<p><strong>ಲಾಸ್ ಏಂಜಲಿಸ್: </strong>ಇತ್ತೀಚೆಗೆ ಕ್ಯಾಲಿಫೊರ್ನಿಯಾದಲ್ಲಿ ನಡೆದ ಗುಂಡಿನ ದಾಳಿ ಸಂದರ್ಭದಲ್ಲಿ ಹಲವರನ್ನು ರಕ್ಷಿಸಿ ಸಾವಿಗೀಡಾದ ಭಾರತ ಮೂಲದ ತಪ್ತೆಜದೀಪ್ ಸಿಂಗ್ ಅವರಿಗೆ ‘ಹೀರೊ’ ಪಟ್ಟ ನೀಡಿ ಗೌರವಿಸಲಾಗುತ್ತಿದೆ.</p>.<p>ಮೇ 26ರಂದು ನಡೆದ ದಾಳಿಯಲ್ಲಿ ತಪ್ತೆಜದೀಪ್ ಸಿಂಗ್ ಸೇರಿದಂತೆ ಒಂಬತ್ತು ಮಂದಿ ಸಾವಿಗೀಡಾಗಿದ್ದರು. ‘ವ್ಯಾಲಿ ಟ್ರಾನ್ಸ್ಫೋರ್ಟ್ ಅಥಾರಿಟಿ’ಯ (ವಿಟಿಎ) ಉದ್ಯೋಗಿಗಳ ಮೇಲೆ ಈ ದಾಳಿ ನಡೆಸಲಾಗಿತ್ತು.</p>.<p>ತಪ್ತೆಜದೀಪ್ ಸಿಂಗ್ (36) ಮೌಲ್ಯಯುತ ಜೀವನ ನಡೆಸಿದ್ದರು ಮತ್ತು ಇತರರ ಸೇವೆಯಲ್ಲಿ ತೊಡಗಿದ್ದರು ಎಂದು ಅವರ ಕುಟುಂಬದ ಸದಸ್ಯರು ಸ್ಮರಿಸಿದ್ದಾರೆ.</p>.<p>‘ಸಿಂಗ್ ಅವರಿಂದಾಗಿ ಹಲವರು ಇಂದು ಸುರಕ್ಷಿತವಾಗಿದ್ದಾರೆ. ಅವರನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ವಿಟಿಎ ಉದ್ಯೋಗಿ ಸುಖವೀರ್ ಸಿಂಗ್ ಸ್ಮರಿಸಿದ್ದಾರೆ.</p>.<p>ಗುರುವಾರ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ಸ್ಯಾನ್ ಜೋಸ್ ಸಿಟಿ ಹಾಲ್ನಲ್ಲಿ ಸೇರಿ ವಿಟಿಎ ದಾಳಿಯಲ್ಲಿ ಸಾವಿಗೀಡಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.</p>.<p>ದಾಳಿ ನಡೆಸಿದ ಬಂದೂಕುಧಾರಿ ಸ್ಯಾಮುಲ್ ಕ್ಯಾಸ್ಸಿಡಿಗೆ (57), ಕೆಲವರ ಮೇಲೆ ದ್ವೇಷ ಇತ್ತು. ದಾಳಿ ನಡೆಸಿದ ಸಂದರ್ಭದಲ್ಲಿ ಎಲ್ಲರ ಮೇಲೆಯೂ ಆತ ಗುಂಡು ಹಾರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಾಸ್ ಏಂಜಲಿಸ್: </strong>ಇತ್ತೀಚೆಗೆ ಕ್ಯಾಲಿಫೊರ್ನಿಯಾದಲ್ಲಿ ನಡೆದ ಗುಂಡಿನ ದಾಳಿ ಸಂದರ್ಭದಲ್ಲಿ ಹಲವರನ್ನು ರಕ್ಷಿಸಿ ಸಾವಿಗೀಡಾದ ಭಾರತ ಮೂಲದ ತಪ್ತೆಜದೀಪ್ ಸಿಂಗ್ ಅವರಿಗೆ ‘ಹೀರೊ’ ಪಟ್ಟ ನೀಡಿ ಗೌರವಿಸಲಾಗುತ್ತಿದೆ.</p>.<p>ಮೇ 26ರಂದು ನಡೆದ ದಾಳಿಯಲ್ಲಿ ತಪ್ತೆಜದೀಪ್ ಸಿಂಗ್ ಸೇರಿದಂತೆ ಒಂಬತ್ತು ಮಂದಿ ಸಾವಿಗೀಡಾಗಿದ್ದರು. ‘ವ್ಯಾಲಿ ಟ್ರಾನ್ಸ್ಫೋರ್ಟ್ ಅಥಾರಿಟಿ’ಯ (ವಿಟಿಎ) ಉದ್ಯೋಗಿಗಳ ಮೇಲೆ ಈ ದಾಳಿ ನಡೆಸಲಾಗಿತ್ತು.</p>.<p>ತಪ್ತೆಜದೀಪ್ ಸಿಂಗ್ (36) ಮೌಲ್ಯಯುತ ಜೀವನ ನಡೆಸಿದ್ದರು ಮತ್ತು ಇತರರ ಸೇವೆಯಲ್ಲಿ ತೊಡಗಿದ್ದರು ಎಂದು ಅವರ ಕುಟುಂಬದ ಸದಸ್ಯರು ಸ್ಮರಿಸಿದ್ದಾರೆ.</p>.<p>‘ಸಿಂಗ್ ಅವರಿಂದಾಗಿ ಹಲವರು ಇಂದು ಸುರಕ್ಷಿತವಾಗಿದ್ದಾರೆ. ಅವರನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ವಿಟಿಎ ಉದ್ಯೋಗಿ ಸುಖವೀರ್ ಸಿಂಗ್ ಸ್ಮರಿಸಿದ್ದಾರೆ.</p>.<p>ಗುರುವಾರ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ಸ್ಯಾನ್ ಜೋಸ್ ಸಿಟಿ ಹಾಲ್ನಲ್ಲಿ ಸೇರಿ ವಿಟಿಎ ದಾಳಿಯಲ್ಲಿ ಸಾವಿಗೀಡಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.</p>.<p>ದಾಳಿ ನಡೆಸಿದ ಬಂದೂಕುಧಾರಿ ಸ್ಯಾಮುಲ್ ಕ್ಯಾಸ್ಸಿಡಿಗೆ (57), ಕೆಲವರ ಮೇಲೆ ದ್ವೇಷ ಇತ್ತು. ದಾಳಿ ನಡೆಸಿದ ಸಂದರ್ಭದಲ್ಲಿ ಎಲ್ಲರ ಮೇಲೆಯೂ ಆತ ಗುಂಡು ಹಾರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>