‘ನಾವು ಭಾರತದೊಂದಿಗೆ ಮೂರು ಯುದ್ಧಗಳನ್ನು ನಡೆಸಿದ್ದೇವೆ. ಯುದ್ಧಗಳು ಜನರಿಗೆ ಹೆಚ್ಚು ದುಃಖ, ಬಡತನ ಮತ್ತು ನಿರುದ್ಯೋಗವನ್ನಷ್ಟೇ ನೀಡಿದವು. ಪರಸ್ಪರ ಜಗಳ, ಸಮಯ ಮತ್ತು ಸಂಪನ್ಮೂಲಗಳನ್ನು ವ್ಯರ್ಥ ಮಾಡುತ್ತಿದ್ದೇವೆ. ಇದೆಲ್ಲವನ್ನು ಬಿಟ್ಟು, ಉಭಯ ರಾಷ್ಟ್ರಗಳ ಜನರು ಕೂಡಿ ಬಾಳಬೇಕು ಮತ್ತು ಪ್ರಗತಿ ಸಾಧಿಸಬೇಕಿದೆ’ ಎಂದು ಷರೀಫ್ ಹೇಳಿದ್ದಾರೆ.