<p><strong>ಸಿಂಗಪುರ: </strong>ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಭಾರತ ಮೂಲದ ಮಲೇಷ್ಯಾ ನಿವಾಸಿ ನಾಗೇಂದ್ರನ್ ಕೆ. ಧರ್ಮಲಿಂಗಂ ಎಂಬಾತಗೆ ಗಲ್ಲು ವಿಧಿಸಲಾಗಿದೆ. ಚಾಂಗಿ ಜೈಲಿನಲ್ಲಿ ಬುಧವಾರ (ನ.10) ಆತನನ್ನು ಗಲ್ಲಿಗೇರಿಸಲಾಗುವುದು ಎಂದು ಸಿಂಗಪುರ ಸರ್ಕಾರ ತಿಳಿಸಿದೆ.</p>.<p>ಈ ನಡುವೆ, ‘ನಾಗೇಂದ್ರನ್ ಮಾನಸಿಕ ಅಸ್ವಸ್ಥನಿದ್ದು, ಆತನನ್ನು ಗಲ್ಲಿಗೇರಿಸಬಾರದು’ ಎಂದು ಜಾಗತಿಕ ಮಟ್ಟದ ವಿವಿಧ ಸಂಘಟನೆಗಳು ಒತ್ತಾಯಿಸಿವೆ.</p>.<p><strong>ಓದಿ:</strong><a href="https://www.prajavani.net/india-news/aryan-khan-drugs-case-transferred-to-delhi-ncb-881490.html" itemprop="url">ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ದೆಹಲಿ ಎನ್ಸಿಬಿಗೆ ವರ್ಗಾವಣೆ: ವರದಿ</a></p>.<p>ಜಾಗತಿಕವಾಗಿ ಕೇಳಿ ಬರುತ್ತಿರುವ ಈ ಒತ್ತಾಯಕ್ಕೆ ಪ್ರತಿಕ್ರಿಯಿಸಿರುವ ಸಿಂಗಪುರ ಸರ್ಕಾರ, ‘ಆತನು ಹೆರಾಯಿನ್ ಕಳ್ಳಸಾಗಣೆ ಮಾಡುತ್ತಿದ್ದ. ತಾನು ಎಸಗಿದ ಅಪರಾಧ ಕೃತ್ಯದ ಬಗ್ಗೆ ಆತನಿಗೆ ಅರಿವಿತ್ತು’ ಎಂದು ಪ್ರತಿಕ್ರಿಯಿಸಿದೆ.</p>.<p>ಸಿಂಗಪುರ ಮತ್ತು ಮಲೇಷ್ಯಾಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿರುವ ವುಡ್ಲ್ಯಾಂಡ್ಸ್ ಚೆಕ್ಪಾಯಿಂಟ್ನಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಆರೋಪದ ಮೇಲೆ ನಾಗೇಂದ್ರನನ್ನು2009ರಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.</p>.<p>ವಿಚಾರಣೆ ನಡೆಸಿದ್ದ ಕೋರ್ಟ್, 42.27 ಗ್ರಾಂನಷ್ಟು ಹೆರಾಯಿನ್ ಆಮದು ಮಾಡಿಕೊಂಡಿದ್ದಕ್ಕಾಗಿ ನಾಗೇಂದ್ರನ್ ದೋಷಿ ಎಂದು ಘೋಷಿಸಿ, 2010ರಲ್ಲಿ ಆತನಿಗೆ ಮರಣ ದಂಡನೆ ವಿಧಿಸಿತು.</p>.<p>ಮಾದಕ ವಸ್ತುಗಳ ದುರ್ಬಳಕೆ ತಡೆ ಕಾಯ್ದೆ ಪ್ರಕಾರ, 15 ಗ್ರಾಂಗಿಂತ ಹೆಚ್ಚು ಪ್ರಮಾಣದ ಹೆರಾಯಿನ್ ಆಮದು ಮಾಡಿಕೊಂಡರೆ ಮರಣದಂಡನೆ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಗಪುರ: </strong>ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಭಾರತ ಮೂಲದ ಮಲೇಷ್ಯಾ ನಿವಾಸಿ ನಾಗೇಂದ್ರನ್ ಕೆ. ಧರ್ಮಲಿಂಗಂ ಎಂಬಾತಗೆ ಗಲ್ಲು ವಿಧಿಸಲಾಗಿದೆ. ಚಾಂಗಿ ಜೈಲಿನಲ್ಲಿ ಬುಧವಾರ (ನ.10) ಆತನನ್ನು ಗಲ್ಲಿಗೇರಿಸಲಾಗುವುದು ಎಂದು ಸಿಂಗಪುರ ಸರ್ಕಾರ ತಿಳಿಸಿದೆ.</p>.<p>ಈ ನಡುವೆ, ‘ನಾಗೇಂದ್ರನ್ ಮಾನಸಿಕ ಅಸ್ವಸ್ಥನಿದ್ದು, ಆತನನ್ನು ಗಲ್ಲಿಗೇರಿಸಬಾರದು’ ಎಂದು ಜಾಗತಿಕ ಮಟ್ಟದ ವಿವಿಧ ಸಂಘಟನೆಗಳು ಒತ್ತಾಯಿಸಿವೆ.</p>.<p><strong>ಓದಿ:</strong><a href="https://www.prajavani.net/india-news/aryan-khan-drugs-case-transferred-to-delhi-ncb-881490.html" itemprop="url">ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ದೆಹಲಿ ಎನ್ಸಿಬಿಗೆ ವರ್ಗಾವಣೆ: ವರದಿ</a></p>.<p>ಜಾಗತಿಕವಾಗಿ ಕೇಳಿ ಬರುತ್ತಿರುವ ಈ ಒತ್ತಾಯಕ್ಕೆ ಪ್ರತಿಕ್ರಿಯಿಸಿರುವ ಸಿಂಗಪುರ ಸರ್ಕಾರ, ‘ಆತನು ಹೆರಾಯಿನ್ ಕಳ್ಳಸಾಗಣೆ ಮಾಡುತ್ತಿದ್ದ. ತಾನು ಎಸಗಿದ ಅಪರಾಧ ಕೃತ್ಯದ ಬಗ್ಗೆ ಆತನಿಗೆ ಅರಿವಿತ್ತು’ ಎಂದು ಪ್ರತಿಕ್ರಿಯಿಸಿದೆ.</p>.<p>ಸಿಂಗಪುರ ಮತ್ತು ಮಲೇಷ್ಯಾಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿರುವ ವುಡ್ಲ್ಯಾಂಡ್ಸ್ ಚೆಕ್ಪಾಯಿಂಟ್ನಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಆರೋಪದ ಮೇಲೆ ನಾಗೇಂದ್ರನನ್ನು2009ರಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.</p>.<p>ವಿಚಾರಣೆ ನಡೆಸಿದ್ದ ಕೋರ್ಟ್, 42.27 ಗ್ರಾಂನಷ್ಟು ಹೆರಾಯಿನ್ ಆಮದು ಮಾಡಿಕೊಂಡಿದ್ದಕ್ಕಾಗಿ ನಾಗೇಂದ್ರನ್ ದೋಷಿ ಎಂದು ಘೋಷಿಸಿ, 2010ರಲ್ಲಿ ಆತನಿಗೆ ಮರಣ ದಂಡನೆ ವಿಧಿಸಿತು.</p>.<p>ಮಾದಕ ವಸ್ತುಗಳ ದುರ್ಬಳಕೆ ತಡೆ ಕಾಯ್ದೆ ಪ್ರಕಾರ, 15 ಗ್ರಾಂಗಿಂತ ಹೆಚ್ಚು ಪ್ರಮಾಣದ ಹೆರಾಯಿನ್ ಆಮದು ಮಾಡಿಕೊಂಡರೆ ಮರಣದಂಡನೆ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>