ಮುಂದುವರಿದ ರಷ್ಯಾ ದಾಳಿ: ಉಕ್ರೇನ್ನಲ್ಲಿ ತೆರವು ಕಾರ್ಯಾಚರಣೆಗೆ ಅಡ್ಡಿ

ಕೀವ್: ರಷ್ಯಾ ದಾಳಿ ಮುಂದುವರಿದ ಪರಿಣಾಮ 2ನೇ ದಿನವಾದ ಭಾನುವಾರವೂ ಯುದ್ಧಪೀಡಿತ ನಗರಗಳಲ್ಲಿ ಸಿಲುಕಿದ್ದ ಪ್ರಜೆಗಳನ್ನು ತೆರವುಗಳಿಸಲು ಸಾಧ್ಯವಾಗಿಲ್ಲ ಎಂದು ಉಕ್ರೇನ್ ಸರ್ಕಾರ ಹೇಳಿದೆ.
ಭಾನುವಾರ ರಷ್ಯಾ ಕದನ ವಿರಾಮ ಘೋಷಿಸುವ ಸಾಧ್ಯತೆಯಿದ್ದ ಕಾರಣ ಯುದ್ಧಪೀಡಿತ ಮರಿಯೋಪೊಲ್ ಬಂದರು ಪ್ರದೇಶದಲ್ಲಿದ್ದ ಜನರನ್ನು ತೆರವುಗೊಳಿಸಲು ಉಕ್ರೇನ್ ಸರ್ಕಾರ ಯೋಜಿಸಿತ್ತು. ಆದರೆ ರಷ್ಯಾ ಯುದ್ಧವನ್ನು ಮುಂದುವರಿಸಿದ ಕಾರಣದಿಂದಾಗಿ ಅವರನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಉಕ್ರೇನ್ ಗೃಹ ಸಚಿವಾಲಯ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.