<p><strong>ಇಸ್ಲಾಮಾಬಾದ್</strong>: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದೇಶಕ್ಕೆ ಒದಗಿರುವ ಪ್ರವಾಹದ ಬಗ್ಗೆ ಸಹಾನುಭೂತಿಯ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. ಆದರೆ, ಈ ವಿಪತ್ತಿಗೆ ಭಾರತ ತೋರುತ್ತಿರುವ ಸಹಾನುಭೂತಿಯಿಂದ ಉಭಯ ರಾಷ್ಟ್ರಗಳ ಸಂಬಂಧ ಸುಧಾರಿಸಬಹುದು ಎಂದು ನಿರೀಕ್ಷಿಸುವುದಿಲ್ಲಎಂದು ಪಾಕ್ ವಿದೇಶಾಂಗ ವ್ಯವಹಾರಗಳ ವಕ್ತಾರಹೇಳಿದ್ದಾರೆ.</p>.<p>ಉಭಯ ದೇಶಗಳ ನಡುವೆ ಉತ್ತಮ ಸಂಬಂಧಕ್ಕಾಗಿ ಕಾಶ್ಮೀರದಂತಹ ಸಮಸ್ಯೆಗಳನ್ನು ಮೊದಲು ಪರಿಹರಿಸಬೇಕು ಮತ್ತು ಸಹಾನುಭೂತಿಯ ಸಂದೇಶಗಳು ಈ ಸಂದರ್ಭದಲ್ಲಿ ಕೆಲಸ ಮಾಡುವುದಿಲ್ಲ ಎಂದು ಪಾಕ್ ವಿದೇಶಾಂಗ ವ್ಯವಹಾರಗಳ ವಕ್ತಾರ ಅಸಿಮ್ ಇಫ್ತಿಕಾರ್ ಹೇಳಿದ್ದಾರೆ.</p>.<p>ಪಾಕಿಸ್ತಾನದಲ್ಲಿನ ಪ್ರವಾಹದ ಕುರಿತು ಇಸ್ಲಾಮಾಬಾದ್ನಿಂದ ವಿಡಿಯೊ ಸಂವಾದದ ಮೂಲಕ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡುತ್ತಿದ್ದ ಸಂದರ್ಭ,ನೀವು ಭಾರತದಿಂದ ಹೆಚ್ಚಿನ ಸಹಾಯವನ್ನು ನಿರೀಕ್ಷಿಸುತ್ತೀರಾ ಮತ್ತು ಈ ರೀತಿಯ ವಿಪತ್ತು ಉಭಯ ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸಬಹುದೇ ಎಂದು ಇಫ್ತಿಕಾರ್ ಅವರಿಗೆಪ್ರಶ್ನೆ ಕೇಳಲಾಯಿತು.</p>.<p>ಮೋದಿಯವರ ಟ್ವೀಟ್ನಲ್ಲಿನ ಹೇಳಿಕೆಯನ್ನು ನೀವು ನೋಡಿದ್ದೀರಿ ಎಂದು ನಾನು ಭಾವಿಸುತ್ತೇನೆ.ಆದರೆ, ಇದು ಸಂಕಷ್ಟದ ಪರಿಸ್ಥಿತಿ ಮತ್ತು ಪ್ರವಾಹ ನೈಸರ್ಗಿಕ ಪ್ರಕ್ರಿಯೆ. ಸಂಕಷ್ಟದಲ್ಲಿರುವ ಜನ ಬೇರೆ ಯಾವುದೇ ವಿಚಾರಗಳ ಬಗ್ಗೆ ಈ ಸಂದರ್ಭ ಯೋಚಿಸುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಇಫ್ತಿಕಾರ್ ಹೇಳಿದ್ದಾರೆ.</p>.<p>'ಪಾಕಿಸ್ತಾನದ ಪ್ರವಾಹದಿಂದ ಉಂಟಾದ ವಿನಾಶವನ್ನು ನೋಡಿ ನನಗೆ ದುಃಖವಾಗಿದೆ. ಈ ನೈಸರ್ಗಿಕ ವಿಕೋಪದಿಂದ ಸಂತ್ರಸ್ತಕುಟುಂಬಗಳು, ಗಾಯಾಳುಗಳು ಮತ್ತು ಸಂತ್ರಸ್ತರೆಲ್ಲರಿಗೂ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಪಾಕಿಸ್ತಾನ ಶೀಘ್ರ ಸಹಜ ಸ್ಥಿತಿಗೆ ಮರಳುವ ವಿಶ್ವಾಸಇದೆ' ಎಂದು ಮೋದಿ ಟ್ವೀಟ್ ಮಾಡಿದ್ದರು.</p>.<p>ಎರಡು ದೇಶಗಳ ನಡುವೆ ಕಾಶ್ಮೀರದ ಪರಿಸ್ಥಿತಿಗೆ ಸಂಬಂಧಿಸಿದಂತೆ ಸಮಸ್ಯೆಇದೆ. ಅದನ್ನು ಪರಿಹರಿಸದ ಹೊರತು ಸಂಬಂಧ ವೃದ್ಧಿ ಸಾಧ್ಯವಿಲ್ಲ ಎಂದು ಇಫ್ತಿಕಾರ್ಹೇಳಿದರು.</p>.<p><a href="https://www.prajavani.net/world-news/pakistan-un-jointly-appeal-for-usd-160-million-to-deal-with-catastrophic-floods-968021.html" itemprop="url">ಪಾಕಿಸ್ತಾನದಲ್ಲಿ ಭಾರಿ ಮಳೆ, ಪ್ರವಾಹ: ಮೃತರ ಸಂಖ್ಯೆ 1,136ಕ್ಕೆ ಏರಿಕೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್</strong>: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದೇಶಕ್ಕೆ ಒದಗಿರುವ ಪ್ರವಾಹದ ಬಗ್ಗೆ ಸಹಾನುಭೂತಿಯ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. ಆದರೆ, ಈ ವಿಪತ್ತಿಗೆ ಭಾರತ ತೋರುತ್ತಿರುವ ಸಹಾನುಭೂತಿಯಿಂದ ಉಭಯ ರಾಷ್ಟ್ರಗಳ ಸಂಬಂಧ ಸುಧಾರಿಸಬಹುದು ಎಂದು ನಿರೀಕ್ಷಿಸುವುದಿಲ್ಲಎಂದು ಪಾಕ್ ವಿದೇಶಾಂಗ ವ್ಯವಹಾರಗಳ ವಕ್ತಾರಹೇಳಿದ್ದಾರೆ.</p>.<p>ಉಭಯ ದೇಶಗಳ ನಡುವೆ ಉತ್ತಮ ಸಂಬಂಧಕ್ಕಾಗಿ ಕಾಶ್ಮೀರದಂತಹ ಸಮಸ್ಯೆಗಳನ್ನು ಮೊದಲು ಪರಿಹರಿಸಬೇಕು ಮತ್ತು ಸಹಾನುಭೂತಿಯ ಸಂದೇಶಗಳು ಈ ಸಂದರ್ಭದಲ್ಲಿ ಕೆಲಸ ಮಾಡುವುದಿಲ್ಲ ಎಂದು ಪಾಕ್ ವಿದೇಶಾಂಗ ವ್ಯವಹಾರಗಳ ವಕ್ತಾರ ಅಸಿಮ್ ಇಫ್ತಿಕಾರ್ ಹೇಳಿದ್ದಾರೆ.</p>.<p>ಪಾಕಿಸ್ತಾನದಲ್ಲಿನ ಪ್ರವಾಹದ ಕುರಿತು ಇಸ್ಲಾಮಾಬಾದ್ನಿಂದ ವಿಡಿಯೊ ಸಂವಾದದ ಮೂಲಕ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡುತ್ತಿದ್ದ ಸಂದರ್ಭ,ನೀವು ಭಾರತದಿಂದ ಹೆಚ್ಚಿನ ಸಹಾಯವನ್ನು ನಿರೀಕ್ಷಿಸುತ್ತೀರಾ ಮತ್ತು ಈ ರೀತಿಯ ವಿಪತ್ತು ಉಭಯ ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸಬಹುದೇ ಎಂದು ಇಫ್ತಿಕಾರ್ ಅವರಿಗೆಪ್ರಶ್ನೆ ಕೇಳಲಾಯಿತು.</p>.<p>ಮೋದಿಯವರ ಟ್ವೀಟ್ನಲ್ಲಿನ ಹೇಳಿಕೆಯನ್ನು ನೀವು ನೋಡಿದ್ದೀರಿ ಎಂದು ನಾನು ಭಾವಿಸುತ್ತೇನೆ.ಆದರೆ, ಇದು ಸಂಕಷ್ಟದ ಪರಿಸ್ಥಿತಿ ಮತ್ತು ಪ್ರವಾಹ ನೈಸರ್ಗಿಕ ಪ್ರಕ್ರಿಯೆ. ಸಂಕಷ್ಟದಲ್ಲಿರುವ ಜನ ಬೇರೆ ಯಾವುದೇ ವಿಚಾರಗಳ ಬಗ್ಗೆ ಈ ಸಂದರ್ಭ ಯೋಚಿಸುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಇಫ್ತಿಕಾರ್ ಹೇಳಿದ್ದಾರೆ.</p>.<p>'ಪಾಕಿಸ್ತಾನದ ಪ್ರವಾಹದಿಂದ ಉಂಟಾದ ವಿನಾಶವನ್ನು ನೋಡಿ ನನಗೆ ದುಃಖವಾಗಿದೆ. ಈ ನೈಸರ್ಗಿಕ ವಿಕೋಪದಿಂದ ಸಂತ್ರಸ್ತಕುಟುಂಬಗಳು, ಗಾಯಾಳುಗಳು ಮತ್ತು ಸಂತ್ರಸ್ತರೆಲ್ಲರಿಗೂ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಪಾಕಿಸ್ತಾನ ಶೀಘ್ರ ಸಹಜ ಸ್ಥಿತಿಗೆ ಮರಳುವ ವಿಶ್ವಾಸಇದೆ' ಎಂದು ಮೋದಿ ಟ್ವೀಟ್ ಮಾಡಿದ್ದರು.</p>.<p>ಎರಡು ದೇಶಗಳ ನಡುವೆ ಕಾಶ್ಮೀರದ ಪರಿಸ್ಥಿತಿಗೆ ಸಂಬಂಧಿಸಿದಂತೆ ಸಮಸ್ಯೆಇದೆ. ಅದನ್ನು ಪರಿಹರಿಸದ ಹೊರತು ಸಂಬಂಧ ವೃದ್ಧಿ ಸಾಧ್ಯವಿಲ್ಲ ಎಂದು ಇಫ್ತಿಕಾರ್ಹೇಳಿದರು.</p>.<p><a href="https://www.prajavani.net/world-news/pakistan-un-jointly-appeal-for-usd-160-million-to-deal-with-catastrophic-floods-968021.html" itemprop="url">ಪಾಕಿಸ್ತಾನದಲ್ಲಿ ಭಾರಿ ಮಳೆ, ಪ್ರವಾಹ: ಮೃತರ ಸಂಖ್ಯೆ 1,136ಕ್ಕೆ ಏರಿಕೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>