<p><strong>ಕೊಲಂಬೊ</strong>: ‘ಇದೇ ವಾರದೊಳಗೆ ದೇಶಕ್ಕೆ ಹೊಸ ಪ್ರಧಾನಿ ನೇಮಿಸಿ, ಸಚಿವ ಸಂಪುಟ ರಚಿಸಲಾಗುವುದು’ ಎಂದು ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಷ ಬುಧವಾರ ತಿಳಿಸಿದ್ದಾರೆ.</p>.<p>ದೇಶದ ಜನತೆಯುನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಸತ್ತಿಗೆ ಹೆಚ್ಚಿನ ಅಧಿಕಾರ ನೀಡಲು ಸಂವಿಧಾನಕ್ಕೆ ತಿದ್ದುಪಡಿ ತರಲಾಗುವುದು ಎಂದು ಹೇಳಿದ್ದಾರೆ.</p>.<p>‘ದೇಶದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸವಾಲುಗಳನ್ನು ಎದುರಿಸಲು ಶ್ರೀಲಂಕಾದ ಜನತೆ ಕೈಜೋಡಿಸಬೇಕು. ಸಂಯಮ, ಸಹನೆ ಮತ್ತು ಸಹಬಾಳ್ವೆ ಪ್ರೋತ್ಸಾಹಿಸುವುದುಅತ್ಯಗತ್ಯವಾಗಿದೆ’ ಎಂದು ಅವರು ಟ್ವಿಟರ್ನಲ್ಲೂ ಕರೆ ನೀಡಿದ್ದಾರೆ.</p>.<p>ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸ ಅವರ ರಾಜೀನಾಮೆ ನೀಡಿದ ಬಳಿಕ ಉಂಟಾಗಿರುವ ರಾಜಕೀಯ ಅಸ್ಥಿರತೆ ಕೊನೆಗೊಳಿಸಲು ಅಧ್ಯಕ್ಷ ಗೊಟಬಯ ಅವರು ಆಡಳಿತಾರೂಢ ಪಕ್ಷದ ಭಿನ್ನಮತೀಯರು ಮತ್ತು ಪ್ರಮುಖ ವಿರೋಧ ಪಕ್ಷ ಎಸ್ಜೆಬಿ ನಾಯಕರ ಜೊತೆಯೂ ಮಾತುಕತೆ ನಡೆಸಿದರು.</p>.<p>‘ಹೊಸ ಪ್ರಧಾನಿ ನೇಮಕಕ್ಕೆ 2 ದಿನಗಳಿಂದ ಮಾತುಕತೆ ನಡೆಯುತ್ತಿದೆ. ರಾಜಕೀಯ ಅಸ್ಥಿರತೆ ಶೀಘ್ರ ಅಂತ್ಯವಾಗಲಿದೆ’ ಎಂದು ಆಡಳಿತಾರೂಢ ಎಸ್ಎಲ್ಪಿಪಿಯ ಮೈತ್ರಿ ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.</p>.<p><strong>ಕೇಂದ್ರ ಬ್ಯಾಂಕ್ ಮುಖ್ಯಸ್ಥರಿಂದ ರಾಜೀನಾಮೆ ಬೆದರಿಕೆ: </strong>1948ರಲ್ಲಿ ಸ್ವತಂತ್ರಗೊಂಡ ನಂತರ ದ್ವೀಪ ರಾಷ್ಟ್ರ ತೀವ್ರ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಸ್ಥಿರತೆ ತರಲು ರಾಜಕೀಯ ನಾಯಕರು ವಿಫಲವಾದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶ್ರೀಲಂಕಾ ಕೇಂದ್ರ ಬ್ಯಾಂಕ್ ಮುಖ್ಯಸ್ಥ ನಂದಾಲಾಲ್ ವೀರಸಿಂಘೆ ಬುಧವಾರ ಬೆದರಿಕೆ ಹಾಕಿದ್ದಾರೆ.</p>.<p><strong>ಕ್ಷಿಪ್ರಕ್ರಾಂತಿ ಅಲ್ಲಗಳೆದ ಸೇನೆ:</strong> ‘ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸಲು ಸಾವಿರಾರು ಯೋಧರನ್ನು ನಿಯೋಜಿಸಲಾಗಿದೆ. ಸೇನಾ ಕ್ಷಿಪ್ರಕ್ರಾಂತಿ ನಡೆದಿಲ್ಲ. ಮುನ್ನೆಚ್ಚರಿಕೆ ವಹಿಸಲು ಸೇನೆಗೆ ಅಧಿಕಾರ ನೀಡಲಾಗಿದೆ. ಅಧಿಕಾರ ವಶಕ್ಕೆ ಯತ್ನಿಸುತ್ತಿಲ್ಲ’ಎಂದು ಶ್ರೀಲಂಕಾದ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಕಮಲ್ ಗುಣರತ್ನೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಆಕ್ರೋಶಭರಿತರಿಂದ ಹಿಂಸಾಚಾರ, ಗಲಭೆ ನಡೆಸಿ, ಸೇನಾ ಆಡಳಿತ ಹೇರಲು ಯತ್ನಿಸಲಾಗುತ್ತಿದೆ’ ಎಂದು ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಟ್ವಿಟ್ ಮಾಡಿದ್ದಾರೆ.</p>.<p><strong>ರಾಜಪಕ್ಸಗೆ ಸೇನೆ ರಕ್ಷಣೆ:</strong> ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಹಾಗೂ ಅವರ ಸಹವರ್ತಿಗಳು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂಬ ಊಹಾಪೋಹಗಳ ಬೆನ್ನಲ್ಲೇ,ಮಹಿಂದಾ ರಾಜಪಕ್ಸ ಅವರಿಗೆ ಇಲ್ಲಿನ ಟ್ರಿಂಕಮಾಲಿ ನೌಕಾನೆಲೆಯಲ್ಲಿ ಭದ್ರತೆ ನೀಡಲಾಗಿದೆ ಎಂದು ರಕ್ಷಣಾ ಕಾರ್ಯದರ್ಶಿ ಕಮಲ್ ಗುಣರತ್ನೆ ಹೇಳಿದ್ದಾರೆ.</p>.<p>ಪ್ರತಿಭಟನಕಾರರ ಮೇಲಿನ ದಾಳಿಗೆ ಪ್ರಚೋದಿಸಿದ ಆರೋಪದಲ್ಲಿ ಮಹಿಂದಾ ಅವರ ಬಂಧನಕ್ಕೆ ವಿರೋಧ ಪಕ್ಷಗಳು ಒತ್ತಾಯಿಸಿವೆ. ಪ್ರತಿಭಟನೆಯಲ್ಲಿ 8 ಜನರು ಮೃತಪಟ್ಟು, ಗಾಯಗೊಂಡ ಘಟನೆ ಬಗ್ಗೆ ಮಹಿಂದಾ ಅವರ ಮುಖ್ಯ ಭದ್ರತಾ ಅಧಿಕಾರಿ ವಿರುದ್ಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲಂಬೊ</strong>: ‘ಇದೇ ವಾರದೊಳಗೆ ದೇಶಕ್ಕೆ ಹೊಸ ಪ್ರಧಾನಿ ನೇಮಿಸಿ, ಸಚಿವ ಸಂಪುಟ ರಚಿಸಲಾಗುವುದು’ ಎಂದು ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಷ ಬುಧವಾರ ತಿಳಿಸಿದ್ದಾರೆ.</p>.<p>ದೇಶದ ಜನತೆಯುನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಸತ್ತಿಗೆ ಹೆಚ್ಚಿನ ಅಧಿಕಾರ ನೀಡಲು ಸಂವಿಧಾನಕ್ಕೆ ತಿದ್ದುಪಡಿ ತರಲಾಗುವುದು ಎಂದು ಹೇಳಿದ್ದಾರೆ.</p>.<p>‘ದೇಶದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸವಾಲುಗಳನ್ನು ಎದುರಿಸಲು ಶ್ರೀಲಂಕಾದ ಜನತೆ ಕೈಜೋಡಿಸಬೇಕು. ಸಂಯಮ, ಸಹನೆ ಮತ್ತು ಸಹಬಾಳ್ವೆ ಪ್ರೋತ್ಸಾಹಿಸುವುದುಅತ್ಯಗತ್ಯವಾಗಿದೆ’ ಎಂದು ಅವರು ಟ್ವಿಟರ್ನಲ್ಲೂ ಕರೆ ನೀಡಿದ್ದಾರೆ.</p>.<p>ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸ ಅವರ ರಾಜೀನಾಮೆ ನೀಡಿದ ಬಳಿಕ ಉಂಟಾಗಿರುವ ರಾಜಕೀಯ ಅಸ್ಥಿರತೆ ಕೊನೆಗೊಳಿಸಲು ಅಧ್ಯಕ್ಷ ಗೊಟಬಯ ಅವರು ಆಡಳಿತಾರೂಢ ಪಕ್ಷದ ಭಿನ್ನಮತೀಯರು ಮತ್ತು ಪ್ರಮುಖ ವಿರೋಧ ಪಕ್ಷ ಎಸ್ಜೆಬಿ ನಾಯಕರ ಜೊತೆಯೂ ಮಾತುಕತೆ ನಡೆಸಿದರು.</p>.<p>‘ಹೊಸ ಪ್ರಧಾನಿ ನೇಮಕಕ್ಕೆ 2 ದಿನಗಳಿಂದ ಮಾತುಕತೆ ನಡೆಯುತ್ತಿದೆ. ರಾಜಕೀಯ ಅಸ್ಥಿರತೆ ಶೀಘ್ರ ಅಂತ್ಯವಾಗಲಿದೆ’ ಎಂದು ಆಡಳಿತಾರೂಢ ಎಸ್ಎಲ್ಪಿಪಿಯ ಮೈತ್ರಿ ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.</p>.<p><strong>ಕೇಂದ್ರ ಬ್ಯಾಂಕ್ ಮುಖ್ಯಸ್ಥರಿಂದ ರಾಜೀನಾಮೆ ಬೆದರಿಕೆ: </strong>1948ರಲ್ಲಿ ಸ್ವತಂತ್ರಗೊಂಡ ನಂತರ ದ್ವೀಪ ರಾಷ್ಟ್ರ ತೀವ್ರ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಸ್ಥಿರತೆ ತರಲು ರಾಜಕೀಯ ನಾಯಕರು ವಿಫಲವಾದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶ್ರೀಲಂಕಾ ಕೇಂದ್ರ ಬ್ಯಾಂಕ್ ಮುಖ್ಯಸ್ಥ ನಂದಾಲಾಲ್ ವೀರಸಿಂಘೆ ಬುಧವಾರ ಬೆದರಿಕೆ ಹಾಕಿದ್ದಾರೆ.</p>.<p><strong>ಕ್ಷಿಪ್ರಕ್ರಾಂತಿ ಅಲ್ಲಗಳೆದ ಸೇನೆ:</strong> ‘ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸಲು ಸಾವಿರಾರು ಯೋಧರನ್ನು ನಿಯೋಜಿಸಲಾಗಿದೆ. ಸೇನಾ ಕ್ಷಿಪ್ರಕ್ರಾಂತಿ ನಡೆದಿಲ್ಲ. ಮುನ್ನೆಚ್ಚರಿಕೆ ವಹಿಸಲು ಸೇನೆಗೆ ಅಧಿಕಾರ ನೀಡಲಾಗಿದೆ. ಅಧಿಕಾರ ವಶಕ್ಕೆ ಯತ್ನಿಸುತ್ತಿಲ್ಲ’ಎಂದು ಶ್ರೀಲಂಕಾದ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಕಮಲ್ ಗುಣರತ್ನೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಆಕ್ರೋಶಭರಿತರಿಂದ ಹಿಂಸಾಚಾರ, ಗಲಭೆ ನಡೆಸಿ, ಸೇನಾ ಆಡಳಿತ ಹೇರಲು ಯತ್ನಿಸಲಾಗುತ್ತಿದೆ’ ಎಂದು ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಟ್ವಿಟ್ ಮಾಡಿದ್ದಾರೆ.</p>.<p><strong>ರಾಜಪಕ್ಸಗೆ ಸೇನೆ ರಕ್ಷಣೆ:</strong> ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಹಾಗೂ ಅವರ ಸಹವರ್ತಿಗಳು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂಬ ಊಹಾಪೋಹಗಳ ಬೆನ್ನಲ್ಲೇ,ಮಹಿಂದಾ ರಾಜಪಕ್ಸ ಅವರಿಗೆ ಇಲ್ಲಿನ ಟ್ರಿಂಕಮಾಲಿ ನೌಕಾನೆಲೆಯಲ್ಲಿ ಭದ್ರತೆ ನೀಡಲಾಗಿದೆ ಎಂದು ರಕ್ಷಣಾ ಕಾರ್ಯದರ್ಶಿ ಕಮಲ್ ಗುಣರತ್ನೆ ಹೇಳಿದ್ದಾರೆ.</p>.<p>ಪ್ರತಿಭಟನಕಾರರ ಮೇಲಿನ ದಾಳಿಗೆ ಪ್ರಚೋದಿಸಿದ ಆರೋಪದಲ್ಲಿ ಮಹಿಂದಾ ಅವರ ಬಂಧನಕ್ಕೆ ವಿರೋಧ ಪಕ್ಷಗಳು ಒತ್ತಾಯಿಸಿವೆ. ಪ್ರತಿಭಟನೆಯಲ್ಲಿ 8 ಜನರು ಮೃತಪಟ್ಟು, ಗಾಯಗೊಂಡ ಘಟನೆ ಬಗ್ಗೆ ಮಹಿಂದಾ ಅವರ ಮುಖ್ಯ ಭದ್ರತಾ ಅಧಿಕಾರಿ ವಿರುದ್ಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>