‘ಉಕ್ರೇನ್ನಿಂದ ಭಾರತದ ಮೂಲಕ ಈಗಷ್ಟೇ ನಾಲ್ವರು ನೇಪಾಳ ಪ್ರಜೆಗಳು ಇಲ್ಲಿಗೆ ತಲುಪಿದ್ದಾರೆ. ಆಪರೇಷನ್ ಗಂಗಾ ಮೂಲಕ ನಮ್ಮ ದೇಶದ ನಾಗರಿಕರನ್ನು ಇಲ್ಲಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ದೇವುಬಾ ಶನಿವಾರ ಟ್ವೀಟ್ವೊಂದರಲ್ಲಿ ಹೇಳಿದ್ದಾರೆ.