<p>ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ನೆಗಡಿ, ಜ್ವರದಿಂದ ಹಿಡಿದು ಸಕ್ಕರೆ ಕಾಯಿಲೆ, ಮಂಡಿನೋವು, ಕೀಲುನೋವು, ಅಸ್ತಮಾ, ಮಲಬದ್ಧತೆ, ಗ್ಯಾಸ್ಟ್ರಿಕ್, ಚರ್ಮರೋಗ, ಹೃದಯದ ಕಾಯಿಲೆ, ಕ್ಯಾನ್ಸರ್ನಂತಹ ಮಾರಕ ರೋಗಕ್ಕೂ ಪರಿಹಾರವನ್ನು ಒದಗಿಸಬಲ್ಲ, ಮನೆಯಲ್ಲಿಯೇ ದೊರಕಿಸಿಕೊಳ್ಳಬಹುದಾದ ಔಷಧ ಎಂದರೆ ಗೋಧಿ ಹುಲ್ಲು.<br /> <br /> ಇದರ ರಸ ಅನ್ನಾಂಗಗಳು, ಖನಿಜಾಂಶಗಳು, ವಿಟಮಿನ್ಗಳು, `ಸಿ' ಜೀವಸತ್ವ, ಕ್ಯಾಲ್ಸಿಯಂ, ಕಬ್ಬಿಣಾಂಶವನ್ನು ಹೊಂದಿದ್ದು, ಸಂಪೂರ್ಣ ಆಹಾರ ಎಂದೇ ಬಿಂಬಿತ. ಈ ರಸವು ಹಾಲು. ಮೊಸರು, ಮಾಂಸ, ಮೊಳಕೆ ಕಾಳುಗಳಿಗಿಂತಲೂ ಸತ್ವಯುತ. ಒಂದು ಕೆ.ಜಿ.ಯಷ್ಟು ಗೋಧಿಹುಲ್ಲು ಇರುವ ಜೀವಸತ್ವವು ಸುಮಾರು 20-22 ಕೆ.ಜಿ.ಯಷ್ಟು ಹಸಿರು ತರಕಾರಿಯಲ್ಲಿನ ಜೀವಸತ್ವಕ್ಕೆ ಸಮ.<br /> <br /> ಬೇರೆಲ್ಲ ಸೊಪ್ಪುಗಳಿಗಿಂತಲೂ ಅಧಿಕವಾದ ಪತ್ರ ಹರಿತ್ತು (ಕ್ಲೊರೋಫಿಲ್) ಈ ಹುಲ್ಲಿನಲ್ಲಿದೆ. ಈ ಹುಲ್ಲಿನ ರಸವು ಮಾನವ ರಕ್ತದ ಹಿಮೊಗ್ಲೋಬಿನ್ ಆಗಿ ಬಹು ಬೇಗ ಪರಿವರ್ತಿತವಾಗುತ್ತದೆ. ರಕ್ತದಲ್ಲಿನ ವಿಷವಸ್ತುಗಳನ್ನು ಹೊರಹಾಕಿ ರಕ್ತವನ್ನು ಶುದ್ಧೀಕರಿಸಿ ರಕ್ತಪರಿಚಲನೆಯು ಸುಗಮವಾಗುವಂತೆ ಮಾಡುತ್ತದೆ. ಹೃದಯ, ಶ್ವಾಸಕೋಶ, ಮೂತ್ರಪಿಂಡಗಳು ಸರಾಗವಾಗಿ ಕೆಲಸ ಮಾಡಲು ಈ ರಸದ ಸೇವನೆ ಬಹಳ ಉಪಯುಕ್ತ.<br /> <br /> ಬಿಟಾ ಕ್ಯಾರೊಟಿನ್ ಅಧಿಕ ಪ್ರಮಾಣದಲ್ಲಿರುವ ಈ ಗೋಧಿಹುಲ್ಲಿನ ರಸವು ವಿಟಮಿನ್ `ಎ' ಕೊರತೆಯನ್ನು ನೀಗುತ್ತದೆ. ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲದ ಈ ರಸದಲ್ಲಿ ಅಧಿಕ ನಾರಿನಂಶವಿದೆ. ಇದು ದೇಹದಲ್ಲಿ ಬೊಜ್ಜು ಸೇರದಂತೆ ನೋಡಿಕೊಳ್ಳುತ್ತದೆ. ಬೊಜ್ಜು ಸಂಬಂಧಿ ರೋಗಗಳನ್ನು ದೂರವಿಡುತ್ತದೆ. ಇಂಥ ಒಂದು ಅದ್ಭುತ ಶಕ್ತಿಯುಳ್ಳ ಗೋಧಿಹುಲ್ಲನ್ನು ಮನೆಯಲ್ಲಿಯೇ ಅತಿ ಸರಳ ವಿಧಾನದಲ್ಲಿ ಬೆಳೆಯಬಹುದು.<br /> <br /> <strong>ಹೀಗೆ ಬೆಳೆಯಿರಿ</strong><br /> ಮನೆಯಂಗಳದಲ್ಲಿ ಜಾಗವಿದ್ದವರು ಮಣ್ಣಿನಲ್ಲಿ 7-8 ಮಡಿಗಳನ್ನು ಮಾಡಿಕೊಳ್ಳಿ. ಅದಿಲ್ಲವಾದರೆ ಅಗಲವಾದ ಬಾಯಿಯುಳ್ಳ 7-8 ಕುಂಡಗಳನ್ನುಇದಕ್ಕಾಗಿ ಬಳಸಬಹುದು. ಮೊಳಕೆ ಬರಿಸಿದ ಗೋಧಿಕಾಳುಗಳನ್ನು ಮೊದಲು ಒಂದು ಮಡಿ ಅಥವಾ ಕುಂಡಕ್ಕೆ ಹಾಕಿ. ದಿನ ಬಿಟ್ಟು ದಿನ ಬೇರೆ ಬೇರೆ ಕುಂಡಗಳಿಗೆ ಇದೇ ರೀತಿಯಲ್ಲಿ ಬಿತ್ತನೆ ಮಾಡಿ. ಹೀಗೆ ಏಳೆಂಟು ದಿನಗಳಾದ ಮೇಲೆ ಮೊದಲು ಬಿತ್ತನೆ ಮಾಡಿದ ಮಡಿ/ಕುಂಡದಿಂದ ಹುಲ್ಲನ್ನು ಕಿತ್ತು ಸ್ವಲ್ಪ ನೀರು ಸೇರಿಸಿ ಮಿಕ್ಸಿಗೆ ಹಾಕಿ ಚೆನ್ನಾಗಿ ಅರೆದು, ಸೋಸಿ ರಸವನ್ನು ತಯಾರಿಸಿಕೊಳ್ಳಿ. ಆ ರಸವನ್ನು ತಕ್ಷಣವೇ ಕುಡಿಯಬೇಕು. ಹುಲ್ಲನ್ನು ತೆಗೆದ ಅದೇ ಜಾಗದಲ್ಲಿ ಮಣ್ಣನ್ನು ಸ್ವಲ್ಪ ಕೆದರಿ ಮತ್ತೆ ಗೋಧಿಕಾಳುಗಳನ್ನು ಬಿತ್ತಿ.<br /> <br /> ಮರುದಿನ ಎರಡನೆಯ ಮಡಿ/ ಕುಂಡದ ಹುಲ್ಲನ್ನು ತೆಗೆದು ರಸವನ್ನು ತಯಾರಿಸಿ. ಈ ರೀತಿಯಲ್ಲಿ ಒಂದು ನಿಯಮಿತ ಅವಧಿಯವರೆಗೂ ಅಂದರೆ 30, 45 ಅಥವಾ ನಿಮಗೆ ಬೇಕೆನಿಸಿದಷ್ಟು ದಿನಗಳವರೆಗೂ ಗೋಧಿಯ ರಸ ನಿಮಗೆ ಲಭ್ಯ.<br /> <br /> ಆರೋಗ್ಯವಂತರು ತಮ್ಮ ಆರೋಗ್ಯವರ್ಧನೆಗೆ 30ರಿಂದ 50 ಎಂ.ಎಲ್ನಷ್ಟು ಈ ಹುಲ್ಲಿನ ರಸವನ್ನು ದಿನಾಲೂ ಖಾಲಿ ಹೊಟ್ಟೆಗೆ ಒಂದು ಬಾರಿ ತೆಗೆದುಕೊಳ್ಳಬಹುದಾಗಿದೆ. ಕಾಯಿಲೆಯಿದ್ದವರು ವೈದ್ಯರ ಸಲಹೆಯ ಮೇರೆಗೆ ಇಂತಿಷ್ಟು ದಿನ ಎಂದು ಕ್ರಮಬದ್ಧವಾಗಿ ತೆಗೆದುಕೊಳ್ಳಬೇಕಾಗುತ್ತದೆ.<br /> <br /> ಆರು ಇಂಚಿಗಿಂತ ಎತ್ತರ ಬೆಳೆದ ಹುಲ್ಲಿನ ರಸ ಅಥವಾ ಹುಲ್ಲನ್ನು ಅರೆದು ತೆಗೆದ ಅರ್ಧಗಂಟೆಯ ನಂತರದ ರಸ ಸತ್ವಹೀನವಾಗಿಬಿಡುತ್ತದೆ. ಸ್ವಾಭಾವಿಕವಾಗಿಯೇ ಸ್ವಲ್ಪ ಸಿಹಿಯುಳ್ಳ ಈ ರಸಕ್ಕೆ ಸಕ್ಕರೆ, ಬೆಲ್ಲ, ನಿಂಬೆರಸ ಹೀಗೆ ಏನನ್ನೂ ಬೆರೆಸದೆ ಸೇವಿಸಿದರೆ ಹೆಚ್ಚು ಪರಿಣಾಮಕಾರಿ ಫಲಿತಾಂಶವನ್ನು ನೀಡುತ್ತದೆ. ನಿರೋಗಿಗಳಿಂದ ರೋಗಿಗಳವರೆಗೆ, ಮಕ್ಕಳಿಂದ ಮುದುಕರವರೆಗೆ ಎಲ್ಲರೂ ಸೇವಿಸಲೇಬೇಕಾದಂತಹದ್ದು ಈ ಗೋಧಿಹುಲ್ಲು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ನೆಗಡಿ, ಜ್ವರದಿಂದ ಹಿಡಿದು ಸಕ್ಕರೆ ಕಾಯಿಲೆ, ಮಂಡಿನೋವು, ಕೀಲುನೋವು, ಅಸ್ತಮಾ, ಮಲಬದ್ಧತೆ, ಗ್ಯಾಸ್ಟ್ರಿಕ್, ಚರ್ಮರೋಗ, ಹೃದಯದ ಕಾಯಿಲೆ, ಕ್ಯಾನ್ಸರ್ನಂತಹ ಮಾರಕ ರೋಗಕ್ಕೂ ಪರಿಹಾರವನ್ನು ಒದಗಿಸಬಲ್ಲ, ಮನೆಯಲ್ಲಿಯೇ ದೊರಕಿಸಿಕೊಳ್ಳಬಹುದಾದ ಔಷಧ ಎಂದರೆ ಗೋಧಿ ಹುಲ್ಲು.<br /> <br /> ಇದರ ರಸ ಅನ್ನಾಂಗಗಳು, ಖನಿಜಾಂಶಗಳು, ವಿಟಮಿನ್ಗಳು, `ಸಿ' ಜೀವಸತ್ವ, ಕ್ಯಾಲ್ಸಿಯಂ, ಕಬ್ಬಿಣಾಂಶವನ್ನು ಹೊಂದಿದ್ದು, ಸಂಪೂರ್ಣ ಆಹಾರ ಎಂದೇ ಬಿಂಬಿತ. ಈ ರಸವು ಹಾಲು. ಮೊಸರು, ಮಾಂಸ, ಮೊಳಕೆ ಕಾಳುಗಳಿಗಿಂತಲೂ ಸತ್ವಯುತ. ಒಂದು ಕೆ.ಜಿ.ಯಷ್ಟು ಗೋಧಿಹುಲ್ಲು ಇರುವ ಜೀವಸತ್ವವು ಸುಮಾರು 20-22 ಕೆ.ಜಿ.ಯಷ್ಟು ಹಸಿರು ತರಕಾರಿಯಲ್ಲಿನ ಜೀವಸತ್ವಕ್ಕೆ ಸಮ.<br /> <br /> ಬೇರೆಲ್ಲ ಸೊಪ್ಪುಗಳಿಗಿಂತಲೂ ಅಧಿಕವಾದ ಪತ್ರ ಹರಿತ್ತು (ಕ್ಲೊರೋಫಿಲ್) ಈ ಹುಲ್ಲಿನಲ್ಲಿದೆ. ಈ ಹುಲ್ಲಿನ ರಸವು ಮಾನವ ರಕ್ತದ ಹಿಮೊಗ್ಲೋಬಿನ್ ಆಗಿ ಬಹು ಬೇಗ ಪರಿವರ್ತಿತವಾಗುತ್ತದೆ. ರಕ್ತದಲ್ಲಿನ ವಿಷವಸ್ತುಗಳನ್ನು ಹೊರಹಾಕಿ ರಕ್ತವನ್ನು ಶುದ್ಧೀಕರಿಸಿ ರಕ್ತಪರಿಚಲನೆಯು ಸುಗಮವಾಗುವಂತೆ ಮಾಡುತ್ತದೆ. ಹೃದಯ, ಶ್ವಾಸಕೋಶ, ಮೂತ್ರಪಿಂಡಗಳು ಸರಾಗವಾಗಿ ಕೆಲಸ ಮಾಡಲು ಈ ರಸದ ಸೇವನೆ ಬಹಳ ಉಪಯುಕ್ತ.<br /> <br /> ಬಿಟಾ ಕ್ಯಾರೊಟಿನ್ ಅಧಿಕ ಪ್ರಮಾಣದಲ್ಲಿರುವ ಈ ಗೋಧಿಹುಲ್ಲಿನ ರಸವು ವಿಟಮಿನ್ `ಎ' ಕೊರತೆಯನ್ನು ನೀಗುತ್ತದೆ. ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲದ ಈ ರಸದಲ್ಲಿ ಅಧಿಕ ನಾರಿನಂಶವಿದೆ. ಇದು ದೇಹದಲ್ಲಿ ಬೊಜ್ಜು ಸೇರದಂತೆ ನೋಡಿಕೊಳ್ಳುತ್ತದೆ. ಬೊಜ್ಜು ಸಂಬಂಧಿ ರೋಗಗಳನ್ನು ದೂರವಿಡುತ್ತದೆ. ಇಂಥ ಒಂದು ಅದ್ಭುತ ಶಕ್ತಿಯುಳ್ಳ ಗೋಧಿಹುಲ್ಲನ್ನು ಮನೆಯಲ್ಲಿಯೇ ಅತಿ ಸರಳ ವಿಧಾನದಲ್ಲಿ ಬೆಳೆಯಬಹುದು.<br /> <br /> <strong>ಹೀಗೆ ಬೆಳೆಯಿರಿ</strong><br /> ಮನೆಯಂಗಳದಲ್ಲಿ ಜಾಗವಿದ್ದವರು ಮಣ್ಣಿನಲ್ಲಿ 7-8 ಮಡಿಗಳನ್ನು ಮಾಡಿಕೊಳ್ಳಿ. ಅದಿಲ್ಲವಾದರೆ ಅಗಲವಾದ ಬಾಯಿಯುಳ್ಳ 7-8 ಕುಂಡಗಳನ್ನುಇದಕ್ಕಾಗಿ ಬಳಸಬಹುದು. ಮೊಳಕೆ ಬರಿಸಿದ ಗೋಧಿಕಾಳುಗಳನ್ನು ಮೊದಲು ಒಂದು ಮಡಿ ಅಥವಾ ಕುಂಡಕ್ಕೆ ಹಾಕಿ. ದಿನ ಬಿಟ್ಟು ದಿನ ಬೇರೆ ಬೇರೆ ಕುಂಡಗಳಿಗೆ ಇದೇ ರೀತಿಯಲ್ಲಿ ಬಿತ್ತನೆ ಮಾಡಿ. ಹೀಗೆ ಏಳೆಂಟು ದಿನಗಳಾದ ಮೇಲೆ ಮೊದಲು ಬಿತ್ತನೆ ಮಾಡಿದ ಮಡಿ/ಕುಂಡದಿಂದ ಹುಲ್ಲನ್ನು ಕಿತ್ತು ಸ್ವಲ್ಪ ನೀರು ಸೇರಿಸಿ ಮಿಕ್ಸಿಗೆ ಹಾಕಿ ಚೆನ್ನಾಗಿ ಅರೆದು, ಸೋಸಿ ರಸವನ್ನು ತಯಾರಿಸಿಕೊಳ್ಳಿ. ಆ ರಸವನ್ನು ತಕ್ಷಣವೇ ಕುಡಿಯಬೇಕು. ಹುಲ್ಲನ್ನು ತೆಗೆದ ಅದೇ ಜಾಗದಲ್ಲಿ ಮಣ್ಣನ್ನು ಸ್ವಲ್ಪ ಕೆದರಿ ಮತ್ತೆ ಗೋಧಿಕಾಳುಗಳನ್ನು ಬಿತ್ತಿ.<br /> <br /> ಮರುದಿನ ಎರಡನೆಯ ಮಡಿ/ ಕುಂಡದ ಹುಲ್ಲನ್ನು ತೆಗೆದು ರಸವನ್ನು ತಯಾರಿಸಿ. ಈ ರೀತಿಯಲ್ಲಿ ಒಂದು ನಿಯಮಿತ ಅವಧಿಯವರೆಗೂ ಅಂದರೆ 30, 45 ಅಥವಾ ನಿಮಗೆ ಬೇಕೆನಿಸಿದಷ್ಟು ದಿನಗಳವರೆಗೂ ಗೋಧಿಯ ರಸ ನಿಮಗೆ ಲಭ್ಯ.<br /> <br /> ಆರೋಗ್ಯವಂತರು ತಮ್ಮ ಆರೋಗ್ಯವರ್ಧನೆಗೆ 30ರಿಂದ 50 ಎಂ.ಎಲ್ನಷ್ಟು ಈ ಹುಲ್ಲಿನ ರಸವನ್ನು ದಿನಾಲೂ ಖಾಲಿ ಹೊಟ್ಟೆಗೆ ಒಂದು ಬಾರಿ ತೆಗೆದುಕೊಳ್ಳಬಹುದಾಗಿದೆ. ಕಾಯಿಲೆಯಿದ್ದವರು ವೈದ್ಯರ ಸಲಹೆಯ ಮೇರೆಗೆ ಇಂತಿಷ್ಟು ದಿನ ಎಂದು ಕ್ರಮಬದ್ಧವಾಗಿ ತೆಗೆದುಕೊಳ್ಳಬೇಕಾಗುತ್ತದೆ.<br /> <br /> ಆರು ಇಂಚಿಗಿಂತ ಎತ್ತರ ಬೆಳೆದ ಹುಲ್ಲಿನ ರಸ ಅಥವಾ ಹುಲ್ಲನ್ನು ಅರೆದು ತೆಗೆದ ಅರ್ಧಗಂಟೆಯ ನಂತರದ ರಸ ಸತ್ವಹೀನವಾಗಿಬಿಡುತ್ತದೆ. ಸ್ವಾಭಾವಿಕವಾಗಿಯೇ ಸ್ವಲ್ಪ ಸಿಹಿಯುಳ್ಳ ಈ ರಸಕ್ಕೆ ಸಕ್ಕರೆ, ಬೆಲ್ಲ, ನಿಂಬೆರಸ ಹೀಗೆ ಏನನ್ನೂ ಬೆರೆಸದೆ ಸೇವಿಸಿದರೆ ಹೆಚ್ಚು ಪರಿಣಾಮಕಾರಿ ಫಲಿತಾಂಶವನ್ನು ನೀಡುತ್ತದೆ. ನಿರೋಗಿಗಳಿಂದ ರೋಗಿಗಳವರೆಗೆ, ಮಕ್ಕಳಿಂದ ಮುದುಕರವರೆಗೆ ಎಲ್ಲರೂ ಸೇವಿಸಲೇಬೇಕಾದಂತಹದ್ದು ಈ ಗೋಧಿಹುಲ್ಲು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>