವರು ಗಿರವಿ ಇಟ್ಟಿದ್ದು, ಹಣವನ್ನು ತಮ್ಮ ವಹಿವಾಟಿಗೆ ಬಳಸಿದ್ದರು ಎಂದು ಆರೋಪಿಸಲಾಗಿದೆ.</p>.<p class="title">ಗಿರವಿ ಇಟ್ಟಿದ್ದ ಮೊತ್ತದ ವಹಿವಾಟು ಸುಮಾರು ₹ 10.09 ಕೋಟಿ (2 ಮಿಲಿಯನ್ ಸಿಂಗಪುರ ಡಾಲರ್) ಎಂದು ದೂರಿನಲ್ಲಿ ತಿಳಿಸಲಾಗಿದೆ. ಸುಮಾರು 106,503 ಸಿಂಗಪುರ ಡಾಲರ್ ಅನ್ನು (₹ 77.4 ಲಕ್ಷ) ದೇಶದ ಹೊರಗೆ ನಿಯಮಬಾಹಿರವಾಗಿ ಸಾಗಿಸಿದ್ದಾರೆ ಎಂದು ಆರೋಪಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಸಿಂಗಪುರ:</strong> ದೇಶದ ಅತಿ ಪುರಾತನ ಹಿಂದೂ ದೇವಾಲಯಕ್ಕೆ ಸೇರಿದ 20 ಲಕ್ಷ ಸಿಂಗಪುರ ಡಾಲರ್ ಮೌಲ್ಯದ ಆಭರಣವನ್ನು ಗಿರವಿ ಇಡುವ ಮೂಲಕ ಭಾರತ ಮೂಲದ 37 ವರ್ಷದ ಮುಖ್ಯ ಅರ್ಚಕ ವಿಶ್ವಾಸ ದ್ರೋಹದ ಕ್ರಿಮಿನಲ್ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.</p>.<p class="title">ಕ್ರಿಮಿನಲ್ ವಿಶ್ವಾಸದ್ರೋಹಕ್ಕೆ ಸಂಬಂಧಿಸಿದಂತೆ ಅರ್ಚಕ ಕಂದಸ್ವಾಮಿ ಸೇನಾಪತಿ ವಿರುದ್ಧ ಐದು ಆರೋಪಗಳನ್ನು ಹೊರಿಸಲಾಗಿದೆ. ಭ್ರಷ್ಟಾಚಾರ, ಡ್ರಗ್ಸ್ ಸಾಗಣೆ ಆರೋಪವೂ ಇದರಲ್ಲಿ ಸೇರಿದೆ ಎಂದು ಚಾನಲ್ ನ್ಯೂಸ್ ಏಷಿಯಾ ವರದಿ ಮಾಡಿದೆ.</p>.<p class="title">ಕಂದಸ್ವಾಮಿ ಇಲ್ಲಿನ ಶ್ರೀ ಮರಿಯಮ್ಮ ದೇವಸ್ಥಾನದ ಮುಖ್ಯ ಅರ್ಚಕರು. ದೇಗುಲದ ಆಭರಣಗಳನ್ನು 2016 ರಿಂದ 2020ರ ಅವಧಿಯಲ್ಲಿ ಪದೇ ಪದೇ ಅವರು ಗಿರವಿ ಇಟ್ಟಿದ್ದು, ಹಣವನ್ನು ತಮ್ಮ ವಹಿವಾಟಿಗೆ ಬಳಸಿದ್ದರು ಎಂದು ಆರೋಪಿಸಲಾಗಿದೆ.</p>.<p class="title">ಗಿರವಿ ಇಟ್ಟಿದ್ದ ಮೊತ್ತದ ವಹಿವಾಟು ಸುಮಾರು ₹ 10.09 ಕೋಟಿ (2 ಮಿಲಿಯನ್ ಸಿಂಗಪುರ ಡಾಲರ್) ಎಂದು ದೂರಿನಲ್ಲಿ ತಿಳಿಸಲಾಗಿದೆ. ಸುಮಾರು 106,503 ಸಿಂಗಪುರ ಡಾಲರ್ ಅನ್ನು (₹ 77.4 ಲಕ್ಷ) ದೇಶದ ಹೊರಗೆ ನಿಯಮಬಾಹಿರವಾಗಿ ಸಾಗಿಸಿದ್ದಾರೆ ಎಂದು ಆರೋಪಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>