<p><strong>ರಾಯಪುರ: </strong>'ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯ್ದೆ- 1956'ರ ಅಡಿ ಅವಿವಾಹಿತ ಪುತ್ರಿಯು ತನ್ನ ಪೋಷಕರಿಂದ ತನ್ನ ಮದುವೆ ಖರ್ಚನ್ನು ಪಡೆಯಲು ಅವಕಾಶವಿದೆ ಎಂದು ಛತ್ತೀಸಗಡ ಹೈಕೋರ್ಟ್ ಪ್ರತಿಪಾದಿಸಿದೆ.</p>.<p>ಛತ್ತೀಸಗಡದ ದುರ್ಗ ಜಿಲ್ಲೆಯ 35 ವರ್ಷದ ರಾಜೇಶ್ವರಿ ಎಂಬ ಮಹಿಳೆ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ನ ಬಿಲಾಸ್ಪುರ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಭದೂರಿ ಹಾಗೂ ಸಂಜಯ್ ಎಸ್. ಅಗರ್ವಾಲ್ ಅವರಿದ್ದ ಪೀಠವು, '1956ರ ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯ್ದೆ' ಪ್ರಕಾರ ಅವಿವಾಹಿತ ಯುವತಿ ತನ್ನ ಪೋಷಕರಿಂದ ಮದುವೆಯ ಖರ್ಚು ಪಡೆಯಲು ಅವಕಾಶವಿದೆ ಎಂಬ ವಕೀಲರ ವಾದವನ್ನು ಪುಷ್ಟೀಕರಿಸಿತು.</p>.<p>ಈ ಮೂಲಕ 2016ರ ಏಪ್ರಿಲ್ 22ರಂದು ದುರ್ಗ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ನೀಡಿದ್ದ ಆದೇಶವನ್ನು ಹೈಕೋರ್ಟ್ ತಳ್ಳಿ ಹಾಕಿದೆ.</p>.<p><strong>ಏನಿದು ಪ್ರಕರಣ?:</strong>ಭಿಲಾಯ್ ಉಕ್ಕು ಘಟಕದ ಉದ್ಯೋಗಿಯಾದ ಭಾನುರಾಮ್ ಅವರ ಪುತ್ರಿಯಾದ ರಾಜೇಶ್ವರಿ ಅವರು ತನಗೆ ಮದುವೆ ಖರ್ಚು ನೀಡಬೇಕು ಎಂದು ಕೋರಿ 2016ರಲ್ಲಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿಯಲ್ಲಿ ತಮ್ಮ ತಂದೆ ಭಾನುರಾಮ್ ಅವರು ನಿವೃತ್ತಿಯಾಗುವ ವೇಳೆ ₹55 ಲಕ್ಷ ಪಡೆಯಲಿದ್ದಾರೆ. ಇದರಲ್ಲಿ ತನ್ನ ಮದುವೆ ಖರ್ಚಿಗಾಗಿ ₹20 ಲಕ್ಷ ನೀಡಬೇಕು ಎಂದು ಸೂಚಿಸಬೇಕು ಎಂದು ರಾಜೇಶ್ವರಿ ಅವರು ಉಲ್ಲೇಖಿಸಿದ್ದರು. ಆದರೆ ಕೌಟುಂಬಿಕ ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿತ್ತು.ಆದರೆ, ಇದರ ವಿರುದ್ಧ ರಾಜೇಶ್ವರಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಪುರ: </strong>'ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯ್ದೆ- 1956'ರ ಅಡಿ ಅವಿವಾಹಿತ ಪುತ್ರಿಯು ತನ್ನ ಪೋಷಕರಿಂದ ತನ್ನ ಮದುವೆ ಖರ್ಚನ್ನು ಪಡೆಯಲು ಅವಕಾಶವಿದೆ ಎಂದು ಛತ್ತೀಸಗಡ ಹೈಕೋರ್ಟ್ ಪ್ರತಿಪಾದಿಸಿದೆ.</p>.<p>ಛತ್ತೀಸಗಡದ ದುರ್ಗ ಜಿಲ್ಲೆಯ 35 ವರ್ಷದ ರಾಜೇಶ್ವರಿ ಎಂಬ ಮಹಿಳೆ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ನ ಬಿಲಾಸ್ಪುರ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಭದೂರಿ ಹಾಗೂ ಸಂಜಯ್ ಎಸ್. ಅಗರ್ವಾಲ್ ಅವರಿದ್ದ ಪೀಠವು, '1956ರ ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯ್ದೆ' ಪ್ರಕಾರ ಅವಿವಾಹಿತ ಯುವತಿ ತನ್ನ ಪೋಷಕರಿಂದ ಮದುವೆಯ ಖರ್ಚು ಪಡೆಯಲು ಅವಕಾಶವಿದೆ ಎಂಬ ವಕೀಲರ ವಾದವನ್ನು ಪುಷ್ಟೀಕರಿಸಿತು.</p>.<p>ಈ ಮೂಲಕ 2016ರ ಏಪ್ರಿಲ್ 22ರಂದು ದುರ್ಗ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ನೀಡಿದ್ದ ಆದೇಶವನ್ನು ಹೈಕೋರ್ಟ್ ತಳ್ಳಿ ಹಾಕಿದೆ.</p>.<p><strong>ಏನಿದು ಪ್ರಕರಣ?:</strong>ಭಿಲಾಯ್ ಉಕ್ಕು ಘಟಕದ ಉದ್ಯೋಗಿಯಾದ ಭಾನುರಾಮ್ ಅವರ ಪುತ್ರಿಯಾದ ರಾಜೇಶ್ವರಿ ಅವರು ತನಗೆ ಮದುವೆ ಖರ್ಚು ನೀಡಬೇಕು ಎಂದು ಕೋರಿ 2016ರಲ್ಲಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿಯಲ್ಲಿ ತಮ್ಮ ತಂದೆ ಭಾನುರಾಮ್ ಅವರು ನಿವೃತ್ತಿಯಾಗುವ ವೇಳೆ ₹55 ಲಕ್ಷ ಪಡೆಯಲಿದ್ದಾರೆ. ಇದರಲ್ಲಿ ತನ್ನ ಮದುವೆ ಖರ್ಚಿಗಾಗಿ ₹20 ಲಕ್ಷ ನೀಡಬೇಕು ಎಂದು ಸೂಚಿಸಬೇಕು ಎಂದು ರಾಜೇಶ್ವರಿ ಅವರು ಉಲ್ಲೇಖಿಸಿದ್ದರು. ಆದರೆ ಕೌಟುಂಬಿಕ ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿತ್ತು.ಆದರೆ, ಇದರ ವಿರುದ್ಧ ರಾಜೇಶ್ವರಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>