<p class="title"><strong>ಲಂಡನ್: </strong>ದುಬೈನಲ್ಲಿ ಇತ್ತೀಚೆಗೆ ಮುಕ್ತಾಯವಾದ ಏಷ್ಯಾ ಕಪ್ ಟೂರ್ನಿಯ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ನಂತರ ಪೂರ್ವ ಇಂಗ್ಲೆಂಡ್ನ ಲಿಸೆಸ್ಟರ್ ನಗರದಲ್ಲಿ ಹಿಂದೂ– ಮುಸ್ಲಿಮರ ನಡುವೆ ಹಿಂಸಾತ್ಮಕ ಘರ್ಷಣೆ ತೀವ್ರಗೊಂಡಿದೆ. ಬರ್ಮಿಂಗ್ಹ್ಯಾಂನಲ್ಲಿ ಹಿಂದೂ ದೇವಾಲಯದ ಎದುರು ಪ್ರತಿಭಟಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಹಿಂಸಾಚಾರ ಸಂಬಂಧ ಲಿಸೆಸ್ಟರ್ಶೈರ್ನಲ್ಲಿ ಇದುವರೆಗೆ 47 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಬಹುತೇಕರು ನಗರದ ಹೊರಗಿನವರು. ಬರ್ಮಿಂಗ್ಹ್ಯಾಂನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.</p>.<p><a href="https://www.prajavani.net/world-news/indian-mission-condemns-violence-temple-attack-in-uk-973364.html" itemprop="url">ಬ್ರಿಟನ್ನಲ್ಲಿ ಹಿಂದೂ-ಮುಸ್ಲಿಂ ಘರ್ಷಣೆ; ಹಿಂದೂ ದೇಗುಲ ಧ್ವಂಸ </a></p>.<p>ಶನಿವಾರ ಘಟನೆಯ ಸಮಯದಲ್ಲಿ ಬಂಧನಕ್ಕೊಳಗಾದ ಸ್ಥಳೀಯ ಯುವಕ ಅಮೋಸ್ ನೊರೊನ್ಹಾ (20) ಎಂಬಾತಮಾರಕಾಸ್ತ್ರ ಹೊಂದಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಲಿಸೆಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆತನಿಗೆ ಹತ್ತು ತಿಂಗಳ ಶಿಕ್ಷೆ ವಿಧಿಸಿದೆ ಎಂದು ಪೊಲೀಸರು ಹೇಳಿದ್ದಾರೆ.</p>.<p class="title">ಕಳೆದ ಐದು ದಿನಗಳ ಹಿಂದೆ ಶುರುವಾದ ಘರ್ಷಣೆ ಹಿಂಸಾಚಾರಕ್ಕೆ ತಿರುಗಿದ್ದು, ತ್ವೇಷಮಯ ವಾತಾವರಣ ಉಂಟಾಗಿದೆ. ಸಾಮರಸ್ಯ ಕಾಪಾಡಲು ಉಭಯ ಸಮುದಾಯದ ನಾಯಕರು ಜಂಟಿ ಕರೆ ಕೊಟ್ಟಿದ್ದಾರೆ.</p>.<p class="title">ಹಿಂದೂ ದೇಗುಲಗಳು ಮತ್ತು ಹಿಂದೂ ಧರ್ಮದ ಲಾಂಛನಗಳನ್ನು ಧ್ವಂಸಗೊಳಿಸಿರುವುದನ್ನು ಹಾಗೂ ಭಾರತೀಯ ಸಮುದಾಯದವರ ಮೇಲಿನ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ ಭಾರತೀಯ ಹೈಕಮಿಷನ್, ಸಂತ್ರಸ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿತು. ಪರಿಣಾಮಪೊಲೀಸರು,ಶಾಂತಿ– ಸುವ್ಯವಸ್ಥೆ ಕಾಪಾಡಲು ಬುಧವಾರವೂ ಗಸ್ತು ನಡೆಸಿದರು.</p>.<p class="title">ನಗರದ ಮಸೀದಿಯ ಹೊರಗೆ ಸೇರಿದ್ದ ಸಮುದಾಯದ ಮುಖಂಡರ ಪರವಾಗಿನಗರದ ಇಸ್ಕಾನ್ ದೇವಾಲಯದ ಅಧ್ಯಕ್ಷ ಪ್ರದ್ಯುಮ್ನ ದಾಸ್ ಅವರುವಾರಾಂತ್ಯದಲ್ಲಿ ಉಲ್ಬಣಗೊಂಡ ಹಿಂಸಾಚಾರದ ಬಗ್ಗೆ ವಿಷಾದಿಸುವ ಹೇಳಿಕೆ ಬಿಡುಗಡೆ ಮಾಡಿದರು.</p>.<p>‘ಪ್ರಚೋದನೆ ಮತ್ತು ಹಿಂಸಾಚಾರ ತಕ್ಷಣವೇ ನಿಲ್ಲಿಸಿ. ಲಿಸೆಸ್ಟರ್ ನಗರವನ್ನು ಶಾಂತವಾಗಿರಲು ಬಿಟ್ಟು, ಸಾಮರಸ್ಯ ಕಾಯ್ದುಕೊಳ್ಳಬೇಕು. ಪರಸ್ಪರರ ಪೂಜಾ, ಪ್ರಾರ್ಥನಾ ಸ್ಥಳಗಳನ್ನು ಗೌರವಿಸಬೇಕು. ಶಾಂತಿ ಕದಡಲು ಬಿಡೆವು, ಇದು ನಮ್ಮ ಸ್ಪಷ್ಟ ಸಂದೇಶ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಲಂಡನ್: </strong>ದುಬೈನಲ್ಲಿ ಇತ್ತೀಚೆಗೆ ಮುಕ್ತಾಯವಾದ ಏಷ್ಯಾ ಕಪ್ ಟೂರ್ನಿಯ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ನಂತರ ಪೂರ್ವ ಇಂಗ್ಲೆಂಡ್ನ ಲಿಸೆಸ್ಟರ್ ನಗರದಲ್ಲಿ ಹಿಂದೂ– ಮುಸ್ಲಿಮರ ನಡುವೆ ಹಿಂಸಾತ್ಮಕ ಘರ್ಷಣೆ ತೀವ್ರಗೊಂಡಿದೆ. ಬರ್ಮಿಂಗ್ಹ್ಯಾಂನಲ್ಲಿ ಹಿಂದೂ ದೇವಾಲಯದ ಎದುರು ಪ್ರತಿಭಟಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಹಿಂಸಾಚಾರ ಸಂಬಂಧ ಲಿಸೆಸ್ಟರ್ಶೈರ್ನಲ್ಲಿ ಇದುವರೆಗೆ 47 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಬಹುತೇಕರು ನಗರದ ಹೊರಗಿನವರು. ಬರ್ಮಿಂಗ್ಹ್ಯಾಂನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.</p>.<p><a href="https://www.prajavani.net/world-news/indian-mission-condemns-violence-temple-attack-in-uk-973364.html" itemprop="url">ಬ್ರಿಟನ್ನಲ್ಲಿ ಹಿಂದೂ-ಮುಸ್ಲಿಂ ಘರ್ಷಣೆ; ಹಿಂದೂ ದೇಗುಲ ಧ್ವಂಸ </a></p>.<p>ಶನಿವಾರ ಘಟನೆಯ ಸಮಯದಲ್ಲಿ ಬಂಧನಕ್ಕೊಳಗಾದ ಸ್ಥಳೀಯ ಯುವಕ ಅಮೋಸ್ ನೊರೊನ್ಹಾ (20) ಎಂಬಾತಮಾರಕಾಸ್ತ್ರ ಹೊಂದಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಲಿಸೆಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆತನಿಗೆ ಹತ್ತು ತಿಂಗಳ ಶಿಕ್ಷೆ ವಿಧಿಸಿದೆ ಎಂದು ಪೊಲೀಸರು ಹೇಳಿದ್ದಾರೆ.</p>.<p class="title">ಕಳೆದ ಐದು ದಿನಗಳ ಹಿಂದೆ ಶುರುವಾದ ಘರ್ಷಣೆ ಹಿಂಸಾಚಾರಕ್ಕೆ ತಿರುಗಿದ್ದು, ತ್ವೇಷಮಯ ವಾತಾವರಣ ಉಂಟಾಗಿದೆ. ಸಾಮರಸ್ಯ ಕಾಪಾಡಲು ಉಭಯ ಸಮುದಾಯದ ನಾಯಕರು ಜಂಟಿ ಕರೆ ಕೊಟ್ಟಿದ್ದಾರೆ.</p>.<p class="title">ಹಿಂದೂ ದೇಗುಲಗಳು ಮತ್ತು ಹಿಂದೂ ಧರ್ಮದ ಲಾಂಛನಗಳನ್ನು ಧ್ವಂಸಗೊಳಿಸಿರುವುದನ್ನು ಹಾಗೂ ಭಾರತೀಯ ಸಮುದಾಯದವರ ಮೇಲಿನ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ ಭಾರತೀಯ ಹೈಕಮಿಷನ್, ಸಂತ್ರಸ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿತು. ಪರಿಣಾಮಪೊಲೀಸರು,ಶಾಂತಿ– ಸುವ್ಯವಸ್ಥೆ ಕಾಪಾಡಲು ಬುಧವಾರವೂ ಗಸ್ತು ನಡೆಸಿದರು.</p>.<p class="title">ನಗರದ ಮಸೀದಿಯ ಹೊರಗೆ ಸೇರಿದ್ದ ಸಮುದಾಯದ ಮುಖಂಡರ ಪರವಾಗಿನಗರದ ಇಸ್ಕಾನ್ ದೇವಾಲಯದ ಅಧ್ಯಕ್ಷ ಪ್ರದ್ಯುಮ್ನ ದಾಸ್ ಅವರುವಾರಾಂತ್ಯದಲ್ಲಿ ಉಲ್ಬಣಗೊಂಡ ಹಿಂಸಾಚಾರದ ಬಗ್ಗೆ ವಿಷಾದಿಸುವ ಹೇಳಿಕೆ ಬಿಡುಗಡೆ ಮಾಡಿದರು.</p>.<p>‘ಪ್ರಚೋದನೆ ಮತ್ತು ಹಿಂಸಾಚಾರ ತಕ್ಷಣವೇ ನಿಲ್ಲಿಸಿ. ಲಿಸೆಸ್ಟರ್ ನಗರವನ್ನು ಶಾಂತವಾಗಿರಲು ಬಿಟ್ಟು, ಸಾಮರಸ್ಯ ಕಾಯ್ದುಕೊಳ್ಳಬೇಕು. ಪರಸ್ಪರರ ಪೂಜಾ, ಪ್ರಾರ್ಥನಾ ಸ್ಥಳಗಳನ್ನು ಗೌರವಿಸಬೇಕು. ಶಾಂತಿ ಕದಡಲು ಬಿಡೆವು, ಇದು ನಮ್ಮ ಸ್ಪಷ್ಟ ಸಂದೇಶ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>