<p><strong>ಮೈಡುಗುರಿ:</strong> ಕಳೆದ ವಾರ ವಾಯವ್ಯ ನೈಜೀರಿಯಾದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಅಪಹರಿಸಿದ್ದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ನೈಜೀರಿಯಾದ ಕ್ಯಾಟ್ಸಿನಾ ರಾಜ್ಯದ ರಾಜ್ಯಪಾಲರು ತಿಳಿಸಿದ್ದಾರೆ.</p>.<p>ಅಪಹರಣಕಾರರ ಜತೆ ಮಾತುಕತೆಯ ಬಳಿಕ ಭದ್ರತಾ ಅಧಿಕಾರಿಗಳು 344 ವಿದ್ಯಾರ್ಥಿಗಳನ್ನು ಕ್ಯಾಟ್ಸಿನಾಗೆ ಕರೆ ತರುತ್ತಿದ್ದಾರೆ. ಅಲ್ಲಿ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು. ಬಳಿಕ ಮಕ್ಕಳನ್ನು ಪೋಷಕರಿಗೆ ಒಪ್ಪಿಸಲಾಗುವುದು ಎಂದು ಕ್ಯಾಟ್ಸಿನಾದ ರಾಜ್ಯಪಾಲ ಅಮೀನು ಬೆಲ್ಲೊ ಮಸಾರಿ ಅವರು ಮಾಹಿತಿ ನೀಡಿದ್ದಾರೆ.</p>.<p>‘ನಾವು ಬಹುತೇಕ ಮಕ್ಕಳನ್ನು ಅಪಹರಣಕಾರರಿಂದ ಬಿಡುಗಡೆಗೊಳಿಸುವಲ್ಲಿ ಸಫಲರಾಗಿದ್ದೇವೆ’ ಎಂದು ಅವರು ಹೇಳಿದರು. ಆದರೆ ಸರ್ಕಾರವು ಅಪಹರಣಕಾರರಿಗೆ ಹಣ ನೀಡಿದೆಯೇ ಎಂಬುದರ ಬಗ್ಗೆ ಏನೂ ತಿಳಿಸಿಲ್ಲ.</p>.<p>ಮಕ್ಕಳ ಬಿಡುಗಡೆಯನ್ನು ಸ್ವಾಗತಿಸಿದ ನೈಜೀರಿಯಾದ ಅಧ್ಯಕ್ಷ ಮೊಹಮದ್ ಬುಹಾರಿ ಅವರು,‘ಇದು ಮಕ್ಕಳ ಕುಟುಂಬದವರು ಮಾತ್ರವಲ್ಲದೇ ಸಂಪೂರ್ಣ ದೇಶ ಮತ್ತು ಅಂತರರಾಷ್ಟ್ರೀಯ ಸಮುದಾಯಗಳಿಗೆ ದೊಡ್ಡ ಸಮಾಧಾನವನ್ನು ನೀಡಿದೆ’ ಎಂದರು.</p>.<p>ಕಳೆದ ವಾರ ಕ್ಯಾಟ್ಸಿನಾದ ಕಂಕಾರ ಗ್ರಾಮದ ಸರ್ಕಾರಿ ವಿಜ್ಞಾನ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳನ್ನು ಅಪಹರಿಸಲಾಗಿತ್ತು. ಈ ದಾಳಿಯ ಹೊಣೆಯನ್ನು ಬೊಕೊ ಹರಾಮ್ ಜಿಹಾದಿ ಗುಂಪು ವಹಿಸಿಕೊಂಡಿತ್ತು.ಜಿಹಾದಿ ಗುಂಪು ಪಾಶ್ಚಾತ್ಯ ಶಿಕ್ಷಣವನ್ನು ವಿರೋಧಿಸಿ ಈ ಕೃತ್ಯ ಎಸಗಿತ್ತು. ಈ ದಾಳಿಯ ವೇಳೆ ಶಾಲೆಯಲ್ಲಿ ಸುಮಾರು 800 ವಿದ್ಯಾರ್ಥಿಗಳಿದ್ದರು. ಅದರಲ್ಲಿ 330ಕ್ಕೂ ಹೆಚ್ಚು ಮಕ್ಕಳನ್ನು ಅಪಹರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಡುಗುರಿ:</strong> ಕಳೆದ ವಾರ ವಾಯವ್ಯ ನೈಜೀರಿಯಾದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಅಪಹರಿಸಿದ್ದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ನೈಜೀರಿಯಾದ ಕ್ಯಾಟ್ಸಿನಾ ರಾಜ್ಯದ ರಾಜ್ಯಪಾಲರು ತಿಳಿಸಿದ್ದಾರೆ.</p>.<p>ಅಪಹರಣಕಾರರ ಜತೆ ಮಾತುಕತೆಯ ಬಳಿಕ ಭದ್ರತಾ ಅಧಿಕಾರಿಗಳು 344 ವಿದ್ಯಾರ್ಥಿಗಳನ್ನು ಕ್ಯಾಟ್ಸಿನಾಗೆ ಕರೆ ತರುತ್ತಿದ್ದಾರೆ. ಅಲ್ಲಿ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು. ಬಳಿಕ ಮಕ್ಕಳನ್ನು ಪೋಷಕರಿಗೆ ಒಪ್ಪಿಸಲಾಗುವುದು ಎಂದು ಕ್ಯಾಟ್ಸಿನಾದ ರಾಜ್ಯಪಾಲ ಅಮೀನು ಬೆಲ್ಲೊ ಮಸಾರಿ ಅವರು ಮಾಹಿತಿ ನೀಡಿದ್ದಾರೆ.</p>.<p>‘ನಾವು ಬಹುತೇಕ ಮಕ್ಕಳನ್ನು ಅಪಹರಣಕಾರರಿಂದ ಬಿಡುಗಡೆಗೊಳಿಸುವಲ್ಲಿ ಸಫಲರಾಗಿದ್ದೇವೆ’ ಎಂದು ಅವರು ಹೇಳಿದರು. ಆದರೆ ಸರ್ಕಾರವು ಅಪಹರಣಕಾರರಿಗೆ ಹಣ ನೀಡಿದೆಯೇ ಎಂಬುದರ ಬಗ್ಗೆ ಏನೂ ತಿಳಿಸಿಲ್ಲ.</p>.<p>ಮಕ್ಕಳ ಬಿಡುಗಡೆಯನ್ನು ಸ್ವಾಗತಿಸಿದ ನೈಜೀರಿಯಾದ ಅಧ್ಯಕ್ಷ ಮೊಹಮದ್ ಬುಹಾರಿ ಅವರು,‘ಇದು ಮಕ್ಕಳ ಕುಟುಂಬದವರು ಮಾತ್ರವಲ್ಲದೇ ಸಂಪೂರ್ಣ ದೇಶ ಮತ್ತು ಅಂತರರಾಷ್ಟ್ರೀಯ ಸಮುದಾಯಗಳಿಗೆ ದೊಡ್ಡ ಸಮಾಧಾನವನ್ನು ನೀಡಿದೆ’ ಎಂದರು.</p>.<p>ಕಳೆದ ವಾರ ಕ್ಯಾಟ್ಸಿನಾದ ಕಂಕಾರ ಗ್ರಾಮದ ಸರ್ಕಾರಿ ವಿಜ್ಞಾನ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳನ್ನು ಅಪಹರಿಸಲಾಗಿತ್ತು. ಈ ದಾಳಿಯ ಹೊಣೆಯನ್ನು ಬೊಕೊ ಹರಾಮ್ ಜಿಹಾದಿ ಗುಂಪು ವಹಿಸಿಕೊಂಡಿತ್ತು.ಜಿಹಾದಿ ಗುಂಪು ಪಾಶ್ಚಾತ್ಯ ಶಿಕ್ಷಣವನ್ನು ವಿರೋಧಿಸಿ ಈ ಕೃತ್ಯ ಎಸಗಿತ್ತು. ಈ ದಾಳಿಯ ವೇಳೆ ಶಾಲೆಯಲ್ಲಿ ಸುಮಾರು 800 ವಿದ್ಯಾರ್ಥಿಗಳಿದ್ದರು. ಅದರಲ್ಲಿ 330ಕ್ಕೂ ಹೆಚ್ಚು ಮಕ್ಕಳನ್ನು ಅಪಹರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>