ಛತ್ತೀಸಗಡದ ದುರ್ಗ ಜಿಲ್ಲೆಯ 35 ವರ್ಷದ ರಾಜೇಶ್ವರಿ ಎಂಬ ಮಹಿಳೆ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ನ ಬಿಲಾಸ್ಪುರ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಭದೂರಿ ಹಾಗೂ ಸಂಜಯ್ ಎಸ್. ಅಗರ್ವಾಲ್ ಅವರಿದ್ದ ಪೀಠವು, '1956ರ ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯ್ದೆ' ಪ್ರಕಾರ ಅವಿವಾಹಿತ ಯುವತಿ ತನ್ನ ಪೋಷಕರಿಂದ ಮದುವೆಯ ಖರ್ಚು ಪಡೆಯಲು ಅವಕಾಶವಿದೆ ಎಂಬ ವಕೀಲರ ವಾದವನ್ನು ಪುಷ್ಟೀಕರಿಸಿತು.