<p><strong>ಬೆಂಗಳೂರು:</strong>ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್ಆರ್) ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ಮೂರನೇ ದಿನವಾದ ಶುಕ್ರವಾರ ಜನಸಾಗರವೇ ಹರಿದು ಬಂತು. ನಗರದಿಂದ ಬಂದಿದ್ದ ಜನ ಅಲಂಕಾರಿಕ ಸಸಿಗಳ ಖರೀದಿಗೆ ಮುಗಿ ಬಿದ್ದಿದ್ದರು.</p>.<p>ಕಳೆದೆರಡು ದಿನಗಳಿಗೆ ಹೋಲಿಸಿದರೆ ಶುಕ್ರವಾರ ಹೆಚ್ಚು ಜನ ಭೇಟಿ ನೀಡಿದರು. 15 ಸಾವಿರ ರೈತರು ಮೇಳದಲ್ಲಿನೋಂದಣಿ ಮಾಡಿಕೊಂಡಿದ್ದು, ವಿವಿಧ ಶಾಲಾ ಕಾಲೇಜುಗಳ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭೇಟಿ ನೀಡಿದರು.</p>.<p>ರೈತರಿಗೆ ಮಾಹಿತಿ ನೀಡುವ ಸಲುವಾಗಿ ಎಲ್ಲ ಮಾದರಿಯ ಹಣ್ಣು, ತರಕಾರಿ, ಹೂವಿನ ಬೆಳೆಗಳ ಪ್ರಾತ್ಯಕ್ಷಿಕೆಗಳನ್ನು ಸಂಸ್ಥೆಯ ಆವರಣದಲ್ಲಿ ಬೆಳೆಸಲಾಗಿದೆ. ಪ್ರತಿ ಪ್ರಾತ್ಯಕ್ಷಿಕೆಯ ಬಳಿಯೂ ರೈತರಿಗೆ ಮಾಹಿತಿ ನೀಡಲು ಸಂಸ್ಥೆಯ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.</p>.<p>ರಾಜ್ಯ ಮತ್ತು ಹೊರ ರಾಜ್ಯಗಳಿಂದ ರೈತರು ಹಾಗೂ ವಿವಿಧ ಕೃಷಿ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳು ಮೇಳಕ್ಕೆ ಬಂದಿದ್ದರು. ಸುಡು ಬಿಸಿಲನ್ನೂ ಲೆಕ್ಕಿಸದೆ ಆವರಣದಲ್ಲಿದ್ದಪ್ರಾತ್ಯಕ್ಷಿಕ ತೋಟಗಳಲ್ಲಿ ಸಂಚರಿಸಿ ಕೃಷಿ ವಿಧಾನಗಳ ಬಗ್ಗೆ ಮಾಹಿತಿ ಪಡೆದರು.</p>.<p class="Subhead"><strong>ಸಸಿಗಳ ಖರೀದಿ ಜೋರು:</strong> ಮೇಳದಲ್ಲಿ 250ಕ್ಕೂ ಹೆಚ್ಚು ಮಳಿಗೆಗಳಿದ್ದು, ಖರೀದಿಗೆಜನ ಮುಗಿಬಿದ್ದರು. ಮೇಳಕ್ಕೆ ಭೇಟಿ ನೀಡಿದ್ದ ನಗರವಾಸಿಗಳು ಮನೆಯ ತಾರಸಿಯಲ್ಲಿ ಬೆಳೆಸಬಹುದಾದ ಪೇರಲೆ, ನಿಂಬೆ, ಹೂವು, ತರಕಾರಿ ಹಾಗೂ ವಿವಿಧ ಶೈಲಿಯ ಅಲಂಕಾರಿಕ ಸಸಿಗಳನ್ನು ಖರೀದಿಸಿದರು. ಕಡಿಮೆ ಅವಧಿಯಲ್ಲಿ ಬೆಳೆಯುವ ಬಾಳೆ ಸಸಿಗಳನ್ನು ₹10ರಂತೆ ಮಾರಾಟ ಮಾಡಲಾಗುತ್ತಿದ್ದು, ಬಹುತೇಕರು ಕೈಯಲ್ಲಿ ಬಾಳೆ ಸಸಿ ಹಿಡಿದು ಹಿಂತಿರುಗುತ್ತಿದ್ದರು.</p>.<p class="Subhead">‘ನೀರಾ’ ಸವಿದ ರೈತರು: ಮೇಳದ ಮಳಿಗೆಯೊಂದರಲ್ಲಿ ಆರೋಗ್ಯಕರ ನೀರಾ 250 ಮಿ.ಲೀಗೆ ₹50ರಂತೆ ಮಾರಾಟ ಮಾಡಲಾಗುತ್ತಿದೆ. ನೀರಾ ಕುಡಿಯಲು ರೈತರು ಮಳಿಗೆ ಮುಂದೆ ಬೀಡುಬಿಟ್ಟಿದ್ದರು. ಪೇಯ ಕುಡಿದ ಬಳಿಕ ರುಚಿಗೆ ಮಾರುಹೋದರು. ಬೆಟ್ಟದ ನೆಲ್ಲಿ, ಶುಂಠಿ ಹಾಗೂ ನಿಂಬೆ ಮಿಶ್ರಿತ ಪಾನೀಯವನ್ನು ಜನರು ಕುತೂಹಲದಿಂದ ಸೇವಿಸಿದರು.</p>.<p><strong>ಸದ್ದು ಮಾಡಿದ ‘ದೇಸಿ ನಾರು’</strong></p>.<p>ಸ್ನಾನದ ವೇಳೆ ಉಪಯೋಗಿಸುವ ಪ್ಲಾಸ್ಟಿಕ್ ನಾರಿಗೆ ಪರ್ಯಾಯವಾಗಿ ತುಪ್ಪದ ಹೀರೇಕಾಯಿಯ ಸಿಪ್ಪೆಯಿಂದ ತಯಾರಿಸಿದ ದೇಸಿ ನಾರು ಮೇಳದಲ್ಲಿ ಸದ್ದು ಮಾಡಿತು.</p>.<p>‘ನಾನೇ ಸಿದ್ಧಪಡಿಸಿರುವ ಈ ನಾರು ನಾರು ಕನಿಷ್ಠ ಒಂದು ವರ್ಷದವರೆಗೆ ಬಾಳಿಕೆ ಬರಲಿದೆ’ ಎಂದು ಇದನ್ನು ಸಿದ್ಧಪಡಿಸಿರುವ ಮಧುಗಿರಿಯ ಶಿವಣ್ಣ ತಿಳಿಸಿದರು.</p>.<p><strong>ದ್ರಾಕ್ಷಾರಸ ತಯಾರಿಕೆ–ಜನರಿಗೆ ಮಾಹಿತಿ</strong></p>.<p>ಕರ್ನಾಟಕ ದ್ರಾಕ್ಷಾ ಮಂಡಳಿಯಿಂದ ದ್ರಾಕ್ಷಾರಸ (ವೈನ್) ತಯಾರಿಸುವ ವಿಧಾನಗಳು ಹಾಗೂ ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ಜನರಿಗೆ ವಿವರಿಸಲಾಯಿತು. ಕೆಂಪು, ಬಿಳಿ ಹಾಗೂ ರೋಸ್ ವೈನ್ಗಳ ಮಾದರಿಗಳನ್ನು ಮಳಿಗೆಯಲ್ಲಿ ಇಡಲಾಗಿತ್ತು. ದ್ರಾಕ್ಷಿ ಬೆಳೆ ಉತ್ತೇಜಿಸುವ ಸಲುವಾಗಿ ರೈತರಿಗೆ ಮಾಹಿತಿ ನೀಡಲಾಗುತ್ತಿದೆ.</p>.<p>***</p>.<p>ಪ್ರತಿ ವರ್ಷ ಇಲ್ಲಿ ಮೇಳ ನಡೆಯುವ ಮಾಹಿತಿ ಇತ್ತು . ಮೊದಲ ಬಾರಿ ಮೇಳಕ್ಕೆ ಬಂದಿದ್ದೇನೆ. ಆಧುನಿಕ ಕೃಷಿ ಪದ್ಧತಿಗಳ ಅಳವಡಿಕೆಯಿಂದ ರೈತರು ಲಾಭ ಪಡೆಯಬಹುದು</p>.<p><em><strong>- ಸತೀಶ್, ಕೆ.ಆರ್.ಪುರ</strong></em></p>.<p>ಪ್ರತಿ ವರ್ಷ ಇಲಾಖೆ ಬಿಡುಗಡೆ ಮಾಡುವ ಹೊಸ ತಳಿಗಳನ್ನು ರೈತರು ಬೆಳೆಯಬೇಕು. ಹಳೆಯ ತಳಿಗಳಿಗಿಂತ ಇವು ಹೆಚ್ಚು ಇಳುವರಿ ಹಾಗೂ ಲಾಭ ನೀಡುತ್ತವೆ</p>.<p><em><strong>- ಮುನಿರಾಜ್, ಶಿಡ್ಲಘಟ್ಟ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್ಆರ್) ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ಮೂರನೇ ದಿನವಾದ ಶುಕ್ರವಾರ ಜನಸಾಗರವೇ ಹರಿದು ಬಂತು. ನಗರದಿಂದ ಬಂದಿದ್ದ ಜನ ಅಲಂಕಾರಿಕ ಸಸಿಗಳ ಖರೀದಿಗೆ ಮುಗಿ ಬಿದ್ದಿದ್ದರು.</p>.<p>ಕಳೆದೆರಡು ದಿನಗಳಿಗೆ ಹೋಲಿಸಿದರೆ ಶುಕ್ರವಾರ ಹೆಚ್ಚು ಜನ ಭೇಟಿ ನೀಡಿದರು. 15 ಸಾವಿರ ರೈತರು ಮೇಳದಲ್ಲಿನೋಂದಣಿ ಮಾಡಿಕೊಂಡಿದ್ದು, ವಿವಿಧ ಶಾಲಾ ಕಾಲೇಜುಗಳ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭೇಟಿ ನೀಡಿದರು.</p>.<p>ರೈತರಿಗೆ ಮಾಹಿತಿ ನೀಡುವ ಸಲುವಾಗಿ ಎಲ್ಲ ಮಾದರಿಯ ಹಣ್ಣು, ತರಕಾರಿ, ಹೂವಿನ ಬೆಳೆಗಳ ಪ್ರಾತ್ಯಕ್ಷಿಕೆಗಳನ್ನು ಸಂಸ್ಥೆಯ ಆವರಣದಲ್ಲಿ ಬೆಳೆಸಲಾಗಿದೆ. ಪ್ರತಿ ಪ್ರಾತ್ಯಕ್ಷಿಕೆಯ ಬಳಿಯೂ ರೈತರಿಗೆ ಮಾಹಿತಿ ನೀಡಲು ಸಂಸ್ಥೆಯ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.</p>.<p>ರಾಜ್ಯ ಮತ್ತು ಹೊರ ರಾಜ್ಯಗಳಿಂದ ರೈತರು ಹಾಗೂ ವಿವಿಧ ಕೃಷಿ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳು ಮೇಳಕ್ಕೆ ಬಂದಿದ್ದರು. ಸುಡು ಬಿಸಿಲನ್ನೂ ಲೆಕ್ಕಿಸದೆ ಆವರಣದಲ್ಲಿದ್ದಪ್ರಾತ್ಯಕ್ಷಿಕ ತೋಟಗಳಲ್ಲಿ ಸಂಚರಿಸಿ ಕೃಷಿ ವಿಧಾನಗಳ ಬಗ್ಗೆ ಮಾಹಿತಿ ಪಡೆದರು.</p>.<p class="Subhead"><strong>ಸಸಿಗಳ ಖರೀದಿ ಜೋರು:</strong> ಮೇಳದಲ್ಲಿ 250ಕ್ಕೂ ಹೆಚ್ಚು ಮಳಿಗೆಗಳಿದ್ದು, ಖರೀದಿಗೆಜನ ಮುಗಿಬಿದ್ದರು. ಮೇಳಕ್ಕೆ ಭೇಟಿ ನೀಡಿದ್ದ ನಗರವಾಸಿಗಳು ಮನೆಯ ತಾರಸಿಯಲ್ಲಿ ಬೆಳೆಸಬಹುದಾದ ಪೇರಲೆ, ನಿಂಬೆ, ಹೂವು, ತರಕಾರಿ ಹಾಗೂ ವಿವಿಧ ಶೈಲಿಯ ಅಲಂಕಾರಿಕ ಸಸಿಗಳನ್ನು ಖರೀದಿಸಿದರು. ಕಡಿಮೆ ಅವಧಿಯಲ್ಲಿ ಬೆಳೆಯುವ ಬಾಳೆ ಸಸಿಗಳನ್ನು ₹10ರಂತೆ ಮಾರಾಟ ಮಾಡಲಾಗುತ್ತಿದ್ದು, ಬಹುತೇಕರು ಕೈಯಲ್ಲಿ ಬಾಳೆ ಸಸಿ ಹಿಡಿದು ಹಿಂತಿರುಗುತ್ತಿದ್ದರು.</p>.<p class="Subhead">‘ನೀರಾ’ ಸವಿದ ರೈತರು: ಮೇಳದ ಮಳಿಗೆಯೊಂದರಲ್ಲಿ ಆರೋಗ್ಯಕರ ನೀರಾ 250 ಮಿ.ಲೀಗೆ ₹50ರಂತೆ ಮಾರಾಟ ಮಾಡಲಾಗುತ್ತಿದೆ. ನೀರಾ ಕುಡಿಯಲು ರೈತರು ಮಳಿಗೆ ಮುಂದೆ ಬೀಡುಬಿಟ್ಟಿದ್ದರು. ಪೇಯ ಕುಡಿದ ಬಳಿಕ ರುಚಿಗೆ ಮಾರುಹೋದರು. ಬೆಟ್ಟದ ನೆಲ್ಲಿ, ಶುಂಠಿ ಹಾಗೂ ನಿಂಬೆ ಮಿಶ್ರಿತ ಪಾನೀಯವನ್ನು ಜನರು ಕುತೂಹಲದಿಂದ ಸೇವಿಸಿದರು.</p>.<p><strong>ಸದ್ದು ಮಾಡಿದ ‘ದೇಸಿ ನಾರು’</strong></p>.<p>ಸ್ನಾನದ ವೇಳೆ ಉಪಯೋಗಿಸುವ ಪ್ಲಾಸ್ಟಿಕ್ ನಾರಿಗೆ ಪರ್ಯಾಯವಾಗಿ ತುಪ್ಪದ ಹೀರೇಕಾಯಿಯ ಸಿಪ್ಪೆಯಿಂದ ತಯಾರಿಸಿದ ದೇಸಿ ನಾರು ಮೇಳದಲ್ಲಿ ಸದ್ದು ಮಾಡಿತು.</p>.<p>‘ನಾನೇ ಸಿದ್ಧಪಡಿಸಿರುವ ಈ ನಾರು ನಾರು ಕನಿಷ್ಠ ಒಂದು ವರ್ಷದವರೆಗೆ ಬಾಳಿಕೆ ಬರಲಿದೆ’ ಎಂದು ಇದನ್ನು ಸಿದ್ಧಪಡಿಸಿರುವ ಮಧುಗಿರಿಯ ಶಿವಣ್ಣ ತಿಳಿಸಿದರು.</p>.<p><strong>ದ್ರಾಕ್ಷಾರಸ ತಯಾರಿಕೆ–ಜನರಿಗೆ ಮಾಹಿತಿ</strong></p>.<p>ಕರ್ನಾಟಕ ದ್ರಾಕ್ಷಾ ಮಂಡಳಿಯಿಂದ ದ್ರಾಕ್ಷಾರಸ (ವೈನ್) ತಯಾರಿಸುವ ವಿಧಾನಗಳು ಹಾಗೂ ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ಜನರಿಗೆ ವಿವರಿಸಲಾಯಿತು. ಕೆಂಪು, ಬಿಳಿ ಹಾಗೂ ರೋಸ್ ವೈನ್ಗಳ ಮಾದರಿಗಳನ್ನು ಮಳಿಗೆಯಲ್ಲಿ ಇಡಲಾಗಿತ್ತು. ದ್ರಾಕ್ಷಿ ಬೆಳೆ ಉತ್ತೇಜಿಸುವ ಸಲುವಾಗಿ ರೈತರಿಗೆ ಮಾಹಿತಿ ನೀಡಲಾಗುತ್ತಿದೆ.</p>.<p>***</p>.<p>ಪ್ರತಿ ವರ್ಷ ಇಲ್ಲಿ ಮೇಳ ನಡೆಯುವ ಮಾಹಿತಿ ಇತ್ತು . ಮೊದಲ ಬಾರಿ ಮೇಳಕ್ಕೆ ಬಂದಿದ್ದೇನೆ. ಆಧುನಿಕ ಕೃಷಿ ಪದ್ಧತಿಗಳ ಅಳವಡಿಕೆಯಿಂದ ರೈತರು ಲಾಭ ಪಡೆಯಬಹುದು</p>.<p><em><strong>- ಸತೀಶ್, ಕೆ.ಆರ್.ಪುರ</strong></em></p>.<p>ಪ್ರತಿ ವರ್ಷ ಇಲಾಖೆ ಬಿಡುಗಡೆ ಮಾಡುವ ಹೊಸ ತಳಿಗಳನ್ನು ರೈತರು ಬೆಳೆಯಬೇಕು. ಹಳೆಯ ತಳಿಗಳಿಗಿಂತ ಇವು ಹೆಚ್ಚು ಇಳುವರಿ ಹಾಗೂ ಲಾಭ ನೀಡುತ್ತವೆ</p>.<p><em><strong>- ಮುನಿರಾಜ್, ಶಿಡ್ಲಘಟ್ಟ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>