<p>ಮೈಸೂರು ತಾಲ್ಲೂಕಿನ ಬನ್ನೂರಿನ ರೈತ ಕಿರಣ್ ಎರಡು ಎಕರೆಯಲ್ಲಿ ಕಬ್ಬು ಹಾಗೂ ಇತರ ಹಲವು ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ಅನೇಕ ರೈತರಿಗೆ ಅವರು ಮಾದರಿಯಾಗಿದ್ದಾರೆ. <br /> <br /> ಕೆಲ ವರ್ಷಗಳ ಹಿಂದೆ ಅವರು ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸಿ ಬೇಸಾಯ ಮಾಡುತ್ತಿದ್ದರು. ಆಗ ಅವರಿಗೆ ಹೆಚ್ಚಿನ ಆದಾಯ ಇರಲಿಲ್ಲ. ಬೇಸಾಯದ ಖರ್ಚು, ಗೊಬ್ಬರ, ಕೀಟನಾಶಕ ಇತ್ಯಾದಿಗಳಿಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದರು.<br /> <br /> ಅವರು ಒಮ್ಮೆ ರಾಜ್ಯ ರೈತ ಸಂಘದ ಆಶ್ರಯದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸುಭಾಷ ಪಾಳೇಕರ್ ಅವರ `ಶೂನ್ಯ ಬಂಡವಾಳದ ಬೇಸಾಯ~ ಶಿಬಿರದಲ್ಲಿ ಭಾಗವಹಿಸಿದರು. ಶಿಬಿರದಿಂದ ಅವರಿಗೆ ಲಾಭವಾಯಿತು. ಜೀವಾಮೃತ ಬಳಸಿ ಬೇಸಾಯ ಮಾಡುವುದರಿಂದ ರಾಸಾಯನಿಕ ಗೊಬ್ಬರ ಬಳಸುವ ಅಗತ್ಯ ಇಲ್ಲ ಎನ್ನುವುದನ್ನು ಅರಿತುಕೊಂಡರು. <br /> <br /> ಶೂನ್ಯ ಬಂಡವಾಳದ ಬೇಸಾಯ ಪದ್ಧತಿ ಅಳವಡಿಸಿಕೊಂಡ ರೈತರ ಆದಾಯ ಹೆಚ್ಚಾಗಿರುವುದು ಅವರ ಗಮನಕ್ಕೆ ಬಂದಿತ್ತು. ಈ ಪದ್ಧತಿಯನ್ನೂ ಅವರೂ ಅನುಸರಿಸಿದರು. ಬಿತ್ತನೆ ಕಬ್ಬನ್ನೂ ಬೆಳೆದುಕೊಳ್ಳಲು ನಿರ್ಧರಿಸಿದರು.<br /> <br /> ಕಬ್ಬಿನ ನಡುವೆ ಈರುಳ್ಳಿ, ಅಲಸಂದೆ, ಮೆಣಸಿನಕಾಯಿ, ಅವರೆ, ಬೆಳ್ಳುಳ್ಳಿ ಇತ್ಯಾದಿಗಳನ್ನು ಮಿಶ್ರ ಬೆಳೆಯಾಗಿ ಬೆಳೆದಿದ್ದಾರೆ. ಎಲ್ಲ ಬೆಳೆಗಳಿಗೂ ಜೀವಾಮೃತ ಹಾಕಿದ್ದಾರೆ.<br /> <br /> ಮೊದಲ ಮೂರು ತಿಂಗಳು ಕಬ್ಬಿನ ಸಾಲು ಸೇರಿದಂತೆ ಉಳಿದ ಎಲ್ಲ ಮಿಶ್ರ ಬೆಳೆಗಳಿಗೂ ನೀರು ಹರಿಸಿದರು. ಹದಿನೈದು ದಿನಕ್ಕೊಮ್ಮೆ ಜೀವಾಮೃತ ಕೊಟ್ಟರು. ಮೂರು ತಿಂಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಅಲಸಂದೆ ಫಸಲು ಪಡೆದರು. <br /> <br /> ಆನಂತರ ಕಬ್ಬಿನ ಜತೆಯಲ್ಲಿ ಉಳಿದ ಮೆಣಸಿನ ಗಿಡಗಳಿಗೆ ಮಾತ್ರ ನೀರುಣಿಸಬೇಕು. ಅವರ ಹೊಲದ ಕಬ್ಬು ಹನ್ನೆರಡು ಅಡಿಗಿಂತ ಎತ್ತರಕ್ಕೆ ಬೆಳೆದಿದ್ದವು. ಒಂದೊಂದು ಕಬ್ಬಿನ ಜಲ್ಲೆ ತೂಕ 5ರಿಂದ 6 ಕೆ.ಜಿ. ತೂಗುತ್ತಿದ್ದವು.<br /> <br /> ಕಬ್ಬನ್ನು ದಕ್ಷಿಣೋತ್ತರವಾಗಿ ನಾಟಿ ಮಾಡಿದ್ದಾರೆ. ಸಾಲುಗಳಲ್ಲಿ 2 ಅಡಿಗೊಂದರಂತೆ ನಾಟಿ ಮಾಡಿದ್ದರು. ದಕ್ಷಿಣೋತ್ತರವಾಗಿ 8 ಅಡಿಗಳ ಅಂತರದ ನಡುವೆ 5 ಸಾಲುಗಳನ್ನು ಮಾಡಿ, ಆ ಸಾಲುಗಳಲ್ಲಿ ಈರುಳ್ಳಿ, ಅಲಸಂದೆ, ಮೆಣಸಿನಕಾಯಿ, ಬೆಳ್ಳುಳ್ಳಿ ಬೆಳೆದರು.<br /> <br /> ಇವೆಲ್ಲ ಅಲ್ಪಾವಧಿಯ ಬೆಳೆಗಳು. ಈ 5 ಸಾಲುಗಳ ಪೈಕಿ ನಿರ್ದಿಷ್ಟಪಡಿಸಿದ ಎರಡು ಸಾಲುಗಳಲ್ಲಿ ದ್ವಿದಳ ಧಾನ್ಯದ ಬೆಳೆಗಳು ಇರುವಂತೆ ನೋಡಿಕೊಂಡರು. ಅಲಸಂದೆ, ಅವರೆ, ಹುರುಳಿ, ಉದ್ದು, ಹೆಸರು, ಕಡಲೆ, ನೆಲಗಡಲೆ, ಬೀನ್ಸ್ ಮತ್ತಿತರ ದ್ವಿದಳ ಧಾನ್ಯಗಳನ್ನು ಬೆಳೆಯಬಹುದು. <br /> <br /> ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ ಬೆಳೆಗಳಿಗೆ ಬದಲಾಗಿ ಬೇರೆ ಯಾವುದೇ ತರಕಾರಿ, ಸೊಪ್ಪು, ಗೆಡ್ಡೆ,ಗೆಣಸನ್ನೂ ಬೆಳೆಯಬಹುದು. ಕಬ್ಬಿಗೆ ಅನುಸರಿಸುವ ನೀರಾವರಿ ಕ್ರಮವನ್ನೇ ಯಾವ ಬೆಳೆಗೆ ಬೇಕಾದರೂ ಬಳಸಬಹುದು~ ಎನ್ನುತ್ತಾರೆ ಕಿರಣ್.<br /> <br /> ಮೈಸೂರು ಸುತ್ತಮುತ್ತ ರೈತರು ರಾಸಾಯನಿಕ ಗೊಬ್ಬರ ಬಳಸುತ್ತಾರೆ. ಕಿರಣ್ ರಾಸಾಯನಿಕ ಗೊಬ್ಬರಕ್ಕೆ ಖರ್ಚು ಮಾಡುತ್ತಿದ್ದ ಹಣ ಉಳಿತಾಯವಾಗಿದೆ. <br /> <br /> ಅಲ್ಪಾವಧಿಯ ಮಿಶ್ರ ಬೆಳೆಗಳಿಂದ ಸುಮಾರು ಮೂವತ್ತು ಸಾವಿರ ರೂಪಾಯಿ ಆದಾಯ ಗಳಿಸಿದ್ದಾರೆ. ಸುಮಾರು 60 ಟನ್ಗಳಷ್ಟು ಕಬ್ಬು ಬೆಳೆದಿದ್ದಾರೆ. ಈ ಬೇಸಾಯ ವಿಧಾನದಿಂದ ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎನ್ನುತ್ತಾರೆ ಕಿರಣ್.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು ತಾಲ್ಲೂಕಿನ ಬನ್ನೂರಿನ ರೈತ ಕಿರಣ್ ಎರಡು ಎಕರೆಯಲ್ಲಿ ಕಬ್ಬು ಹಾಗೂ ಇತರ ಹಲವು ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ಅನೇಕ ರೈತರಿಗೆ ಅವರು ಮಾದರಿಯಾಗಿದ್ದಾರೆ. <br /> <br /> ಕೆಲ ವರ್ಷಗಳ ಹಿಂದೆ ಅವರು ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸಿ ಬೇಸಾಯ ಮಾಡುತ್ತಿದ್ದರು. ಆಗ ಅವರಿಗೆ ಹೆಚ್ಚಿನ ಆದಾಯ ಇರಲಿಲ್ಲ. ಬೇಸಾಯದ ಖರ್ಚು, ಗೊಬ್ಬರ, ಕೀಟನಾಶಕ ಇತ್ಯಾದಿಗಳಿಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದರು.<br /> <br /> ಅವರು ಒಮ್ಮೆ ರಾಜ್ಯ ರೈತ ಸಂಘದ ಆಶ್ರಯದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸುಭಾಷ ಪಾಳೇಕರ್ ಅವರ `ಶೂನ್ಯ ಬಂಡವಾಳದ ಬೇಸಾಯ~ ಶಿಬಿರದಲ್ಲಿ ಭಾಗವಹಿಸಿದರು. ಶಿಬಿರದಿಂದ ಅವರಿಗೆ ಲಾಭವಾಯಿತು. ಜೀವಾಮೃತ ಬಳಸಿ ಬೇಸಾಯ ಮಾಡುವುದರಿಂದ ರಾಸಾಯನಿಕ ಗೊಬ್ಬರ ಬಳಸುವ ಅಗತ್ಯ ಇಲ್ಲ ಎನ್ನುವುದನ್ನು ಅರಿತುಕೊಂಡರು. <br /> <br /> ಶೂನ್ಯ ಬಂಡವಾಳದ ಬೇಸಾಯ ಪದ್ಧತಿ ಅಳವಡಿಸಿಕೊಂಡ ರೈತರ ಆದಾಯ ಹೆಚ್ಚಾಗಿರುವುದು ಅವರ ಗಮನಕ್ಕೆ ಬಂದಿತ್ತು. ಈ ಪದ್ಧತಿಯನ್ನೂ ಅವರೂ ಅನುಸರಿಸಿದರು. ಬಿತ್ತನೆ ಕಬ್ಬನ್ನೂ ಬೆಳೆದುಕೊಳ್ಳಲು ನಿರ್ಧರಿಸಿದರು.<br /> <br /> ಕಬ್ಬಿನ ನಡುವೆ ಈರುಳ್ಳಿ, ಅಲಸಂದೆ, ಮೆಣಸಿನಕಾಯಿ, ಅವರೆ, ಬೆಳ್ಳುಳ್ಳಿ ಇತ್ಯಾದಿಗಳನ್ನು ಮಿಶ್ರ ಬೆಳೆಯಾಗಿ ಬೆಳೆದಿದ್ದಾರೆ. ಎಲ್ಲ ಬೆಳೆಗಳಿಗೂ ಜೀವಾಮೃತ ಹಾಕಿದ್ದಾರೆ.<br /> <br /> ಮೊದಲ ಮೂರು ತಿಂಗಳು ಕಬ್ಬಿನ ಸಾಲು ಸೇರಿದಂತೆ ಉಳಿದ ಎಲ್ಲ ಮಿಶ್ರ ಬೆಳೆಗಳಿಗೂ ನೀರು ಹರಿಸಿದರು. ಹದಿನೈದು ದಿನಕ್ಕೊಮ್ಮೆ ಜೀವಾಮೃತ ಕೊಟ್ಟರು. ಮೂರು ತಿಂಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಅಲಸಂದೆ ಫಸಲು ಪಡೆದರು. <br /> <br /> ಆನಂತರ ಕಬ್ಬಿನ ಜತೆಯಲ್ಲಿ ಉಳಿದ ಮೆಣಸಿನ ಗಿಡಗಳಿಗೆ ಮಾತ್ರ ನೀರುಣಿಸಬೇಕು. ಅವರ ಹೊಲದ ಕಬ್ಬು ಹನ್ನೆರಡು ಅಡಿಗಿಂತ ಎತ್ತರಕ್ಕೆ ಬೆಳೆದಿದ್ದವು. ಒಂದೊಂದು ಕಬ್ಬಿನ ಜಲ್ಲೆ ತೂಕ 5ರಿಂದ 6 ಕೆ.ಜಿ. ತೂಗುತ್ತಿದ್ದವು.<br /> <br /> ಕಬ್ಬನ್ನು ದಕ್ಷಿಣೋತ್ತರವಾಗಿ ನಾಟಿ ಮಾಡಿದ್ದಾರೆ. ಸಾಲುಗಳಲ್ಲಿ 2 ಅಡಿಗೊಂದರಂತೆ ನಾಟಿ ಮಾಡಿದ್ದರು. ದಕ್ಷಿಣೋತ್ತರವಾಗಿ 8 ಅಡಿಗಳ ಅಂತರದ ನಡುವೆ 5 ಸಾಲುಗಳನ್ನು ಮಾಡಿ, ಆ ಸಾಲುಗಳಲ್ಲಿ ಈರುಳ್ಳಿ, ಅಲಸಂದೆ, ಮೆಣಸಿನಕಾಯಿ, ಬೆಳ್ಳುಳ್ಳಿ ಬೆಳೆದರು.<br /> <br /> ಇವೆಲ್ಲ ಅಲ್ಪಾವಧಿಯ ಬೆಳೆಗಳು. ಈ 5 ಸಾಲುಗಳ ಪೈಕಿ ನಿರ್ದಿಷ್ಟಪಡಿಸಿದ ಎರಡು ಸಾಲುಗಳಲ್ಲಿ ದ್ವಿದಳ ಧಾನ್ಯದ ಬೆಳೆಗಳು ಇರುವಂತೆ ನೋಡಿಕೊಂಡರು. ಅಲಸಂದೆ, ಅವರೆ, ಹುರುಳಿ, ಉದ್ದು, ಹೆಸರು, ಕಡಲೆ, ನೆಲಗಡಲೆ, ಬೀನ್ಸ್ ಮತ್ತಿತರ ದ್ವಿದಳ ಧಾನ್ಯಗಳನ್ನು ಬೆಳೆಯಬಹುದು. <br /> <br /> ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ ಬೆಳೆಗಳಿಗೆ ಬದಲಾಗಿ ಬೇರೆ ಯಾವುದೇ ತರಕಾರಿ, ಸೊಪ್ಪು, ಗೆಡ್ಡೆ,ಗೆಣಸನ್ನೂ ಬೆಳೆಯಬಹುದು. ಕಬ್ಬಿಗೆ ಅನುಸರಿಸುವ ನೀರಾವರಿ ಕ್ರಮವನ್ನೇ ಯಾವ ಬೆಳೆಗೆ ಬೇಕಾದರೂ ಬಳಸಬಹುದು~ ಎನ್ನುತ್ತಾರೆ ಕಿರಣ್.<br /> <br /> ಮೈಸೂರು ಸುತ್ತಮುತ್ತ ರೈತರು ರಾಸಾಯನಿಕ ಗೊಬ್ಬರ ಬಳಸುತ್ತಾರೆ. ಕಿರಣ್ ರಾಸಾಯನಿಕ ಗೊಬ್ಬರಕ್ಕೆ ಖರ್ಚು ಮಾಡುತ್ತಿದ್ದ ಹಣ ಉಳಿತಾಯವಾಗಿದೆ. <br /> <br /> ಅಲ್ಪಾವಧಿಯ ಮಿಶ್ರ ಬೆಳೆಗಳಿಂದ ಸುಮಾರು ಮೂವತ್ತು ಸಾವಿರ ರೂಪಾಯಿ ಆದಾಯ ಗಳಿಸಿದ್ದಾರೆ. ಸುಮಾರು 60 ಟನ್ಗಳಷ್ಟು ಕಬ್ಬು ಬೆಳೆದಿದ್ದಾರೆ. ಈ ಬೇಸಾಯ ವಿಧಾನದಿಂದ ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎನ್ನುತ್ತಾರೆ ಕಿರಣ್.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>