ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ರಂದು ವಿಚಾರಸಂಕಿರಣ

Last Updated 4 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು ಸಮೀಪದ ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ಬೆಸ್ಸ್ಟ್ ಹಾರ್ಟ್ ಸಹಯೋಗದಲ್ಲಿ ಮಾರ್ಚ್‌ 15ರಂದು ಒಂದು ದಿನದ ವಿಚಾರ ಸಂಕಿರಣ ಆಯೋಜಿಸಿದೆ.

ವಿಚಾರ ಸಂಕಿರಣದಲ್ಲಿ ಸಸ್ಯ ಆರೋಗ್ಯ ನಿರ್ವಹಣಾ ತಂತ್ರಜ್ಞಾನ ಮತ್ತು ಹೊಸ ಉದ್ಯಮದ ತಾಂತ್ರಿಕ ವಿಷಯಗಳ ಚರ್ಚಿಸಲಾಗುತ್ತದೆ. ಸೂಕ್ಷ್ಮಜೀವಿ ಒಕ್ಕೂಟದ ತಂತ್ರಜ್ಞಾನ, ಕೋಕೊಪಿಟ್‌ ತಂತ್ರಜ್ಞಾನ, ಜೈವಿಕ ರೋಗ ನಿರೋಧಕಗಳು ಮತ್ತು ಸೂಕ್ಷ್ಮ ಪೋಷಕಾಂಶಗಳ ಉಪಯುಕ್ತಕತೆ, ಉತ್ಪಾದಕತೆಗಳ ಕುರಿತು ರೈತ – ವಿಜ್ಞಾನಿಗಳ ನಡುವೆ ಸಮಾಲೋಚನೆಯೂ ಇರುತ್ತದೆ.

ಹೊಸ ಉದ್ಯಮ ಆರಂಭಿಸುವವರು ಅನುಸರಿಸಬೇಕಾದ ತಂತ್ರಗಳ ಬಗ್ಗೆ ವಿಷಯ ತಜ್ಞರು ಉಪಯುಕ್ತ ಮಾಹಿತಿ ನೀಡಲಾಗುತ್ತದೆ. ಹೊಸ ಉದ್ಯಮ ಪ್ರಾರಂಭಿಸಿ ಯಶಸ್ವಿಯಾಗಿರುವ ಉದ್ಯಮಿಗಳು ತಮ್ಮ ಗೆಲುವಿನ ಕಥೆಗಳನ್ನು ಹಂಚಿಕೊಳ್ಳಲಿದ್ದಾರೆ. ಜತೆಗೆ, ಸಲಹೆಗಳು ನೀಡಲಿದ್ದಾರೆ. ಆಸಕ್ತ ರೈತರು ಈ ಕಾರ್ಯಕ್ರಮದಲ್ಲಿ ಭಾಗಹಿಸಬಹುದು.

ವಿಚಾರ ಸಂಕಿರಣ ಕುರಿತು ಹೆಚ್ಚಿನ ಮಾಹಿತಿಗಾಗಿ +918197926903 ಗೆ ಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT