<p><strong>ಲಾಹೋರ್ : </strong>ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಬಂಧನಕ್ಕೆ ಪಾಕ್ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ನಡೆಸುತ್ತಿದ್ದ ಕಾರ್ಯಾಚರಣೆಯನ್ನು ಗುರುವಾರದವರೆಗೆ ಸ್ಥಗಿತಗೊಳಿಸುವಂತೆ ಲಾಹೋರ್ ಹೈಕೋರ್ಟ್ ಬುಧವಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರದಿಂದ ಆರಂಭವಾಗಿದ್ದ ಖಾನ್ ಬಂಧನ ಯತ್ನ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.</p>.<p>ಪೊಲೀಸ್ ಕಾರ್ಯಾಚರಣೆಯನ್ನು ಪ್ರಶ್ನಿಸಿ ಪಾಕಿಸ್ತಾನ್ ತೆಹ್ರೀಕ್–ಎ–ಇನ್ಸಾಫ್ (ಪಿಟಿಐ) ಪಕ್ಷ ಲಾಹೋರ್ ಹೈಕೋರ್ಟ್ ಮೊರೆ ಹೋಗಿತ್ತು. ಈ ಕಾರ್ಯಾಚರಣೆಯನ್ನು ನಿಲ್ಲಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಪಿಟಿಐ ಅರ್ಜಿಯಲ್ಲಿ ಕೋರಿತ್ತು.</p>.<p>ಇಮ್ರಾನ್ ಖಾನ್ ನಿವಾಸವಾದ ‘ಜಮಾನ್ ಪಾರ್ಕ್’ನಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆಯವರೆಗೆ ಕಾರ್ಯಾಚರಣೆ ನಿಲ್ಲಿಸುವಂತೆ ಹೈಕೋರ್ಟ್ ಬುಧವಾರ ಆದೇಶಿಸಿತು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.</p>.<p>ಪಿಟಿಐ ಪಕ್ಷದ ನಾಯಕ ಫವಾದ್ ಚೌಧರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ತಾರಿಕ್ ಸಲೀಂ ಶೇಖ್ ಅವರು ಈ ಕುರಿತು ಆದೇಶಿಸಿದರು.</p>.<p>ಬಂಧಿಸದೆ ಹಿಂದಿರುಗಿದ ಪೊಲೀಸರು:</p>.<p>ಇಮ್ರಾನ್ ಬಂಧಿಸದಂತೆ ತಡೆಯಲು ಅವರ ಬೆಂಬಲಿಗರು ಬುಧವಾರವೂ ಇಮ್ರಾನ್ ನಿವಾಸದ ಸುತ್ತಲೂ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ, ಅಶ್ರುವಾಯು, ಲಾಠಿ ಪ್ರಯೋಗಿಸಿದರು. ಪೊಲೀಸರ ಮೇಲೆ ಇಮ್ರಾನ್ ಬೆಂಬಲಿಗರೂ ಕಲ್ಲುಗಳನ್ನು ತೂರಿದರು.</p>.<p>ಖಾನ್ ಬಂಧನಕ್ಕೆ ಮಂಗಳವಾರದಿಂದ ನಿರಂತರ ಪ್ರಯತ್ನ ನಡೆಸಿದ್ದ ಪಾಕ್ ಪೊಲೀಸರು ಮತ್ತು ರೇಂಜರ್ಗಳು ಲಾಹೋರ್ ಹೈಕೋರ್ಟ್ ಆದೇಶದ ಬಳಿಕ ಬುಧವಾರ ಕಾರ್ಯಾಚರಣೆ ನಿಲ್ಲಿಸಿ ಹಿಂದಿರುಗಿದರು. ಇದು ಖಾನ್ ಬೆಂಬಲಿಗರನ್ನು ಹರ್ಷೋದ್ಗಾರ ಮತ್ತು ಸಂಭ್ರಮಾಚರಣೆಯಲ್ಲಿ ತೊಡಗುವಂತೆ ಮಾಡಿತು.</p>.<p>‘ಸಮ್ಮಿಶ್ರ ಸರ್ಕಾರದ ದುರುದ್ದೇಶಗಳು ಈಡೇರಲು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವುದಾಗಿ’ ಟ್ವೀಟ್ ಮಾಡಿರುವ ಪಿಟಿಐ ಪಕ್ಷವು, ‘ಹೆಚ್ಚಿನ ಕಾರ್ಯಕರ್ತರು ಜಮಾನ್ ಪಾರ್ಕ್ನತ್ತ ಬರುತ್ತಿದ್ದಾರೆ’ ಎಂದು ತಿಳಿಸಿದೆ.</p>.<p>ಖಾನ್ ಅವರ ನಿವಾಸ ಬಳಿ ಮಂಗಳವಾರ ಪೊಲೀಸರೊಂದಿಗೆ ನಡೆದಿದ್ದ ಘರ್ಷಣೆಯಲ್ಲಿ 54 ಪೊಲೀಸರು ಸೇರಿದಂತೆ 60 ಜನರು ಗಾಯಗೊಂಡಿದ್ದರು. ಹೀಗಾಗಿ ಬುಧವಾರ ಹಿರಿಯ ರೇಂಜರ್ಗಳನ್ನು ನಿಯೋಜಿಸಲಾಗಿತ್ತು.</p>.<p><strong>ವಾರಂಟ್ ರದ್ದುಪಡಿಸಲು ಇಸ್ಲಾಮಾಬಾದ್ ಹೈಕೋರ್ಟ್ ನಕಾರ</strong></p>.<p>ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ವಾರಂಟ್ ಅನ್ನು ರದ್ದುಪಡಿಸಲು ಇಸ್ಲಾಮಾಬಾದ್ ಹೈಕೋರ್ಟ್ ಬುಧವಾರ ನಿರಾಕರಿಸಿದೆ.</p>.<p>ಈ ಕುರಿತು ಇಮ್ರಾನ್ ಖಾನ್ ಅವರು ಅರ್ಜಿಯೊಂದಿಗೆ ವಿಚಾರಣಾ ನ್ಯಾಯಾಲಯಕ್ಕೆ ಹೋಗುವಂತೆ ಕೋರ್ಟ್ ಆದೇಶಿಸಿದೆ.</p>.<p>‘ತೋಶಾಖಾನಾ’ ಪ್ರಕರಣದಲ್ಲಿ ತಮ್ಮ ವಿರುದ್ಧದ ಬಂಧನದ ವಾರಂಟ್ಗಳನ್ನು ರದ್ದುಪಡಿಸಲು ಕೋರಿ ಖಾನ್ ಇಸ್ಲಾಮಾಬಾದ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಾಹೋರ್ : </strong>ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಬಂಧನಕ್ಕೆ ಪಾಕ್ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ನಡೆಸುತ್ತಿದ್ದ ಕಾರ್ಯಾಚರಣೆಯನ್ನು ಗುರುವಾರದವರೆಗೆ ಸ್ಥಗಿತಗೊಳಿಸುವಂತೆ ಲಾಹೋರ್ ಹೈಕೋರ್ಟ್ ಬುಧವಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರದಿಂದ ಆರಂಭವಾಗಿದ್ದ ಖಾನ್ ಬಂಧನ ಯತ್ನ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.</p>.<p>ಪೊಲೀಸ್ ಕಾರ್ಯಾಚರಣೆಯನ್ನು ಪ್ರಶ್ನಿಸಿ ಪಾಕಿಸ್ತಾನ್ ತೆಹ್ರೀಕ್–ಎ–ಇನ್ಸಾಫ್ (ಪಿಟಿಐ) ಪಕ್ಷ ಲಾಹೋರ್ ಹೈಕೋರ್ಟ್ ಮೊರೆ ಹೋಗಿತ್ತು. ಈ ಕಾರ್ಯಾಚರಣೆಯನ್ನು ನಿಲ್ಲಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಪಿಟಿಐ ಅರ್ಜಿಯಲ್ಲಿ ಕೋರಿತ್ತು.</p>.<p>ಇಮ್ರಾನ್ ಖಾನ್ ನಿವಾಸವಾದ ‘ಜಮಾನ್ ಪಾರ್ಕ್’ನಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆಯವರೆಗೆ ಕಾರ್ಯಾಚರಣೆ ನಿಲ್ಲಿಸುವಂತೆ ಹೈಕೋರ್ಟ್ ಬುಧವಾರ ಆದೇಶಿಸಿತು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.</p>.<p>ಪಿಟಿಐ ಪಕ್ಷದ ನಾಯಕ ಫವಾದ್ ಚೌಧರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ತಾರಿಕ್ ಸಲೀಂ ಶೇಖ್ ಅವರು ಈ ಕುರಿತು ಆದೇಶಿಸಿದರು.</p>.<p>ಬಂಧಿಸದೆ ಹಿಂದಿರುಗಿದ ಪೊಲೀಸರು:</p>.<p>ಇಮ್ರಾನ್ ಬಂಧಿಸದಂತೆ ತಡೆಯಲು ಅವರ ಬೆಂಬಲಿಗರು ಬುಧವಾರವೂ ಇಮ್ರಾನ್ ನಿವಾಸದ ಸುತ್ತಲೂ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ, ಅಶ್ರುವಾಯು, ಲಾಠಿ ಪ್ರಯೋಗಿಸಿದರು. ಪೊಲೀಸರ ಮೇಲೆ ಇಮ್ರಾನ್ ಬೆಂಬಲಿಗರೂ ಕಲ್ಲುಗಳನ್ನು ತೂರಿದರು.</p>.<p>ಖಾನ್ ಬಂಧನಕ್ಕೆ ಮಂಗಳವಾರದಿಂದ ನಿರಂತರ ಪ್ರಯತ್ನ ನಡೆಸಿದ್ದ ಪಾಕ್ ಪೊಲೀಸರು ಮತ್ತು ರೇಂಜರ್ಗಳು ಲಾಹೋರ್ ಹೈಕೋರ್ಟ್ ಆದೇಶದ ಬಳಿಕ ಬುಧವಾರ ಕಾರ್ಯಾಚರಣೆ ನಿಲ್ಲಿಸಿ ಹಿಂದಿರುಗಿದರು. ಇದು ಖಾನ್ ಬೆಂಬಲಿಗರನ್ನು ಹರ್ಷೋದ್ಗಾರ ಮತ್ತು ಸಂಭ್ರಮಾಚರಣೆಯಲ್ಲಿ ತೊಡಗುವಂತೆ ಮಾಡಿತು.</p>.<p>‘ಸಮ್ಮಿಶ್ರ ಸರ್ಕಾರದ ದುರುದ್ದೇಶಗಳು ಈಡೇರಲು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವುದಾಗಿ’ ಟ್ವೀಟ್ ಮಾಡಿರುವ ಪಿಟಿಐ ಪಕ್ಷವು, ‘ಹೆಚ್ಚಿನ ಕಾರ್ಯಕರ್ತರು ಜಮಾನ್ ಪಾರ್ಕ್ನತ್ತ ಬರುತ್ತಿದ್ದಾರೆ’ ಎಂದು ತಿಳಿಸಿದೆ.</p>.<p>ಖಾನ್ ಅವರ ನಿವಾಸ ಬಳಿ ಮಂಗಳವಾರ ಪೊಲೀಸರೊಂದಿಗೆ ನಡೆದಿದ್ದ ಘರ್ಷಣೆಯಲ್ಲಿ 54 ಪೊಲೀಸರು ಸೇರಿದಂತೆ 60 ಜನರು ಗಾಯಗೊಂಡಿದ್ದರು. ಹೀಗಾಗಿ ಬುಧವಾರ ಹಿರಿಯ ರೇಂಜರ್ಗಳನ್ನು ನಿಯೋಜಿಸಲಾಗಿತ್ತು.</p>.<p><strong>ವಾರಂಟ್ ರದ್ದುಪಡಿಸಲು ಇಸ್ಲಾಮಾಬಾದ್ ಹೈಕೋರ್ಟ್ ನಕಾರ</strong></p>.<p>ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ವಾರಂಟ್ ಅನ್ನು ರದ್ದುಪಡಿಸಲು ಇಸ್ಲಾಮಾಬಾದ್ ಹೈಕೋರ್ಟ್ ಬುಧವಾರ ನಿರಾಕರಿಸಿದೆ.</p>.<p>ಈ ಕುರಿತು ಇಮ್ರಾನ್ ಖಾನ್ ಅವರು ಅರ್ಜಿಯೊಂದಿಗೆ ವಿಚಾರಣಾ ನ್ಯಾಯಾಲಯಕ್ಕೆ ಹೋಗುವಂತೆ ಕೋರ್ಟ್ ಆದೇಶಿಸಿದೆ.</p>.<p>‘ತೋಶಾಖಾನಾ’ ಪ್ರಕರಣದಲ್ಲಿ ತಮ್ಮ ವಿರುದ್ಧದ ಬಂಧನದ ವಾರಂಟ್ಗಳನ್ನು ರದ್ದುಪಡಿಸಲು ಕೋರಿ ಖಾನ್ ಇಸ್ಲಾಮಾಬಾದ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>