<p><strong>ಲಂಡನ್: </strong>‘ಇತ್ತೀಚೆಗೆ ಲೀಸ್ಟರ್ನಲ್ಲಿ ನಡೆದಿದ್ದ ಗಲಭೆಗೆ ಅನಿಯಂತ್ರಿತ ವಲಸೆ ಹಾಗೂ ಹೊಸದಾಗಿ ವಲಸೆ ಬಂದವರು ಸಮಾಜದಲ್ಲಿ ಒಂದಾಗಲು ವಿಫಲವಾಗಿದ್ದೇ ಕಾರಣ’ ಎಂದು ಬ್ರಿಟನ್ನ ಗೃಹ ಕಾರ್ಯದರ್ಶಿ, ಭಾರತೀಯ ಸಂಜಾತೆ ಸುಯೆಲ್ಲಾ ಬ್ರೇವರ್ಮನ್ ತಿಳಿಸಿದ್ದಾರೆ.</p>.<p>ಬರ್ಮಿಂಗ್ಹ್ಯಾಮ್ನಲ್ಲಿ ನಡೆದಕನ್ಸರ್ವೇಟಿವ್ ಪಕ್ಷದ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಇತ್ತೀಚೆಗೆ ಗಲಭೆ ಪೀಡಿತ ಲೀಸ್ಟರ್ಗೆ ಭೇಟಿ ನೀಡಿದ್ದೆ. ಹೊಸದಾಗಿ ವಲಸೆ ಬಂದವರು ಮುಖ್ಯವಾಹಿನಿಯಲ್ಲಿ ಒಂದಾಗುವಲ್ಲಿ ವಿಫಲವಾಗಿರುವುದು ಆಗ ಮನದಟ್ಟಾಗಿತ್ತು. ಇಂತಹ ಬಿಕ್ಕಟ್ಟಿಗೆ ಬ್ರಿಟನ್ನಲ್ಲಿ ಅವಕಾಶವಿಲ್ಲ’ ಎಂದಿದ್ದಾರೆ.</p>.<p>‘ದೇಶಕ್ಕೆ ವಲಸೆ ಬರುವವರನ್ನು ನಿಯಂತ್ರಿಸಬೇಕಿದೆ. ಕೌಶಲಗಳನ್ನು ಹೊಂದಿರದ ವಿದೇಶಿ ಕೆಲಸಗಾರರ ಮೇಲೆ ಕಡಿವಾಣ ಹಾಕಬೇಕಿದೆ. 1960ರಲ್ಲಿ ನನ್ನ ಪಾಲಕರು ಕೀನ್ಯಾ ಮತ್ತು ಮಾರಿಷಸ್ನಿಂದ ಬ್ರಿಟನ್ಗೆ ವಲಸೆ ಬಂದರು. ಅವರು ಈ ದೇಶವನ್ನು ಪ್ರೀತಿಸಿದರು. ಅವರಿಗೆ ಈ ರಾಷ್ಟ್ರವು ಭದ್ರತೆ ಹಾಗೂ ಅವಕಾಶಗಳನ್ನು ಒದಗಿಸಿತ್ತು’ ಎಂದು ಹೇಳಿದ್ದಾರೆ.</p>.<p>‘ನಮ್ಮ ನೆಲದಲ್ಲಿ ಆಶ್ರಯ ಪಡೆದು ನಮ್ಮ ವ್ಯವಸ್ಥೆಯನ್ನೇ ಟೀಕಿಸುವ ಅನೇಕರು ದೇಶದಲ್ಲಿದ್ದಾರೆ’ ಎಂದೂ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಂಡನ್: </strong>‘ಇತ್ತೀಚೆಗೆ ಲೀಸ್ಟರ್ನಲ್ಲಿ ನಡೆದಿದ್ದ ಗಲಭೆಗೆ ಅನಿಯಂತ್ರಿತ ವಲಸೆ ಹಾಗೂ ಹೊಸದಾಗಿ ವಲಸೆ ಬಂದವರು ಸಮಾಜದಲ್ಲಿ ಒಂದಾಗಲು ವಿಫಲವಾಗಿದ್ದೇ ಕಾರಣ’ ಎಂದು ಬ್ರಿಟನ್ನ ಗೃಹ ಕಾರ್ಯದರ್ಶಿ, ಭಾರತೀಯ ಸಂಜಾತೆ ಸುಯೆಲ್ಲಾ ಬ್ರೇವರ್ಮನ್ ತಿಳಿಸಿದ್ದಾರೆ.</p>.<p>ಬರ್ಮಿಂಗ್ಹ್ಯಾಮ್ನಲ್ಲಿ ನಡೆದಕನ್ಸರ್ವೇಟಿವ್ ಪಕ್ಷದ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಇತ್ತೀಚೆಗೆ ಗಲಭೆ ಪೀಡಿತ ಲೀಸ್ಟರ್ಗೆ ಭೇಟಿ ನೀಡಿದ್ದೆ. ಹೊಸದಾಗಿ ವಲಸೆ ಬಂದವರು ಮುಖ್ಯವಾಹಿನಿಯಲ್ಲಿ ಒಂದಾಗುವಲ್ಲಿ ವಿಫಲವಾಗಿರುವುದು ಆಗ ಮನದಟ್ಟಾಗಿತ್ತು. ಇಂತಹ ಬಿಕ್ಕಟ್ಟಿಗೆ ಬ್ರಿಟನ್ನಲ್ಲಿ ಅವಕಾಶವಿಲ್ಲ’ ಎಂದಿದ್ದಾರೆ.</p>.<p>‘ದೇಶಕ್ಕೆ ವಲಸೆ ಬರುವವರನ್ನು ನಿಯಂತ್ರಿಸಬೇಕಿದೆ. ಕೌಶಲಗಳನ್ನು ಹೊಂದಿರದ ವಿದೇಶಿ ಕೆಲಸಗಾರರ ಮೇಲೆ ಕಡಿವಾಣ ಹಾಕಬೇಕಿದೆ. 1960ರಲ್ಲಿ ನನ್ನ ಪಾಲಕರು ಕೀನ್ಯಾ ಮತ್ತು ಮಾರಿಷಸ್ನಿಂದ ಬ್ರಿಟನ್ಗೆ ವಲಸೆ ಬಂದರು. ಅವರು ಈ ದೇಶವನ್ನು ಪ್ರೀತಿಸಿದರು. ಅವರಿಗೆ ಈ ರಾಷ್ಟ್ರವು ಭದ್ರತೆ ಹಾಗೂ ಅವಕಾಶಗಳನ್ನು ಒದಗಿಸಿತ್ತು’ ಎಂದು ಹೇಳಿದ್ದಾರೆ.</p>.<p>‘ನಮ್ಮ ನೆಲದಲ್ಲಿ ಆಶ್ರಯ ಪಡೆದು ನಮ್ಮ ವ್ಯವಸ್ಥೆಯನ್ನೇ ಟೀಕಿಸುವ ಅನೇಕರು ದೇಶದಲ್ಲಿದ್ದಾರೆ’ ಎಂದೂ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>