<p><strong>ಮೌಂಟ್ ಸಿನಾಬಂಗ್: </strong>ಇಂಡೋನೇಷ್ಯಾದ ಸುಮಾತ್ರ ದ್ವೀಪದ ಸಿನಾಬಂಗ್ ಪರ್ವತದಲ್ಲಿ ಗುರುವಾರ ಜ್ವಾಲಾಮುಖಿ ಸ್ಫೋಟಿಸಿದ್ದು, ಮುಗಿಲೆತ್ತರಕ್ಕೆ ಬಿಸಿಮೋಡಗಳು ಆವರಿಸಿವೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.</p>.<p>‘ಉತ್ತರ ಸುಮಾತ್ರದ ಸಿನಾಬಂಗ್ ಪರ್ವತದಲ್ಲಿ ಉಂಟಾದ ಜ್ವಾಲಾಮುಖಿಯಿಂದಾಗಿ 1,000 ಮೀಟರ್ ಎತ್ತರಕ್ಕೆ ಹೊಗೆ ಮತ್ತು ಬೂದಿ ತುಂಬಿ ಹೋಗಿವೆ. ಅಲ್ಲದೆ 3 ಕಿ.ಮೀ ತನಕ ಬಿಸಿ ಮೋಡಗಳು ಆವರಿಸಿವೆ’ ಎಂದು ಇಂಡೋನೇಷ್ಯಾದ ಜ್ವಾಲಾಮುಖಿ ಮತ್ತು ಭೂವೈಜ್ಞಾನಿಕ ಅಪಾಯ ನಿರ್ವಹಣಾಕೇಂದ್ರ ತಿಳಿಸಿದೆ.</p>.<p>‘ಈವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಜ್ವಾಲಾಮುಖಿ ಕಾಣಿಸಿಕೊಂಡ ಸ್ಥಳದಿಂದ 5 ಕಿ.ಮೀ.ನಷ್ಟು ದೂರವೇ ಇರಲು ಸ್ಥಳೀಯರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಶಿಲಾರಸ ಚಿಮ್ಮುವ ಸಾಧ್ಯತೆ ಇರುವುದರಿಂದ ಇದರ ಮೇಲೆ ನಿಗಾಯಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಸಿನಾಬಂಗ್ನ ಮೇಲ್ವಿಚಾರಣಾ ಕೇಂದ್ರದಅಧಿಕಾರಿ ಅರ್ಮೆನ್ ಪುತ್ರ ತಿಳಿಸಿದರು.</p>.<p>ಕಳೆದ ಕೆಲವು ವರ್ಷಗಳಿಂದ ಆಗಾಗ ಸಂಭವಿಸುತ್ತಿರುವಸಿನಾಬಂಗ್ ಜ್ವಾಲಾಮುಖಿಯಿಂದಾಗಿ ಸುತ್ತಮುತ್ತಲಿನ 30 ಸಾವಿರಕ್ಕೂ ಅಧಿಕ ಸ್ಥಳೀಯರು ತಮ್ಮ ಮನೆಗಳನ್ನು ಬಿಟ್ಟು ಬಂದಿದ್ದಾರೆ. 2014ರಲ್ಲಿ ಭುಗಿಲೆದ್ದ ಲಾವಾರಸ17 ಮಂದಿಯನ್ನು ಬಲಿ ಪಡೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೌಂಟ್ ಸಿನಾಬಂಗ್: </strong>ಇಂಡೋನೇಷ್ಯಾದ ಸುಮಾತ್ರ ದ್ವೀಪದ ಸಿನಾಬಂಗ್ ಪರ್ವತದಲ್ಲಿ ಗುರುವಾರ ಜ್ವಾಲಾಮುಖಿ ಸ್ಫೋಟಿಸಿದ್ದು, ಮುಗಿಲೆತ್ತರಕ್ಕೆ ಬಿಸಿಮೋಡಗಳು ಆವರಿಸಿವೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.</p>.<p>‘ಉತ್ತರ ಸುಮಾತ್ರದ ಸಿನಾಬಂಗ್ ಪರ್ವತದಲ್ಲಿ ಉಂಟಾದ ಜ್ವಾಲಾಮುಖಿಯಿಂದಾಗಿ 1,000 ಮೀಟರ್ ಎತ್ತರಕ್ಕೆ ಹೊಗೆ ಮತ್ತು ಬೂದಿ ತುಂಬಿ ಹೋಗಿವೆ. ಅಲ್ಲದೆ 3 ಕಿ.ಮೀ ತನಕ ಬಿಸಿ ಮೋಡಗಳು ಆವರಿಸಿವೆ’ ಎಂದು ಇಂಡೋನೇಷ್ಯಾದ ಜ್ವಾಲಾಮುಖಿ ಮತ್ತು ಭೂವೈಜ್ಞಾನಿಕ ಅಪಾಯ ನಿರ್ವಹಣಾಕೇಂದ್ರ ತಿಳಿಸಿದೆ.</p>.<p>‘ಈವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಜ್ವಾಲಾಮುಖಿ ಕಾಣಿಸಿಕೊಂಡ ಸ್ಥಳದಿಂದ 5 ಕಿ.ಮೀ.ನಷ್ಟು ದೂರವೇ ಇರಲು ಸ್ಥಳೀಯರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಶಿಲಾರಸ ಚಿಮ್ಮುವ ಸಾಧ್ಯತೆ ಇರುವುದರಿಂದ ಇದರ ಮೇಲೆ ನಿಗಾಯಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಸಿನಾಬಂಗ್ನ ಮೇಲ್ವಿಚಾರಣಾ ಕೇಂದ್ರದಅಧಿಕಾರಿ ಅರ್ಮೆನ್ ಪುತ್ರ ತಿಳಿಸಿದರು.</p>.<p>ಕಳೆದ ಕೆಲವು ವರ್ಷಗಳಿಂದ ಆಗಾಗ ಸಂಭವಿಸುತ್ತಿರುವಸಿನಾಬಂಗ್ ಜ್ವಾಲಾಮುಖಿಯಿಂದಾಗಿ ಸುತ್ತಮುತ್ತಲಿನ 30 ಸಾವಿರಕ್ಕೂ ಅಧಿಕ ಸ್ಥಳೀಯರು ತಮ್ಮ ಮನೆಗಳನ್ನು ಬಿಟ್ಟು ಬಂದಿದ್ದಾರೆ. 2014ರಲ್ಲಿ ಭುಗಿಲೆದ್ದ ಲಾವಾರಸ17 ಮಂದಿಯನ್ನು ಬಲಿ ಪಡೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>