ಕೋವಿಡ್–19ನಿಂದ ಈಗಾಗಲೇ ದೇಶ ತತ್ತರಿಸಿದ್ದು, ಬರುವ ದಿನಗಳಲ್ಲಿ ಆರ್ಥಿಕತೆ ಮತ್ತಷ್ಟು ಕುಸಿಯುವ ಆತಂಕವೂ ಇತ್ತು. ಹೀಗಾಗಿ ಜನರಿಗೆ ನೆರವಿನ ಹಸ್ತ ಚಾಚಿ, ಆ ಮೂಲಕ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡುವ ಈ ಪ್ಯಾಕೇಜ್ಗೆ ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಸಂಸದರು ಹಲವು ಸುತ್ತಿನ ಚರ್ಚೆ ನಂತರ ಅನುಮೋದನೆ ನೀಡಿದ್ದಾರೆ.