ಶಸ್ತ್ರಾಸ್ತ್ರ ಕೆಳಗಿಳಿಸಿದ ಸೈನಿಕರು:‘ತುರ್ತು ಪರಿಸ್ಥಿತಿ ಮತ್ತು ಕರ್ಫ್ಯೂ ಜಾರಿ ಮಾಡಲು ಏನು ಬೇಕಾದರೂ ಮಾಡಿ’ ಎಂದು ಪ್ರಧಾನಿ ರಾನಿಲ್ ಅವರು ಸೇನೆ ಮತ್ತು ಪೊಲೀಸರಿಗೆ ಸೂಚಿ ಸಿದ್ದರು. ಆದರೆ,ಕೊಲಂಬೊದಲ್ಲಿ ನಿಯೋಜಿಸಿದ್ದ ಸೈನಿಕರು ಬುಧವಾರ ರಾತ್ರಿ ವೇಳೆಗೆ ಶಸ್ತ್ರಾಸ್ತ್ರ ಕೆಳಗಿಳಿಸಿದ್ದಾರೆ. ಕೊಲಂಬೊದಲ್ಲಿರುವ ಪ್ರಧಾನಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸುತ್ತಿದ್ದ ಪ್ರತಿಭಟನಕಾರರಿಗೆ ಒಡ್ಡಿದ್ದ ತಡೆಯನ್ನು, ರಾತ್ರಿ ವೇಳೆಗೆ ಸಡಿಲಗೊಳಿಸಿದ್ದಾರೆ. ಹೀಗಾಗಿ ಪ್ರತಿಭಟನಕಾರರು ಒಳನುಗ್ಗಿ, ಪ್ರಧಾನಿ ಕಚೇರಿ ವಶಕ್ಕೆ ಪಡೆದಿದ್ದಾರೆ.