ಪ್ರಸ್ತುತ ರಾವಣಿ ಗ್ರಾಮದ ಬಳಿ ಮಾದಯ್ಯ ಎಂಬುವರ ಜಮೀನಿನಲ್ಲಿ ಮುಕ್ಕಾಲು ಎಕರೆ ವಿಸ್ತೀರ್ಣದಲ್ಲಿ ಹೈಬ್ರಿಡ್ ತಳಿಯ ಬದನೆಕಾಯಿ ಬೆಳೆಯನ್ನು ಹನಿ ನೀರಾವರಿ ಮೂಲಕ ಬೆಳೆಯಲಾಗಿದೆ. ಈ ಬೆಳೆಗೆ ಆಧುನಿಕವಾಗಿ ನೀರಿನೊಡನೆ ರಾಸಾಯನಿಕ ಸೇರಿಸುವುದು, ನೀರು ಪೂರೈಕೆ, ಕಟಾವು, ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಬೇಸಾಯ ತಜ್ಞ ಪಿ.ವಿ.ಜೋಶಿ ಮಾಹಿತಿ ನೀಡಿದ್ದಾರೆ.