ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡ ಸೊಂಪಾಗಿ ಬೆಳೆಯಲು ಅಕ್ಕಿ ತೊಳೆದ ನೀರು

Last Updated 12 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ದಕ್ಷಿಣ ಭಾರತದಲ್ಲಿ ಬಹುತೇಕ ಜನರು ನಿತ್ಯ ಊಟಕ್ಕೆ ಬಳಸುವುದು ಅನ್ನವೇ. ಅಕ್ಕಿಯನ್ನು ಬೇಯಿಸುವ ಮುನ್ನ 2–3 ಸಲ ನೀರಿನಲ್ಲಿ ತೊಳೆದು ಶುದ್ಧಗೊಳಿಸುವುದು ರೂಢಿ. ಆದರೆ ಈ ನೀರನ್ನು ಬಳಸದೇ ಚೆಲ್ಲುವುದು ಕೂಡ
ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಕೆಲವರು ಮಾತ್ರ ತಲೆಗೂದಲಿಗೆ, ತ್ವಚೆಯ ಅಂದಕ್ಕೆ ಈ ನೀರನ್ನು ಬಳಸುವುದಿದೆ. ಆದರೆಅಕ್ಕಿತೊಳೆದನೀರುಅಥವಾ ಅಕ್ಕಚ್ಚನ್ನು ಗಿಡಗಳಿಗೆ ಹಾಕಿದರೆ ಅವುಸೊಂಪಾಗಿಬೆಳೆಯುತ್ತವೆ ಗೊತ್ತೇ? ಜೊತೆಗೆ ಇದರಿಂದ ಕೀಟನಾಶಕ ಮತ್ತು ಗೊಬ್ಬರವನ್ನು ಕೂಡ ತಯಾರಿಸಬಹುದು.

ಅಕ್ಕಿತೊಳೆದನಂತರ ಬಸಿಯುವನೀರುಮಾತ್ರವಲ್ಲ, ಕೆಲವೊಮ್ಮೆ ನೆನೆ ಹಾಕಿದ ಅಕ್ಕಿಯನ್ನಷ್ಟೇ ಬಳಸಿ ಚೆಲ್ಲುವ ನೀರನ್ನು ಕೂಡ ಗಿಡಗಳಿಗೆ ಹಾಕಬಹುದು.

ಅಕ್ಕಿತೊಳೆದನೀರಿನಲ್ಲಿ ವಿವಿಧ ಬಗೆಯ ಪೋಷಕಾಂಶಗಳಿವೆ. ಗಿಡಗಳ ಬೆಳವಣಿಗೆಗೆ ಇವು ಪೂರಕ. ಇದರಲ್ಲಿರುವ ಪ್ರೋಟಿನ್‌, ನಾರಿನಾಂಶ, ಅಮಿನೊ ಆಮ್ಲಗಳು, ಕ್ಯಾಲ್ಸಿಯಂ, ಫಾಸ್ಪರಸ್‌, ಕಬ್ಬಿಣ, ಸತು ಮೊದಲಾದ ಅಂಶಗಳು ತರಕಾರಿ ಗಿಡಗಳಿಗೆ, ಔಷಧಿ ಗಿಡಗಳಿಗೆ, ಹಾಗೆಯೇ ಮನೆಯ ಆಲಂಕಾರಿಕ ಗಿಡಗಳಿಗೆ ಬಳಸಬಹುದು. ಇದರಲ್ಲಿ ಹಲವು ಬಗೆಯ ವಿಟಮಿನ್‌ಗಳು, ಖನಿಜಾಂಶಗಳಿದ್ದು, ಇವು ಬೇರಿಗೆ ಸಾಕಷ್ಟು ಪೌಷ್ಟಿಕಾಂಶ ಒದಗಿಸುತ್ತವೆ. ಬೇರಿನಲ್ಲಿರುವ ಲ್ಯಾಕ್ಟೊ ಬೆಸಿಲೈ ಎಂಬ ಬ್ಯಾಕ್ಟೀರಿಯಾ ಬೆಳೆಯಲೂ ಇದು ಪೋಷಕಾಂಶ ಒದಗಿಸುತ್ತದೆ.

ಈ ನೀರನ್ನು ಹಾಗೆಯೇ ಬಳಸಬೇಕೆ ಎಂಬ ಪ್ರಶ್ನೆ ಏಳುವುದು ಸಹಜ. ಇದನ್ನು ಗಿಡಗಳಿಗೆ ನೇರವಾಗಿ ಹಾಕಬಹುದು. ಇದರಿಂದ ಅಗತ್ಯ ಪೋಷಕಾಂಶಗಳು ಲಭ್ಯ. ಆದರೆ ಕೀಟನಾಶಕದಂತೆ ಬಳಸುವುದಾದರೆ ನೈಸರ್ಗಿಕ ಪ್ರಕ್ರಿಯೆ ಅವಶ್ಯಕ. ಇದಕ್ಕಾಗಿಅಕ್ಕಿತೊಳೆದನೀರನ್ನು ಒಂದು ಬಕೆಟ್‌ನಲ್ಲಿ ಶೇಖರಿಸಿಡಿ. ನೆರಳಿರುವ ಜಾಗದಲ್ಲಿ ಇರಿಸುವುದನ್ನು ಮರೆಯಬೇಡಿ. ಆದರೆ ಸಾಕಷ್ಟು ಗಾಳಿಯಾಡುವಂತಿರಬೇಕು. 10–15 ದಿನಗಳ ನಂತರ ಇದರಲ್ಲಿ ಯೀಸ್ಟ್‌ ಬೆಳೆದು ನೀರಿನ ಮೇಲೆ ಬರುತ್ತದೆ. ಇದು ಗಿಡಗಳಿಗೆ ಒಳ್ಳೆಯ ಕೀಟನಾಶಕ ಕೂಡ. ಇದನ್ನು ತರಕಾರಿ, ಹೂವಿನ ಗಿಡಗಳ ಮೇಲೆ ಎರಚಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT