<p><strong>ಮೆಲ್ಬರ್ನ್/ವೆಲ್ಲಿಂಗ್ಟನ್</strong>: ಕೋವಿಡ್–19 ಪಿಡುಗಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ನೆರವು ನೀಡುವ ಸಲುವಾಗಿ ರೆಡ್ ಕ್ರಾಸ್ ಸಂಸ್ಥೆಗೆ ₹ 5 ಕೋಟಿ (ಹತ್ತುಲಕ್ಷ ನ್ಯೂಜೆಲೆಂಡ್ ಡಾಲರ್) ನೀಡುವುದಾಗಿ ನ್ಯೂಜಿಲೆಂಡ್ ಘೋಷಿಸಿದೆ.</p>.<p>‘ಇಂಥ ಸಂಕಷ್ಟದ ಸಮಯದಲ್ಲಿ ನಾವು ಭಾರತದೊಂದಿಗೆ ನಿಲ್ಲುತ್ತೇವೆ. ಈ ಪಿಡುಗಿನ ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ಆರೋಗ್ಯ ಕ್ಷೇತ್ರದ ಕಾರ್ಯಕರ್ತರ ಕಾರ್ಯ ಶ್ಲಾಘನೀಯ’ ಎಂದು ನ್ಯೂಜಿಲೆಂಡ್ನ ವಿದೇಶಾಂಗ ಸಚಿವೆ ನ್ಯಾನಿಯಾ ಮಹುತಾ ಬುಧವಾರ ಹೇಳಿದರು.</p>.<p>‘ರೆಡ್ಕ್ರಾಸ್ ಸಂಸ್ಥೆ ಸಂಕಷ್ಟದಲ್ಲಿರುವ ದೇಶಗಳಿಗೆ ನೆರವು ನೀಡುವ ಅಂತರರಾಷ್ಟ್ರೀಯ ಸಂಘಟನೆಯಾಗಿದ್ದು, ತನ್ನ ಕಾರ್ಯಗಳಿಗಾಗಿ ಅದು ಜಾಗತಿಕ ಮನ್ನಣೆಯನ್ನೂ ಪಡೆದಿದೆ. ಹೀಗಾಗಿ ಸಂಘಟನೆಗೆ ದೇಣಿಗೆ ನೀಡುವ ಮೂಲಕ ಭಾರತಕ್ಕೆ ನಾವು ನಿಜವಾದ ನೆರವು ನೀಡಬಹುದಾಗಿದೆ’ ಎಂಬ ಮಹುತಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಜಿಲೆಂಡ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.</p>.<p><a href="https://www.prajavani.net/world-news/singapore-dispatches-first-consignment-of-oxygen-cylinders-to-india-to-support-fight-against-covid-826299.html" itemprop="url">ಕೋವಿಡ್–19: ಸಿಂಗಾಪುರದಿಂದ ಮೊದಲ ಹಂತದ ಆಕ್ಸಿಜನ್ ಸಿಲಿಂಡರ್ಗಳು ಭಾರತಕ್ಕೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೆಲ್ಬರ್ನ್/ವೆಲ್ಲಿಂಗ್ಟನ್</strong>: ಕೋವಿಡ್–19 ಪಿಡುಗಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ನೆರವು ನೀಡುವ ಸಲುವಾಗಿ ರೆಡ್ ಕ್ರಾಸ್ ಸಂಸ್ಥೆಗೆ ₹ 5 ಕೋಟಿ (ಹತ್ತುಲಕ್ಷ ನ್ಯೂಜೆಲೆಂಡ್ ಡಾಲರ್) ನೀಡುವುದಾಗಿ ನ್ಯೂಜಿಲೆಂಡ್ ಘೋಷಿಸಿದೆ.</p>.<p>‘ಇಂಥ ಸಂಕಷ್ಟದ ಸಮಯದಲ್ಲಿ ನಾವು ಭಾರತದೊಂದಿಗೆ ನಿಲ್ಲುತ್ತೇವೆ. ಈ ಪಿಡುಗಿನ ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ಆರೋಗ್ಯ ಕ್ಷೇತ್ರದ ಕಾರ್ಯಕರ್ತರ ಕಾರ್ಯ ಶ್ಲಾಘನೀಯ’ ಎಂದು ನ್ಯೂಜಿಲೆಂಡ್ನ ವಿದೇಶಾಂಗ ಸಚಿವೆ ನ್ಯಾನಿಯಾ ಮಹುತಾ ಬುಧವಾರ ಹೇಳಿದರು.</p>.<p>‘ರೆಡ್ಕ್ರಾಸ್ ಸಂಸ್ಥೆ ಸಂಕಷ್ಟದಲ್ಲಿರುವ ದೇಶಗಳಿಗೆ ನೆರವು ನೀಡುವ ಅಂತರರಾಷ್ಟ್ರೀಯ ಸಂಘಟನೆಯಾಗಿದ್ದು, ತನ್ನ ಕಾರ್ಯಗಳಿಗಾಗಿ ಅದು ಜಾಗತಿಕ ಮನ್ನಣೆಯನ್ನೂ ಪಡೆದಿದೆ. ಹೀಗಾಗಿ ಸಂಘಟನೆಗೆ ದೇಣಿಗೆ ನೀಡುವ ಮೂಲಕ ಭಾರತಕ್ಕೆ ನಾವು ನಿಜವಾದ ನೆರವು ನೀಡಬಹುದಾಗಿದೆ’ ಎಂಬ ಮಹುತಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಜಿಲೆಂಡ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.</p>.<p><a href="https://www.prajavani.net/world-news/singapore-dispatches-first-consignment-of-oxygen-cylinders-to-india-to-support-fight-against-covid-826299.html" itemprop="url">ಕೋವಿಡ್–19: ಸಿಂಗಾಪುರದಿಂದ ಮೊದಲ ಹಂತದ ಆಕ್ಸಿಜನ್ ಸಿಲಿಂಡರ್ಗಳು ಭಾರತಕ್ಕೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>